Webdunia - Bharat's app for daily news and videos

Install App

ಸಾರಿ ‍ಫ್ರೆಂಡ್ಸ್ ಸಾರಿ ಎಂದರು ಕಿಚ್ಚ ಸುದೀಪ್.. ಯಾರಿಗೆ ಗೊತ್ತೆ ?

Webdunia
ಸೋಮವಾರ, 21 ಏಪ್ರಿಲ್ 2014 (10:18 IST)
ಕನ್ನಡದ ಸ್ಟಾರ್ ನಟ ನಿರ್ದೇಶಕ ಕಿಚ್ಚ ಸುದೀಪ್. ಅವರಿಗೆ ದಿನದ ಇಪ್ಪತ್ತು ನಾಲ್ಕು ಗಂಟೆಯೂ ಸಹ ಬ್ಯುಸಿ. ಆ ನಟ ಈಗ ಸಿನಿಮಾರಂಗದ ಅತ್ಯಂತ  ಬೇಡಿಕೆಯ ನಟ ಎನ್ನುವುದು ಸಹ ಸುಳ್ಳಲ್ಲ.ಆದ್ದರಿಂದ ಅವರೆಂದಿಗೂ ಬಿಡುವಾಗಿ ರಲು ಆಶಿಸುವುದೇ ಇಲ್ಲ ಸದಾ ಬ್ಯುಸಿ ಬ್ಯುಸಿ...  
 
ಸದ್ಯಕ್ಕೆ ಸುದೀಪ್ ಅವರು ತಮ್ಮ ಬಹುನಿರೀಕ್ಷಿತ ಚಿತ್ರ ಮಾಣಿಕ್ಯಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಬ್ಯುಸಿ ಆಗಿದ್ದಾರೆ. ಆದರೆ ಎಷ್ಟೇ ಕೆಲಸ ಇದ್ದರು ಸಹ ಸುದೀಪ್ ತಪ್ಪದೆ ತಮ್ಮ ಅಭಿಮಾನಿಗಳ ಜೊತೆ ಸದಾ ಟಚ್ ನಲ್ಲಿ ಇರುತ್ತಾರೆ. ತಮ್ಮ ಮೈಕ್ರೋ ಬ್ಲಾಗಿಂಗ್ ಮುಖಾಂತರ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಾ ಇರುತ್ತಾರೆ. ಆದ್ದರಿಂದ ಕನ್ನಡದ ಬೇರೆ ನಟರಿಗಿಂತ ಅವರು ಭಿನ್ನ. ಅಲ್ಲದೆ ತಾವು ಟ್ವೀಟ್ ಮಾಡಿದ ಬಳಿಕ ಅಭಿಪ್ರಾಯಕ್ಕೆ ಮತ್ತೆ ಉತ್ತರಿಸುವ ಗುಣ ಅವರದ್ದು.
 
 ಆದರೆ ಈಗ ಅದೆಷ್ಟರಮಟ್ಟಿಗೆ ಅವರು ಬ್ಯುಸಿ ಅಂದರೆ , ಅಭಿಮಾನಿಗಳಿಗೆ ಪ್ರತಿಕ್ರಿಯೆ ತೋರಿಸಲು ಆಗದಷ್ಟು. ಇದರ ಬಗ್ಗೆ ಅವರು ಟ್ವೀಟ್  ಮಾಡಿ ತಿಳಿಸಿದ್ದಾರೆ ಸುದೀಪ್ . ಸಾರಿ ಫ್ರೆಂಡ್ಸ್ ನನಗೆ ಸಿಕ್ಕಾಪಟ್ಟೆ ಕೆಲಸ . ಅದರಲ್ಲೇ ನಾನು ಮಗ್ನ ಆಗೋಷ್ಟು.. ಆದ ಕಾರಣ ಹೆಚ್ಚು ಬಾರಿ ನಿಮ್ಮ ಅಭಿಪ್ರಾಯಗಳಿಗೆ ಉತ್ತರ ನೀಡಲಾಗುತ್ತಿಲ್ಲ. ಸಿನಿಮಾ ಬಿಡುಗಡೆ ಮಾಡುವ , ಅದರ ಪ್ರಮೊಶನ್ಸ್ ಬಗ್ಗೆ ಕೆಲಸದಲ್ಲಿ ನಿರತ ಆಗಿರೋದ್ರಿಂದ ಯಾವುದೇ ಬಗೆಯಲ್ಲೂ ಇಲ್ಲಿ ಗಮನ ನೀಡಲು ಸಾಧ್ಯ ಆಗಿಲ್ಲ ಎಂದು ತಮ್ಮ ಕಷ್ಟವನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ. ಬಹುನಿರೀಕ್ಷಿತ ಚಿತ್ರ ಮಾಣಿಕ್ಯ ಮೇ 1 ರಂದು ಬಿಡುಗಡೆ ಆಗಲಿದೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments