Select Your Language

Notifications

webdunia
webdunia
webdunia
webdunia

ಮತ್ತೆ ಸಿನಿಮಾ ನಿರ್ಮಾಣದತ್ತ ಕೆ. ಮಂಜು

ಮತ್ತೆ ಸಿನಿಮಾ ನಿರ್ಮಾಣದತ್ತ ಕೆ. ಮಂಜು
, ಮಂಗಳವಾರ, 13 ಅಕ್ಟೋಬರ್ 2015 (11:04 IST)
ಕೆ. ಮಂಜು ಕನ್ನಡ ಚಿತರ್ರಂಗದ ಪ್ರಮುಖ ನಿರ್ಮಾಪಕರಲ್ಲಿ ಒಬ್ಬರು. ಆದ್ರೆ ಕಳೆದ ಒಂದು ವರ್ಷದಿಂದ ಮಂಜು ಸಿನಿಮಾರಂಗದಿಂದ ದೂರ ಉಳಿದಿದ್ದರು. ಆದ್ರೀಗ ಒಂದು ವರ್ಷದ ಗ್ಯಾಂಪ್ ಬಳಿಕ ಮಂಜು ಚಿತ್ರರಂಗಕ್ಕೆ ವಾಪಸ್ ಬಂದಿದ್ದಾರೆ. ಆದ್ರೆ ಅದು ಸ್ಯಾಂಡಲ್ ವುಡ್ ಗಲ್ಲ ಮಲೆಯಾಳಂ ಚಿತ್ರರಂಗಕ್ಕೆ. 
ಹೌದು.ಮಾಲಿವುಡ್ ನ ಸೂಪರ್ ಸ್ಟಾರ್ ಮಮ್ಮುಟ್ಟಿ ಅವರಿಗಾಗಿ ಸಿನಿಮಾವೊಂದನ್ನು ನಿರ್ಮಾಣ ಮಾಡುತ್ತಿದ್ದಾರೆ ಕೆ.ಮಂಜು. ಮಮ್ಮುಟ್ಟಿ ಕೂಡ ಸಿನಿಮಾಗೆ ಓಕೆ ಹೇಳಿದ್ದು ಕೇರಳದಲ್ಲಿ ಸ್ಕ್ರಿಪ್ಟ್ವಂರ್ಕ್ ನಡೆಯುತ್ತಿದೆ. ಈ ಸಿನಿಮಾಕ್ಕೆ ಜ್ಞಾನಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಫೆಬ್ರವರಿಯಲ್ಲಿ ಚಿತ್ರೀಕರಣ ಶುರುವಾಗಲಿದೆ. ಈ ಹಿಂದೆ ಕೆ. ಮಂಜು ಅವರ ನಿರ್ಮಾಣದಲ್ಲಿ ಮೂಡಿಬಂದ ಶಿಕಾರಿ ಚಿತ್ರದ ಮೂಲಕ ಮಮ್ಮುಟ್ಟಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 
 
ಈ ಹಿಂದೆ ಇವರಿಬ್ಬರ ಕಾಂಬಿನೇಷನ್ ನಲ್ಲಿ ಬಂದ ಶಿಕಾರಿ ಸಿನಿಮಾ ಕನ್ನಡ ಹಾಗೂ ಮಲೆಯಾಳಂನಲ್ಲಿ ಭರ್ಜರಿ ಪ್ರದರ್ಸನ ಕಂಡಿತ್ತು. ಇದೀಗ ಮತ್ತೆ ಕೆ. ಮಂಜು ಮತ್ತು ಮಮ್ಮುಟ್ಟಿ ಕಾಂಬಿನೇಷನ್ನತಲ್ಲಿ ಸಿನಿಮಾ ಬರುತ್ತಿದ್ದು, ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ.

Share this Story:

Follow Webdunia kannada