Webdunia - Bharat's app for daily news and videos

Install App

ರಣವಿಕ್ರಮನ ಮೇಲೆ ಲಹರಿಯ ಕೆಂಗಣ್ಣು

Webdunia
ಶನಿವಾರ, 28 ಮಾರ್ಚ್ 2015 (10:26 IST)
ಅದೇನು ಗೊತ್ತಿದ್ದೂ ಮಾಡ್ತಾರೋ ಗೊತ್ತಿಲ್ಲದೇ ಇಂತಹ ತಪ್ಪು ಮಾಡ್ತಾರೋ ಗೊತ್ತಿಲ್ಲ. ಯಾಕೆ ಅಂದ್ರೆ ಈ ಚಿತ್ರರಂಗದಲ್ಲಿ ಇಂತಹ ಗೊಂದಲಗಳು ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತವೆ. ಲಹರಿ ಕಂಪನಿಯ ಮಾಲೀಕ ವೇಲು ಅವರು ಈಗ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ರಣವಿಕ್ರಮ ಚಿತ್ರದ ಮೇಲೆ ಕೆಂಗಣ್ಣು ಬೀರಿದ್ದಾರೆ. 
ರಣ ವಿಕ್ರಮ ತನ್ನ ಕೆಲಸ ಆರಂಭ ಮಾಡಿಕೊಂಡ ದಿನದಿಂದ ಏನಾದರೊಂದು ವಿವಾದದಲ್ಲಿ ಸಿಲುಕುತ್ತಲೇ ಇದೆ. ಟೀಸೀರಿಸ್ ಮೂಲಕ ಲಹರಿ ಆಡಿಯೋ ಆನ್ಲೈನ್ ತನ್ನ ಕಾರ್ಯ ನೆರವೇರಿಸುತ್ತದೆ. ಆದರೆ ಅದು ಈಗ ರಣ ವಿಕ್ರಮ ಮೇಲೆ ಕೋಪ ಮಾಡಿಕೊಂಡಿರುವುದರ ಹಿಂದೆ ಒಂದು ಕಾರಣ ಇದೆ. ರಣವಿಕ್ರಮದಲ್ಲಿ ಡಾ.ರಾಜ್ ಕುಮಾರ್ ಅವರು ಹಾಡಿರುವ ಹಾಡನ್ನು ಬಳಕೆ ಮಾಡಿಕೊಂಡಿದ್ದಾರೆ ವಿ ಹರಿಕೃಷ್ಣ. ತಮ್ಮ ಗಮನಕ್ಕೆ ತರದೇ ಡಾ.ರಾಜ್ ಕುಮಾರ್ ಹಾಡನ್ನು ಬಳಸಿಕೊಂಡ ಬಗ್ಗೆ ಅಸಮಾಧಾನ ಉಂಟಾಗಿದೆ ಲಹರಿ ವೇಲು ಅವರಿಗೆ. ಇದಕ್ಕೆ ಸಂಬಂಧಪಟ್ಟಂತೆ ಅವರು ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೊಕ್ಕಿದ್ದಾರೆ. 
 
ಜಗವೇ ಒಂದು ರಣರಂಗ ಎನ್ನುವ ಹಾಡು ಶಿವರಾಜ್ ಕುಮಾರ್ ಅಭಿನಯದ ರಣರಂಗ ಚಿತ್ರದ್ದು, ಇದನ್ನು ಡಾ.ರಾಜ್ ಕುಮಾರ್ ಅವರು ಹಾಡಿದ್ದರು. ಮತ್ತೊಂದು ಹಾಡು ಸೀತಾರಮಯ್ಯಗಾರಿ  ಮನವುರಾಲು ಚಿತ್ರದ ಹಾಡು. ಈ ಎರಡು ಹಾಡುಗಳು ಸಹ ಲಹರಿ ಕಂಪನಿಯ ಒಡೆತನಕ್ಕೆ ಸೇರಿದ್ದಾಗಿದೆ. ಆದರೆ ಅದರ ಬಗ್ಗೆ ಗಮನ ನೀಡದೆ ರಣವಿಕ್ರಮ ಬಳಸಿಕೊಂಡು ಲಹರಿಯವರ ಕೆಂಗಣ್ಣಿಗೆ ಗುರಿಯಾಗಿದೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments