Webdunia - Bharat's app for daily news and videos

Install App

ಕಾಲಿವುಡ್ ನಿರ್ಮಾಪಕರಿಗೆ ತಲೆನೋವಾದ ಕಿಚ್ಚ ಸುದೀಪ್ ?

Webdunia
ಮಂಗಳವಾರ, 16 ಡಿಸೆಂಬರ್ 2014 (11:21 IST)
ಬಾಲಿವುಡ್ ಹೀರೋಯಿನ್ ಶ್ರೀದೇವಿ ಈಗ ಶಿಂಬುದೇವನ್ ಅವರ ನಿರ್ದೇಶನದ ಚಿತ್ರದಲ್ಲಿ ರಾಜಮಾತೆಯ ಪಾತ್ರಧಾರಿ ಆಗುತ್ತಿದ್ದಾರೆ ಎನ್ನುವ ಸಂಗತಿ ಬಗ್ಗೆ ನಾವು ಈ ಮೊದಲೇ ಹೇಳಿದ್ದೇವೆ.ಈ ಚಿತ್ರದಲ್ಲಿ ರಾಜಮಾತೆ ಆಗಲು ಆಕೆ ಪಡೆದ ಸಂಭಾವನೆ ಐದು ಕೋಟಿ ರೂಪಾಯಿಗಳು. ಚಿತ್ರದಲ್ಲಿ ವಿಜಯ್ ಮುಖ್ಯ ಪಾತ್ರಧಾರಿ ಆಗಿದ್ದಾರೆ. ಅದೇರೀತಿ ಈ ಚಿತ್ರದ ಮತ್ತೊಬ್ಬ ಮುಖ್ಯ ಪಾತ್ರಧಾರಿ ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್. ಕಿಚ್ಚ ಈಗ ಮಾಡಿರುವ ಕೆಲಸದಿಂದ ನಿರ್ಮಾಪಕರಿಗೆ ತಲೆ ನೋವು ಆರಂಭವಾಗಿದೆಯಂತೆ. 
ಈವರೆಗೂ ಅವರು ಕೇವಲ ಒಂದು ಕೋಟಿಗೆ ಒಪ್ಪಿಕೊಂಡಿದ್ದರಂತೆ ನಟಿಸಲು. ಆದರೆ ಈಗ ಒಂದೂವರೆ ಕೋಟಿ ಕೊಟ್ಟರೆ ಮಾತ್ರ ಅಭಿನಯಿಸುವುದಾಗಿ ಹೇಳಿದ್ದಾರಂತೆ. ಹಾಗಂತ ಕಾಲಿವುಡ್ ಮಾಧ್ಯಮಗಳು ಬರೆದುಕೊಂಡಿವೆ. ಶ್ರೀದೇವಿಗೆ ಐದು ಕೋಟಿ ಕೊಟ್ಟಾಗ ತನಗೆ ಕನಿಷ್ಠ ಒಂದೂವರೆ ಕೋಟಿ ರೂಪಾಯಿ ಆದರೂ ಬೇಡವೇ ಎನ್ನುವ ಅಭಿಪ್ರಾಯ ಹೊಂದಿದ್ದಾರೆ ಕಿಚ್ಚ ಎನ್ನುತ್ತಿದ್ದಾರೆ ಕಾಲಿವುಡ್ ಮೀಡಿಯಾ ಮಂದಿ. ಆದರೆ ಅದೆಷ್ಟು ಸತ್ಯ ಎನ್ನುವುದು ಗೊತ್ತಿಲ್ಲ. 
 
ಆ ವಿಷಯ ಹಾಗಿರಲಿ ಅಕಸ್ಮಾತ್ ಸುದೀಪ್ ಅವರಿಗೆ  ಸಂಭಾವನೆ ಹೆಚ್ಚಿಸಿದರೆ ಆ ಚಿತ್ರದ ನಟಿಯರಾದ ಹನ್ಸಿಕ ಮತ್ತು ಶ್ರುತಿ ತಾವು ಸಹಿತ  ಸಂಭಾವನೆ ಹೆಚ್ಚಿಸಿ ಬಿಟ್ಟರೇನು ಗತಿ ಎನ್ನುವ ಆತಂಕ ಕಾಡಿದೆಯಂತೆ ನಿರ್ಮಾಪಕರಲ್ಲಿ.ಒಟ್ಟಾರೆ ಈ ಅಂತೆಗಳ ಬಗ್ಗೆ ಇರುವ ಕಂತೆಗಳು ಹರಡುತ್ತಲೇ ಇರುತ್ತವೆ. ನಾವು ಓದಿ ಸುಮ್ಮನಾದರಾಯ್ತು! 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments