Webdunia - Bharat's app for daily news and videos

Install App

ತಮಿಳು ಚಿತ್ರ ನಟ ಧನುಷ್ ತಮ್ಮ ಮಗನೆಂದು ಮಧುರೈ ದಂಪತಿ ನ್ಯಾಯಾಲಯಕ್ಕೆ ದೂರು

Webdunia
ಶನಿವಾರ, 26 ನವೆಂಬರ್ 2016 (09:27 IST)
ಮಧುರೈ: ತಮಿಳು ಚಿತ್ರ ನಟ, ರಜನೀಕಾಂತ್ ಅಳಿಯ ಧನುಷ್ ತಮ್ಮ ಪುತ್ರ,ಆತನನ್ನು ನಮಗೆ ಮರಳಿಸಿ ಎಂದು ಮಧುರೈಯ ದಂಪತಿಯೊಬ್ಬರು ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ಇದುವರೆಗೆ ಧನುಷ್ ಚಿತ್ರ ನಿರ್ದೇಶಕ ಕಸ್ತೂರಿ ರಾಜನ್ ಅವರೆಂದೇ ಹೇಳಲಾಗಿತ್ತು. ಇದೀಗ ಧನುಷ್ ಪೋಷಕರ ಬಗ್ಗೆ ವಿವಾದವೆದ್ದಿದೆ.

ಮಧುರೈ ನಿವಾಸಿಗಳಾದ ಕದಿರೇಷನ್ ಮತ್ತು ಮೀನಾಕ್ಷಿ ಎಂಬ ವೃದ್ಧ ದಂಪತಿ ನ್ಯಾಯಾಲಯಕ್ಕೆ ದೂರು ನೀಡಿದವರು. ಅವರು ಹೇಳುವ ಪ್ರಕಾರ, ಧನುಷ್ ಅವರ ಮೂವರು ಪತ್ರರಲ್ಲಿ ಒಬ್ಬರಂತೆ. ಧನುಷ್ ಮಧುರೈಯ ರಾಜಾಜಿ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ್ದರು ಎಂಬುದು ಅವರ ವಾದ.

ಧನುಷ್ ಜನ್ಮ ನಾಮ ಕಲೈಸೆಲ್ವಂ ಅಂತೆ. ಎಸ್ಎಸ್ಎಲ್ ಸಿ ಓದಿದ ನಂತರ ಧನುಷ್ ಪ್ಲಸ್ ಒನ್ ತರಗತಿಗೆ ಖಾಸಗಿ ಶಾಲೆಯೊಂದರಲ್ಲಿ ಸೇರಿದ್ದರಂತೆ. ಆದರೆ ವಿದ್ಯಾಭ್ಯಾಸ ಅರ್ಧಕ್ಕೆ ಮೊಟಕುಗೊಳಿಸಿ ಕಸ್ತೂರಿ ರಾಜನ್ ಜತೆ ಸೇರಿಕೊಂಡರು ಎನ್ನುವುದು ದಂಪತಿಗಳು ಹೇಳುವ ವಾದ.

ನಂತರ ಕಸ್ತೂರಿ ರಾಜನ್ ನಿವಾಸಕ್ಕೆ ಧನುಷ್ ರನ್ನು ನೋಡಲು ಬಂದರೆ ಅವರು ಅವಕಾಶ ನೀಡುತ್ತಿರಲಿಲ್ಲ ಎಂದು ಕದಿರೇಷನ್ ದಂಪತಿ ಆರೋಪಿಸಿದ್ದಾರೆ. ಅಲ್ಲದೆ ತಮಗೆ ಇನ್ನಿಬ್ಬರು ಪುತ್ರರಿದ್ದರೂ, ಅವರು ಆರ್ಥಿಕವಾಗಿ ಅಸಮರ್ಥರಾಗಿರುವ ಹಿನ್ನಲೆಯಲ್ಲಿ ಧನುಷ್ ರಿಂದ ನಮ್ಮ ಜೀವನ ನಿರ್ವಹಣೆಗೆ 65 ಸಾವಿರ ತಿಂಗಳ ಮಸಾಶನ ಒದಗಿಸಿ ಎಂದು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ. ಈ ಹಿನ್ನಲೆಯಲ್ಲಿ ನ್ಯಾಯಾಲಯ ಧನುಷ್ ಗೆ ಜನವರಿ 22 ರಂದು ಹಾಜರಾಗಲು ಸೂಚನೆ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments