ಚಂದನವನದ ಅತ್ಯಂತ ಪ್ರತಿಭಾವಂತ ನಿರ್ದೇಶಕ ಯಶಸ್ವಿ ಚಿತ್ರ ಉಗ್ರಂ ನಿರ್ದೇಶಕ, ನಟ ಶ್ರೀ ಮುರಳಿಗೆ ಜೀವದಾನ ಮಾಡಿದ ನಿರ್ದೇಶಕ ಹೀಗೆ ಏನು ಬೇಕಾದರೂ ವರ್ಣಿಸಬಹುದು ಅವರೇ ಪ್ರಶಾಂತ್ ನೀಲ್. ಅವರು ಈಗ ರಾಕ್ ಸ್ಟಾರ್ ಯಶ್ ಅವರ ನಟನೆಯ ಚಿತ್ರ ಕೆಜಿಎಫ್ ನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ 40 ಕೋಟಿ ಮೊತ್ತದಲ್ಲಿ ಸಿದ್ಧವಾಗುತ್ತಿದೆ.
ಇಷ್ಟೊಂದು ಮೊತ್ತವನ್ನು ಈವರೆಗೂ ಯಾವುದೇ ಕನ್ನಡ ಚಿತ್ರಗಳಿಗೂ ಹೂಡಿಕೆ ಮಾಡಿಲ್ಲ ಎನ್ನುವುದು ಈಗ ಎಲ್ಲರು ತಿಳಿಯ ಬೇಕಾದ ಸಂಗತಿಯಾಗಿದೆ. ಈ ಚಿತ್ರವೂ 1970 ಸನ್ನಿವೇಶಕ್ಕೆ ಅನುಗುಣವಾಗುವಂತೆ ಬ್ಯಾಕ್ಡ್ರಾಪ್ ಸಿದ್ಧ ಮಾಡಲಾಗಿದೆಯಂತೆ.
ಏಕೆಂದರೆ ನಿರ್ದೇಶಕರು ಆಗಿದ್ದ ಪರಿಸ್ಥಿತಿಯ ವಾತಾವರಣದ ಹೋಲಿಕೆ ಆಗುವಂತೆ ಇರಲು ಹೆಚ್ಚಿನ ಗಮನ ನೀಡಿದ್ದಾರೆ. ಒಟ್ಟಾರೆ ಕನ್ನಡ ಚಿತ್ರರಂಗದ ಅತಿ ಬೇಡಿಕೆಯ ನಿರ್ದೇಶಕ ಹಾಗೂ ನಟ ಹೊಸತನ್ನು ಕನ್ನಡ ಪ್ರೇಕ್ಷಕರಿಗೆ ನೀಡಲು ಹೊರಟಿದ್ದಾರೆ. ಅವರ ಪ್ರಯತ್ನ ಸಫಲವಾಗಲಿ.