ಜನಪ್ರಿಯ ನಟ, ನಿರ್ದೇಶಕ ಸಾಧುಕೋಕಿಲ ಅವರ ಸಹೋದರರಾಗಿರುವ, ಹಾಸ್ಯ ಕಲಾವಿದ ಲಯೇಂದ್ರ ಅವರ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ.
ತಮ್ಮ ನಿರ್ಮಾಣದ 'ಶಂಭೋ ಮಹದೇವ' ಸಿನಿಮಾ ಡಿಜಿಟಲೈಸ್ ಮಾಡಿಕೊಡುವುದಾಗಿ 3 ಲಕ್ಷ ಹಣವನ್ನು ಪಡೆದುಕೊಂಡ ಲಯೇಂದ್ರ ಸಿನಿಮಾ ಡಿಜಿಟಲೈಸ್ ಮಾಡದೇ, ಹಣವನ್ನು ಕೂಡ ಹಿಂದಿರುಗಿಸದೇ ತಮಗೆ ಮೋಸ ಮಾಡಿದ್ದಾರೆ ಎಂದು ಆ ಚಿತ್ರದ ನಿರ್ಮಾಪಕ ಕುಮಾರ್ ಆರೋಪಿಸಿದ್ದಾರೆ.
ಸಾಧು ಸಹೋದರ ಬಿಗ್ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಎರಡು ತಿಂಗಳ ಮೊದಲೇ ಅವರ ಬಳಿ ಈ ಕುರಿತು ಚರ್ಚಿಸಿ 3 ಲಕ್ಷ ರೂಪಾಯಿ ಹಣ ನೀಡಲಾಗಿತ್ತು. ಆದರೆ, ಇಷ್ಟು ದಿನಗಳಾದರೂ ಕೆಲಸ ಮಾಡಿಕೊಡದಿರುವ ಲಯೇಂದ್ರ ಹಣವನ್ನು ಹಿಂತಿರುಗಿಸಲು ಕೂಡ ತಯಾರಿಲ್ಲ ಎಂದು ಕುಮಾರ್ ದೂರಿದ್ದಾರೆ.
ಲಯೇಂದ್ರ ವಿರುದ್ಧ ಚಲನ ಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲು ಕುಮಾರ್ ನಿರ್ಧರಿಸಿದ್ದಾರೆ.