Select Your Language

Notifications

webdunia
webdunia
webdunia
webdunia

ಸಾರಿ ‍ಫ್ರೆಂಡ್ಸ್ ಸಾರಿ ಎಂದರು ಕಿಚ್ಚ ಸುದೀಪ್.. ಯಾರಿಗೆ ಗೊತ್ತೆ ?

ಸಾರಿ ‍ಫ್ರೆಂಡ್ಸ್ ಸಾರಿ ಎಂದರು ಕಿಚ್ಚ ಸುದೀಪ್.. ಯಾರಿಗೆ ಗೊತ್ತೆ ?
, ಸೋಮವಾರ, 21 ಏಪ್ರಿಲ್ 2014 (10:18 IST)
ಕನ್ನಡದ ಸ್ಟಾರ್ ನಟ ನಿರ್ದೇಶಕ ಕಿಚ್ಚ ಸುದೀಪ್. ಅವರಿಗೆ ದಿನದ ಇಪ್ಪತ್ತು ನಾಲ್ಕು ಗಂಟೆಯೂ ಸಹ ಬ್ಯುಸಿ. ಆ ನಟ ಈಗ ಸಿನಿಮಾರಂಗದ ಅತ್ಯಂತ  ಬೇಡಿಕೆಯ ನಟ ಎನ್ನುವುದು ಸಹ ಸುಳ್ಳಲ್ಲ.ಆದ್ದರಿಂದ ಅವರೆಂದಿಗೂ ಬಿಡುವಾಗಿ ರಲು ಆಶಿಸುವುದೇ ಇಲ್ಲ ಸದಾ ಬ್ಯುಸಿ ಬ್ಯುಸಿ...  
 
ಸದ್ಯಕ್ಕೆ ಸುದೀಪ್ ಅವರು ತಮ್ಮ ಬಹುನಿರೀಕ್ಷಿತ ಚಿತ್ರ ಮಾಣಿಕ್ಯಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಬ್ಯುಸಿ ಆಗಿದ್ದಾರೆ. ಆದರೆ ಎಷ್ಟೇ ಕೆಲಸ ಇದ್ದರು ಸಹ ಸುದೀಪ್ ತಪ್ಪದೆ ತಮ್ಮ ಅಭಿಮಾನಿಗಳ ಜೊತೆ ಸದಾ ಟಚ್ ನಲ್ಲಿ ಇರುತ್ತಾರೆ. ತಮ್ಮ ಮೈಕ್ರೋ ಬ್ಲಾಗಿಂಗ್ ಮುಖಾಂತರ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಾ ಇರುತ್ತಾರೆ. ಆದ್ದರಿಂದ ಕನ್ನಡದ ಬೇರೆ ನಟರಿಗಿಂತ ಅವರು ಭಿನ್ನ. ಅಲ್ಲದೆ ತಾವು ಟ್ವೀಟ್ ಮಾಡಿದ ಬಳಿಕ ಅಭಿಪ್ರಾಯಕ್ಕೆ ಮತ್ತೆ ಉತ್ತರಿಸುವ ಗುಣ ಅವರದ್ದು.
 
 ಆದರೆ ಈಗ ಅದೆಷ್ಟರಮಟ್ಟಿಗೆ ಅವರು ಬ್ಯುಸಿ ಅಂದರೆ , ಅಭಿಮಾನಿಗಳಿಗೆ ಪ್ರತಿಕ್ರಿಯೆ ತೋರಿಸಲು ಆಗದಷ್ಟು. ಇದರ ಬಗ್ಗೆ ಅವರು ಟ್ವೀಟ್  ಮಾಡಿ ತಿಳಿಸಿದ್ದಾರೆ ಸುದೀಪ್ . ಸಾರಿ ಫ್ರೆಂಡ್ಸ್ ನನಗೆ ಸಿಕ್ಕಾಪಟ್ಟೆ ಕೆಲಸ . ಅದರಲ್ಲೇ ನಾನು ಮಗ್ನ ಆಗೋಷ್ಟು.. ಆದ ಕಾರಣ ಹೆಚ್ಚು ಬಾರಿ ನಿಮ್ಮ ಅಭಿಪ್ರಾಯಗಳಿಗೆ ಉತ್ತರ ನೀಡಲಾಗುತ್ತಿಲ್ಲ. ಸಿನಿಮಾ ಬಿಡುಗಡೆ ಮಾಡುವ , ಅದರ ಪ್ರಮೊಶನ್ಸ್ ಬಗ್ಗೆ ಕೆಲಸದಲ್ಲಿ ನಿರತ ಆಗಿರೋದ್ರಿಂದ ಯಾವುದೇ ಬಗೆಯಲ್ಲೂ ಇಲ್ಲಿ ಗಮನ ನೀಡಲು ಸಾಧ್ಯ ಆಗಿಲ್ಲ ಎಂದು ತಮ್ಮ ಕಷ್ಟವನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ. ಬಹುನಿರೀಕ್ಷಿತ ಚಿತ್ರ ಮಾಣಿಕ್ಯ ಮೇ 1 ರಂದು ಬಿಡುಗಡೆ ಆಗಲಿದೆ. 

Share this Story:

Follow Webdunia kannada