ದುನಿಯಾ ಸೂರಿ ಅವರ ವಿಭಿನ್ನ ಪ್ರಯೋಗ ಕೆಂಡಸಂಪಿಗೆಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೂರಿಯ ಸಿನಿಮಾಕ್ಕೆ ಈಗಾಗಲೇ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ನಾಲ್ಕನೇ ವಾರವೂ ಚಿತ್ರಮಂದಿರಗಳಲ್ಲಿ ಕೆಂಡ ಸಂಪಿಗೆಯ ನಾಗಾಲೋಟ ಹಾಗೇ ಮುಂದುವರೆದಿದೆ.
ಸದ್ಯ 50ನೇ ದಿನದತ್ತ ಮುನ್ನುಗ್ಗುತ್ತಿರುವ ಕೆಂಡಸಂಪಿಗೆ ಸಿನಿಮಾಕ್ಕೆ ದಿನೇ ದಿನೇ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ. ಕ್ಲಾಸ್ , ಮಾಸ್ , ಫ್ಯಾಮಿಲಿ ಹೀಗೆ ಎಲ್ಲಾ ಅಂಶಗಳು ಸಿನಿಮಾದಲ್ಲಿರೋದರಿಂದ ಚಿತ್ರ ಎಲ್ಲರಿಗೂ ಇಷ್ಟವಾಗುತ್ತಿದೆ. ಈಗಾಗಲೇ ಚಿತ್ರ ಹಾಕಿದಜ ಬಂಡವಾಳಕ್ಕಿಂತ ಎರಡು ಪಟ್ಟು ಹೆಚ್ಚು ಆದಾಯವನ್ನು ಚಿತ್ರತಂಡಕ್ಕೆ ತಂದು ಕೊಟ್ಟಿದೆಯಂತೆ.
ಅಪರಾಧ ಜಗತ್ತಿನ ಎಲ್ಲೆಯನ್ನು ಇಟ್ಟುಕೊಂಡು ಮಾಡಿರುವ ಈ ಸಿನಿಮಾದಲ್ಲಿ ಪ್ರಥಮ ಬಾರಿಗೆ ಮಾನ್ವಿತಾ ಹರೀಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ನಾಯಕ ವಿಕ್ಕಿಗೂ ಇದು ಮೊದಲ ಸಿನಿಮಾ. ಕರ್ನಾಟಕದ 18 ಜಿಲ್ಲೆಗಳಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಲಾಗಿದ್ದು, ವಿ. ಹರಿಕೃಷ್ಣ ಇದಕ್ಕೆ ಸಂಗೀತ ಸಂಯೋಜಿಸಿದ್ದಾರೆ.