Select Your Language

Notifications

webdunia
webdunia
webdunia
webdunia

ಅದ್ಧೂರಿ ರಾಮು ಮುಂಬೈ ಚಿತ್ರದಲ್ಲಿ ಮದರಂಗಿ ಕೃಷ್ಣ

ಅದ್ಧೂರಿ ರಾಮು ಮುಂಬೈ ಚಿತ್ರದಲ್ಲಿ ಮದರಂಗಿ ಕೃಷ್ಣ
, ಶುಕ್ರವಾರ, 26 ಸೆಪ್ಟಂಬರ್ 2014 (09:39 IST)
ಕೋಟಿ  ರಾಮು ಎನ್ನುವ ಹೆಸರು ಪಡೆದ ಕನ್ನಡದ ವಿಶೇಷ ನಿರ್ಮಾಪಕ ರಾಮು.ಅದರಲ್ಲೂ ಅದ್ಧೂರಿ ಚಿತ್ರಗಳನ್ನು ನಿರ್ದೇಶನ ಮಾಡುವ ಸಾಹಸಿ . ಅವರು  ಎ ಕೆ 47 ಸಿನೆಮಾವನ್ನು ಮುಂಬೈ ನಗರದ ಹಿನ್ನಲೆಯಲ್ಲಿ ತಯಾರಿಸಿದ್ದರು. ಈಗ ಮತ್ತೊಮ್ಮೆ ಮುಂಬೈ ಬಾಗಿಲು ತಟ್ಟಿದ್ದಾರೆ.


ಅವರ ಹೊಸ ಚಿತ್ರದ ಹೆಸರು ಸಹಿತ  ಮುಂಬೈ. ಕಥೆಗಾರ ಎಸ್.ಆರ್.ರಮೇಶ್ ಕಥೆ ಹಾಗೂ ನಿರ್ದೇಶನ ಇರುವ ಈ ಚಿತ್ರಕ್ಕೆ ಮುಸ್ಸಂಜೆ ಮಾತು ವಿ.ಶ್ರೀಧರ್ ಸಂಗೀತ ನಿರ್ದೇಶನವಿದೆ. 
 
ಕೃಷ್ಣ ರುಕ್ಮಿಣಿ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಯಾದ ಕೃಷ್ಣ ಆ ಬಳಿಕ ಮದರಂಗಿ ಮುಖಾಂತರ ತಮ್ಮನ್ನು ಹಿರಿತೆರೆಗೆ ಅರ್ಪಿಸಿಕೊಂಡರು.  ಮುಂಬೈಗೆ ಅವರೇ ನಾಯಕ. ತೇಜು ನಾಯಕಿ ಆಗಿದ್ದಾರೆ. ಚಾಲೆಂಜಿಂಗ್ ಸ್ಟಾರ್  ದರ್ಶನ್  ಚಿಂಗಾರಿ ಚಿತ್ರದಲ್ಲಿ ನಾಯಕಿಯ ಸ್ನೇಹಿತೆಯಾಗಿ ಅಭಿನಯಿಸಿದ್ದರು ತೇಜು. ಮುಂಬೈ ಆಕೆಯನ್ನು  ಪೂರ್ಣ ಪ್ರಮಾಣದ ನಾಯಕಿಯಾಗಿ ಮಾಡಿದೆ.  ರಂಗಾಯಣ ರಘು ಮತ್ತು ಬುಲೆಟ್ ಪ್ರಕಾಶ್ ಅಲ್ಲದೆ ಆಶಿಷ್ ವಿದ್ಯಾರ್ಥಿ ಸಹ ಅಭಿನಯಿಸಿದ್ದಾರೆ.  ಅದ್ಧೂರಿ ನಿರ್ಮಾಣದಲ್ಲಿ ತಯಾರಾಗಲು ಸಿದ್ಧತೆ ನಡೆಸಿದೆ ಚಿತ್ರತಂಡ. ಸಧ್ಯದಲ್ಲೇ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು.. ತಂಡ ಮುಂಬೈ ಕಡೆಗೆ ಹೊರಡುತ್ತಾರೆ ಎನ್ನುವುದಷ್ಟೇ ಈ ಚಿತ್ರಕ್ಕೆ ಸಂಬಂಧಪಟ್ಟ ಸುದ್ದಿ.

Share this Story:

Follow Webdunia kannada