ಕಟ್ಟಿ ಬಟ್ಟಿ ಸಿನಿಮಾ ಬಳಿಕ ಕಂಗನಾ ಸದ್ಯ ರಾಣಿ ಲಕ್ಮೀ ಬಾಯಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಶೂಟಿಂಗ್ ನಿಂದ ಕೊಂಚ ಬಿಡುವು ಪಡೆದು ಕಂಗನಾ ಪ್ಯಾರೀಸ್ನಲ್ಲಿ ನಡೆಯುತ್ತಿರುವ ಫ್ಯಾಶನ್ ವೀಕ್ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಈ ನಡುವೆ ಕಂಗನಾ ಕಿವಿಗೆ ರಾಣಿ ಲಕ್ಷ್ಮೀ ಬಾಯಿ ಸಿನಿಮಾ ಮುಂದುವರೆಯಲ್ಲ ಎಂಬ ಸುದ್ದಿ ಕೇಳಿ ಬಂದಿದ್ದು, ಕಂಗನಾ ಒಂದು ಕ್ಷಣ ಶಾಕ್ಗೆ ಒಳಗಾದರಂತೆ.
ಬಳಿಕ ಕಂಗನಾ ನಿರ್ದೇಶಕ ಕೇತನ್ ಅವರಿಗೆ ಕರೆ ಮಾಡಿದರಂತೆ. ಆಗ ಆ ಸುದ್ದಿ ನಿಜವಲ್ಲ ಎಂದ ಮೇಲೆ ಕಂಗನಾ ರಿಲ್ಯಾಕ್ಸ್ ಆದರಂತೆ. ಈಗಾಗಲೇ ಸಿನಿಮಾ ಶೂಟಿಂಗ್ ಆರಂಭಿಸಿದ್ದು ಕಂಗನಾ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ. ಹೀಗಿರುವಾಗಲೇ ಇಂತಹ ಸುದ್ದಿ ಕೇಳಿ ಒಂದು ಕ್ಷಣ ಕನ್ ಫ್ಯೂಸ್ ಆಯ್ತು ಅಂತಾ ಕಂಗನಾ ಹೇಳಿದ್ದಾರೆ. ಇನ್ನು ಸಿನಿಮಾ ನಿರ್ದೇಶಕರು ಈ ಸುದ್ದಿ ಕೇಳಿ ನನಗೆ ನಗು ಬಂತು. ಸಿನಿಮಾ ತಂಡ ಎಂದಿನಂತೆ ಶೂಟಿಂಗ್ ನಡೆಸುತ್ತಿದೆ. ಇದು ಹೇಗೆ ನಿಜವಾಗೋದಕ್ಕೆ ಸಾಧ್ಯ ಎಂದಿದ್ದಾರೆ.
ಸಿನಿಮಾ 1857 ನಡೆದ ಸಿಂಪಾಯಿ ದಂಗೆಯಲ್ಲಿ ಹೋರಾಡಿದ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಅವರ ಜೀವನ ಚರಿತ್ರೆ ಆಧಾರಿತವಾಗಿದೆ. ಇನ್ನು ಈ ಸಿನಿಮಾದ ಬಳಿಕ ಕಂಗನಾ ಹನ್ಸಲ್ ಮೆಹ್ತಾ ಅವರ ಸಿಮ್ರಾನ್ ಹಾಗೂ ವಿಶಾಲ್ ಭಾರಧ್ವಾಜ್ ಅವರ ರಂಗೂನ್ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.