Webdunia - Bharat's app for daily news and videos

Install App

ಪವರ್ ಸ್ಟಾರ್ ಕಂಠದಲ್ಲಿ 'ಕಳೆದೋದಾ ಕಾಳಿದಾಸ' ಹಾಡು ರಿಲೀಸ್..!

Webdunia
ಬುಧವಾರ, 22 ಜನವರಿ 2020 (15:33 IST)
ಕಾಣದಂತೆ ಮಾಯವಾದನು ಸಿನಿಮಾ ಈಗಾಗಲೇ ಪೋಸ್ಟರ್, ಲಿರಿಕಲ್ ಸಾಂಗ್, ಟ್ರೇಲರ್ ನಿಂದ ಸಾಕಷ್ಟು ಸದ್ದು ಮಾಡುತ್ತಿದೆ. ಸಿನಿಮಾ ತನ್ನೆಲ್ಲಾ ಕೆಲಸಗಳನ್ನು ಸಂಪೂರ್ಣವಾಗಿ ಮುಗಿಸಿ ಇದೀಗ ರಿಲೀಸ್ ಗೆ ರೆಡಿಯಾಗಿದೆ.

ಇದೇ ಜನವರಿ 31 ರಂದು ಸಿನಿಮಾ ತೆರೆಗೆ ಬರಲು ಸಿದ್ಧತೆ ನಡೆಸಿದೆ. 'ಕಾಣದಂತೆ ಮಾಯವಾದನು' ಎಂದಾಕ್ಷಣಾ ಪವರ್ ಸ್ಟಾರ್ ಪುನೀತ್ ಹಾಡಿರುವ ಹಾಡು ಎಲ್ಲರ ಕಿವಿಯಲ್ಲೂ ಗುಯ್ ಗುಡುತ್ತೆ. ಈ ಸಿನಿಮಾದಲ್ಲೂ ಪುನೀತ್ ಕಂಠವನ್ನು ನಾವೂ ಮಿಸ್ ಮಾಡಿಕೊಳ್ಳುವ ಹಾಗೇ ಇಲ್ಲ. ಎಸ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಸಿನಿಮಾಗೆ ಹಾಡೊಂದನ್ನ ಹಾಡಿದ್ದು, ಇದೀಗ ಆ ಸಾಂಗ್ ರಿಲೀಸ್ ಆಗಿದೆ.
 
ಕಳೆದೋದಾ ಕಾಳಿದಾಸ ಎಂಬ ಹಾಡನ್ನ ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ. ಸಾಂಗ್ ಅದ್ಭುತವಾಗಿ ಮೂಡಿಬಂದಿದ್ದು, ಲೋಕೇಷನ್ ಕೂಡ ಅಷ್ಟೇ ಅದ್ಭುತವಾಗಿದೆ. ಅಲ್ಲೊಂದು ಸುಂದರ ಲೋಕವನ್ನೇ ಹಾಡಿನಲ್ಲಿ ಸೃಷ್ಠಿಸಲಾಗಿದೆ. ವಿಕಾಸ್ ಕೂಡ ಬಹಳ ರೋಮ್ಯಾಂಟಿಕ್ ಆಗಿ ಕಳೆದೋದಾ ಕಾಳಿದಾಸ ಹಾಡಿನಲ್ಲಿ ಕಾಣ್ತಿದ್ದಾರೆ. ವಿ ನಾಗೇಂದ್ರ ಪ್ರಸಾದ್ ಬರೆದಿರುವ ಸಾಹಿತ್ಯಕ್ಕೆ ವಿಜಯ್ ಗುಮ್ಮಿನೇನಿ ಸಂಗೀತ ನೀಡಿದ್ದು, ಪುನೀತ್ ರಾಜ್ ಕುಮಾರ್ ಧ್ವನಿಯಾಗಿದ್ದಾರೆ. ಈ ಹಾಡು ಆನಂದ್ ಆಡಿಯೋದಲ್ಲಿ ರಿಲೀಸ್ ಆಗಿದ್ದು, ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಸಾಕಷ್ಟು ರೀಚ್ ಆಗಿದೆ.
ಜಯಮ್ಮನ ಮಗ ಖ್ಯಾತಿಯ ನಿರ್ದೇಶಕ ವಿಕಾಸ್ 'ಕಾಣದಂತೆ ಮಾಯಾವಾದನು' ಮೂಲಕ ಪರಿಪೂರ್ಣ ನಾಯಕನಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ವಿಕಾಸ್ ಗೆ ನಾಯಕಿಯಾಗಿ ಸಿಂಧು ಲೋಕನಾಥ್ ನಟಿಸಿದ್ದಾರೆ.
 
ರಾಜ್ ಪತ್ತಿಪಾಟಿ ನಿರ್ದೇಶನ ಮಾಡಿದ್ದು, ಚಂದ್ರಶೇಖರ್ ನಾಯ್ಡು, ಸೋಮಸಿಂಗ್, ಪುಷ್ಪಾ ಸೋಮಸಿಂಗ್ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಗುಮ್ಮಿನೇನಿ ವಿಜಯ್ ಸಂಗೀತವಿದ್ದು, ವಿ. ನಾಗೇಂದ್ರ ಪ್ರಸಾದ್, ಅನಿರುದ್ಧ್ ಶಾಸ್ತ್ರಿ, ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಅಚ್ಯತ್ ಕುಮಾರ್, ರಾಘವ್ ಉದಯ್, ಭಜರಂಗಿ ಲೋಕಿ ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಸ್ಥಳಾಂತರಕ್ಕೆ ಶುರುವಾಗಿದೆ ಪ್ಲ್ಯಾನ್

ದರ್ಶನ್ ಇಲ್ಲದೇ ಚಿತ್ರರಂಗಕ್ಕೆ ನಷ್ಟ ಎಂದವರಿಗೆ ರಮ್ಯಾ ಹೇಳಿದ್ದೇನು

ಜೈಲು ಹಕ್ಕಿ ದರ್ಶನ್ ಗೆ ಇಂದು ಪತ್ನಿ ನೋಡೋ ಭಾಗ್ಯ

ವಸಿಷ್ಠ ಸಿಂಹ ಪ್ರೀತಿಯ ಅಪ್ಪುಗೆಯನ್ನು ಜನ ಹೀಗನ್ನೋದಾ

ಅಜಯ್‌ ರಾವ್‌ರಿಂದ ಬೇರ್ಪಡುವ ನಿರ್ಧಾರದಿಂದ ಹಿಂದೆಸರಿದ ಸಪ್ನಾ

ಮುಂದಿನ ಸುದ್ದಿ
Show comments