Webdunia - Bharat's app for daily news and videos

Install App

ಕಿಚ್ಚ-ಶ್ರೀದೇವಿಯ ಒಂದು ಮುತ್ತಿನ ಕಥೆ...?!

Webdunia
ಶುಕ್ರವಾರ, 27 ಫೆಬ್ರವರಿ 2015 (09:13 IST)
ಸಾಮಾನ್ಯವಾಗಿ ಯಾವುದೇ ಕಲಾವಿದರಾಗಿರಲಿ ಅವರ ಅಭಿಮಾನಿಗಳು ಪ್ರೀತಿಯಿಂದ ಹೆಸರನ್ನು ನೀಡಿರುತ್ತಾರೆ. ಅದೆರೀತಿ ಬಾಲಿವುಡ್ ನಟಿ ಶ್ರೀದೇವಿ ಅವರಿಗೂ ಸಹಿತ ಅವರ ಅಭಿಮಾನಿಗಳು ಅತಿಲೋಕ ಸುಂದರಿ ಎನ್ನುವ ಹೆಸರನ್ನು ನೀಡಿದ್ದಾರೆ. ಈ ಅತಿಲೋಕ ಸುಂದರಿ ಈಗ ಪುಲಿ ಎನ್ನುವ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದರಲ್ಲಿ ನಮ್ಮ ಕನ್ನಡದ ಹೆಮ್ಮೆಯ ನಟ ಕಿಚ್ಚ ಸುದೀಪ್ ಅವರು ಮಹಾರಾಜನಾಗಿ ಅಭಿನಯಿಸುತ್ತಿದ್ದಾರೆ. 
ಇದರ ಅನ್ವಯ ಈಗ ಈ ನಟ ಹಾಗೂ ಶ್ರೀದೇವಿ ನಡುವೆ ಲಿಪ್ ಲಾಕ್ ದೃಶ್ಯ ಇದೆ ಎನ್ನುವ ಸುದ್ದಿ ಹರಡಿದ್ದು, ಅದಕ್ಕೆಂದು ಆಕೆ 5  ಕೋಟಿ ರೂಪಾಯಿಗಳಷ್ಟು ಸಂಭಾವನೆ ಪಡೆದ ಬಗ್ಗೆ ನಾವು ತಿಳಿಸಿದ್ದೆವು. ಈ ಸಂಗತಿ ಭಾರತೀಯ ಚಿತ್ರ ಪ್ರೇಮಿಗಳ ಬಾಯಲ್ಲಿ ಹಾಟ್ ಹಾಟ್ ಸುದ್ದಿ ಆಗಿತ್ತು. ವಿಶೇಷ ಅಂದ್ರೆ ಈಗ ಹರಡಿರುವ ಸುದ್ದಿ ಸುಳ್ಳು ಎಂದಿದ್ದಾರೆ ಕಿಚ್ಚ ಸುದೀಪ್. ಶಿಂಬು ದೇವನ್ ಅವರ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ವಿಜಯ್, ಶ್ರುತಿ ಹಾಸನ್, ಹನ್ಸಿಕ ಮುಖ್ಯ ಪಾತ್ರಧಾರಿಗಳಾಗಿದ್ದಾರೆ. 
 
ಮುತ್ತಿನ ಕಥೆಗೆ ಮತ್ತೆ ಬರುವುದಾದರೆ ಸುದೀಪ್ ಈ ವಿಷಯ ಅಲ್ಲಗಳೆದಿರುವುದಲ್ಲದೆ ಇಂತಹ ಸುದ್ದಿಗಳು ಹೇಗೆ ಹರಡುತ್ತದೆಯೋ ಗೊತ್ತಿಲ್ಲ,ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ, ನನ್ನನ್ನು ಚಿತ್ರತಂಡ ಸಂಪರ್ಕಿಸಿಯೂ ಇಲ್ಲ ಎಂದಿದ್ದಾರೆ. ಒಟ್ಟಾರೆ ವದಂತಿಗಳಿಂದ ಜೀವಂತವಾಗಿದ್ದ ಒಂದು ಮುತ್ತಿನ ಕಥೆ ಹೀಗೆ ಸಮಾಪ್ತಿಯಾಯ್ತು.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments