Webdunia - Bharat's app for daily news and videos

Install App

ರಜನಿ ನಡೆಯ ಬಗ್ಗೆ ಕಮಲ್ ಹಾಸನ್ ಸಂಚಲನದ ಅಭಿಪ್ರಾಯ

Webdunia
ಬುಧವಾರ, 25 ಮಾರ್ಚ್ 2015 (10:04 IST)
ಕಮಲ್ ಹಾಸನ್ ಮತ್ತು ರಜನಿ ಕಾಂತ್ ಇಬ್ಬರು ಬಾಲಚಂದರ್ ಅವರ ಶಿಷ್ಯರಾಗಿ ಕಾಲಿವುಡ್  ಸಿನಿಮಾರಂಗದಲ್ಲಿ ಎಂಟ್ರಿ ನೀಡಿದ ಅವರು ತಮ್ಮದೇ ಆದ ಶೈಲಿ ಮೂಲಕ ಬೆಳವಣಿಗೆ ಕಂಡರು. ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ಬಾಲಿವುಡ್ ನಲ್ಲಿಯೂ ಸಹಿತ ಅವರು ಹೀರೋಗಳಾಗಿ ಎಲ್ಲರ ಮನ ಗೆದ್ದರು. ಈಗ ಸಹಿತ ಅವರಿಬ್ಬರ ಬಗ್ಗೆ ಜನಕ್ಕೆ ಕ್ರೇಜ್ ಕಡಿಮೆ ಆಗಿಲ್ಲ.  
ಕಮಲ್ ಹಾಸನ್ ಇತ್ತೀಚಿಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಚಿತ್ರಗಳನ್ನು ಮಾಡುತ್ತಿದ್ದಾರೆ. ಈ ವರ್ಷ ಕಮಲ್ ಅವರ ನಟನೆಯ ಮೂರು ಚಿತ್ರಗಳು ಬಿಡುಗಡೆ ಆಗುತ್ತಿದೆ. ಅಂದರೆ ಕಮಲ್ ಅವರು ಅದ್ಯಾವ ಪರಿ ಕಷ್ಟ ಪಡುತ್ತಿದ್ದಾರೆ ಎನ್ನುವ ಸಂಗತಿ ಸ್ಪಷ್ಟವಾಗುತ್ತದೆ. ಇತ್ತೀಚಿಗೆ ಅವರು ಪತ್ರಿಕೆ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ತಾನು ನಟಿಸಿರುವ  ಉತ್ತಮ ವಿಲನ್, ವಿಶ್ವರೂಪಂ 2 ,ಪಾಪ ನಾಶನಂ ಬಗ್ಗೆ ಅನೇಕ ಆಸಕ್ತಿಕರ ಸಂಗತಿಗಳನ್ನು ಹೊರ ಹಾಕಿದ್ದಾರೆ. 
 
ಈ ಸಮಯದಲ್ಲಿ ಮಾತನಾಡುತ್ತ ರಜನಿ ಕಾಂತ್ ಅವರ ಚಿತ್ರದ ಬಗ್ಗೆ ಮಾತಾಡುತ್ತ ಕೆಲವು ಆಸಕ್ತಿಕರ ಸಂಗತಿಗಳನ್ನು ಹೇಳಿದ್ದಾರೆ. ಬಾಬ ಚಿತ್ರ ಸೋತಾಗ ರಜನಿಕಾಂತ್ ಅವರು ಹಂಚಿಕೆದಾರರಿಗೆ ಹಣ ವಾಪಸ್ಸು ನೀಡಿದ್ದರು ಆಗ ಎಲ್ಲರು ಅವರ ಈ ನಡೆ ಬಗ್ಗೆ  ಮಾತಾಡಿದ್ದರು ಆದರೆ ರಜನಿಯ ಆ ರೀತಿ  ಒಳ್ಳೆತನದ ಪ್ರಭಾವ ಈಗ ಅವರ ಲಿಂಗಾ ಚಿತ್ರದ ಸೋಲಿನ  ಮೇಲೆ ಬಿದ್ದಿದೆ ಎನ್ನುವ ಸಂಗತಿಯನ್ನು ಹೇಳಿದ್ದಾರೆ. 
 
ಯಾರೇ ಆಗಿರಲಿ ತಮ್ಮ ವ್ಯಾಪಾರದಲ್ಲಿ ನಷ್ಟ ಹೊಂದಿದರೆ ಅದಕ್ಕೆ ಬೇರೆಯರು ಭರಿಸಲಿ ಎಂದು ತಿಳಿಯುವುದು ಎಷ್ಟು ಸರಿ ? ರಜನಿ ಅಂದು ಮಾಡಿದ ಒಳ್ಳೆಯ ಕೆಲಸ ಅರ್ಥ ಮಾಡಿಕೊಳ್ಳದೆ ವಿತರಕರು ಈ ರೀತಿ ಹಿಂಸೆ ನೀಡುತ್ತಿರುವುದು ಸರಿ ಎಂದಿದ್ದಾರೆ. ತಮ್ಮ ಪ್ರಿಯಮಿತ್ರನ ಮನದ ಮಾತನ್ನು ರಜನಿ ಹೇಗೆ ಸ್ವೀಕರಿಸುತ್ತಾರೋ ನೋಡುವಾ!

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments