Webdunia - Bharat's app for daily news and videos

Install App

‘ಆ್ಯಪಲ್ ಕೇಕ್’ ಕನಸುಗಳ ಬೆನ್ನಟ್ಟಿ ಹೋದ ಹುಡುಗರ ಕಥೆ

Webdunia
ಮಂಗಳವಾರ, 31 ಜನವರಿ 2017 (13:08 IST)
ಇತ್ತೀಚಿನ ದಿನಗಳಲ್ಲಿ ಹೊಸಬರ ಸಿನಿಮಾಗಳ ಸಂಖ್ಯೆ ಜಾಸ್ತಿ ಆಗುತ್ತಿದೆ.  ಅದರಲ್ಲೂ ಕಡಿಮೆ ಬಡ್ಜೆಟ್ಟಿನಲ್ಲಿ ನಿರ್ಮಾಣವಾಗುವ ಚಿತ್ರಗಳಲ್ಲಿ ಉತ್ತಮ ಅಂಶಗಳಿರುತ್ತವೆ ಎಂಬುದಕ್ಕೆ ಈ ವರ್ಷ ಗೆದ್ದ ಹಲವಾರು ಚಿತ್ರಗಳ ಉದಾಹರಣೆ. ಅಂಥಾ ಚಿತ್ರಗಳ ಸಾಲಿಗೆ ಸೇರಲಿರುವ ಮತ್ತೊಂದು ಚಿತ್ರವೇ ಆ್ಯಪಲ್ ಕೇಕ್. 
 
ರಂಜಿತಗೌಡ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಚಿತ್ರದ ಮೂಹೂರ್ತ ಸಮಾರಂಭ ಕಳೆದ ಸೋಮವಾರ ನಡೆಯಿತು. ಅರವಿಂದ ಕುಮಾರ್‍ಗೌಡ ನಿರ್ಮಾಣದ ಈ ಚಿತ್ರದಲ್ಲಿ ರಂಜಿತ, ಅರವಿಂದ್, ಶುಭರಕ್ಷ ಹಾಗೂ ಚೈತ್ರಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
 
ಮುಹೂರ್ತ ಸಮಾರಂಭದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಹಾಗೂ ನಟ ರಂಜಿತ್ ಮಾತನಾಡಿ ಹಲವಾರು ಬೀದಿ ನಾಟಕಗಳಲ್ಲಿ ಅಭಿನಯಿಸಿದ ನಂತರ ಮದರಂಗಿ ವಾಸ್ಕೋಡಗಾಮ ಚಿತ್ರದ ಸಹ ನಿರ್ದೇಶಕನಾಗಿಯೂ ಕೆಲಸ ಮಾಡಿದೆ. 
 
ಆಟೋ ಎಂಬ ಚಿತ್ರದಲ್ಲಿ ನಾವೆಲ್ಲ ಒಟ್ಟಿಗೆ ಕೆಲಸ ಮಾಡಿದ್ದೆವು. ಅದೇ ಅನುಭವ ಆ್ಯಪಲ್ ಕೇಕ್ ಚಿತ್ರ ಆರಂಭಿಸಲು ಕಾರಣ. ವೈಯಕ್ತಿಕ ಕನಸುಗಳನ್ನು ಬೆನ್ನಟ್ಟಿಕೊಂಡು ಹೋಗುವಂಥ 3 ಪಾತ್ರಗಳ ಮೂಲಕ ಈ ಚಿತ್ರವನ್ನು ಹೇಳ ಹೊರಟಿದ್ದೇನೆ. ಇಲ್ಲಿ 3 ಜನರ ಕನಸುಗಳು ಬೇರೆ ಬೇರೆಯಾಗಿದ್ದರೂ ಗುರಿಮಾತ್ರ ಒಂದೇ ಆಗಿರುತ್ತದೆ.  
 
ಚಿತ್ರದಲ್ಲಿ ಬರುವ 3 ಪ್ರಮುಖ ಪಾತ್ರಗಳಿಗೂ 2 ಷೇಡ್ಸ್ ಇರುತ್ತದೆ. ಮಂಗಳೂರು, ಮಂಡ್ಯ ಹಾಗೂ ಉತ್ತರ ಕರ್ನಾಟಕದ ನಾನಾ ಭಾಗಗಳ ವ್ಯಕ್ತಿಗಳ ಮುಖವನ್ನು ಪರಿಚಯಿಸುವಂಥ ಕಥಾನಕ ಈ ಚಿತ್ರದಲ್ಲಿದೆ. ಮಂಡ್ಯ, ಜನ್ನಪಟ್ಟಣ, ಬೆಂಗಳೂರು, ಹಾವೇರಿ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸುವ ಪ್ಲ್ಯಾನ್ ಇದೆ. 
 
ಮತ್ತೊಬ್ಬ ನಟ ವಿಜಯಶಂಕರ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ನಿರ್ಮಾಪಕ ಅರವಿಂದ ಕುಮಾರಗೌಡ ಮಾತನಾಡಿ ನಾವೆಲ್ಲ ಸೇರಿ ಲೈಫ್ ಎಂಬ ಡಾಕ್ಯುಮೆಂಟರಿ ಸಿನಿಮಾವನ್ನು ಮಾಡಿದ್ದೆವು. 1-5 ಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಿಸುತ್ತಿರುವುದಾಗಿ ಹೇಳಿದರು.  
 
ಮತ್ತೊಬ್ಬ ನಟ ಜಯಶಂಕರ್ ಮಾತನಾಡಿ ನಾವೆಲ್ಲ 10 ವರ್ಷಗಳಿಂದ ಗೆಳೆಯರು. ಆಗ ಲೈಫ್ ಎಂಬ ಡಾಕ್ಯುಮೆಂಟರಿ ಮಾಡಿದ್ದೆವು. ಅಲ್ಲದೆ ಆಟೋ ಚಿತ್ರದಲ್ಲಿ ಕೂಡ ಒಟ್ಟಾಗಿ ವರ್ಕ್‍ಮಾಡಿದ ನಂತರ ಮದರಂಗಿ ಆದ ಮೇಲೆ ಈ ಸಿನಿಮಾ ಆರಂಭಿಸಿದ್ದೇವೆ.
 
ನಾಯಕಿಯರಲ್ಲಿ ಒಬ್ಬರಾದ ಶುಭರಕ್ಷ ಮಾತನಾಡುತ್ತ ಬಳ್ಳಾರಿದರ್ಬಾರ್ ಚಿತ್ರದಲ್ಲಿ ಅಭಿನಯಿಸಿದ್ದೆ. ಅದಾದ ನಂತರ ಈ ಚಿತ್ರದಲ್ಲಿ ಆ್ಯಕ್ಟ್ ಮಾಡಿದ್ದೇನೆ. ಮಾಡಲಿಂಗ್ ಹಾಗೂ ಸೀರಿಯಲ್‍ಗಳಲ್ಲಿ ಕೂಡ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
 
ಮತ್ತೊಬ್ಬ ನಟಿ ಚೈತ್ರಶೆಟ್ಟಿ ಮಾತನಾಡುತ್ತ ‘ಈ ಹಿಂದೆ ಡಮ್ಕಿಡಮಾರ್ ಚಿತ್ರದಲ್ಲಿ ಅಭಿನಯಿಸಿದ್ದೆ. ನಾನು ಕೂಡ ರಂಗಭೂಮಿಯಲ್ಲಿ ಅಭಿನಯಿಸಿದ್ದೆ. ಈ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಅಭಿನಯಿಸುತ್ತಿದ್ದೇನೆ. ಹಳ್ಳಿ ಪಾತ್ರ ನನಗೆ ತುಂಬಾ ಇಷ್ಟ. ಅಂಥದೇ ಪಾತ್ರ ನನಗೆ ಸಿಕ್ಕಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments