Select Your Language

Notifications

webdunia
webdunia
webdunia
webdunia

ಪಂಚ ಭೂತಗಳಲ್ಲಿ ವಿಲೀನರಾದ ಖ್ಯಾತ ನಿರ್ದೇಶಕ ಕೆ. ಬಾಲಚಂದರ್

ಪಂಚ ಭೂತಗಳಲ್ಲಿ  ವಿಲೀನರಾದ ಖ್ಯಾತ ನಿರ್ದೇಶಕ ಕೆ. ಬಾಲಚಂದರ್
, ಶುಕ್ರವಾರ, 26 ಡಿಸೆಂಬರ್ 2014 (09:45 IST)
ಭಾರತೀಯ ಚಿತ್ರರಂಗದ ಇತಿಹಾಸಕಾರ, ಭಾರತೀಯ ಚಿತ್ರರಂಗದ ಅನೇಕಾನೇಕ ಅಸಮಾನ್ಯ ಪ್ರತಿಭೆಗಳನ್ನು ಬೆಳಕಿಗೆ ತಂದ ಹರಿಕಾರ ನಿರ್ದೇಶಕ ಕೆ ಬಾಲಚಂದರ್ ಇನ್ನಿಲ್ಲ ಎನ್ನುವ ಸುದ್ದಿ ಸ್ವೀಕರಿಸಲಾಗುತ್ತಿಲ್ಲ ಅವರ ಅಭಿಮಾನಿಗಳಿಗೆ ಮತ್ತು ಶಿಷ್ಯ ವೃಂದಕ್ಕೆ. ರಜನಿಕಾಂತ್, ಕಮಲ್ ಹಾಸನ್, ಪ್ರಕಾಶ್ ರಾಜ್, ರಮೇಶ್ ಅರವಿಂದ್, ತಾರ ಅನುರಾಧ ಸೇರಿದಂತೆ ಅನೇಕಾನೇಕ ಸ್ಟಾರ್ ಮತ್ತು ಸೂಪರ್ ಸ್ಟಾರ್ ಗಳ  ತಾರಬದುಕಿಗೆ ತಿರುವು ನೀಡಿದ ಮಹನೀಯ ಕೆ ಬಾಲಚಂದರವರು ಇಹಲೋಕ ತ್ಯಜಿಸಿ ಭೂತಾಯಿಯಲ್ಲಿ ಕರಗಿದ್ದಾರೆ.
ಕಳೆದ ವಾರ ಅನಾರೋಗ್ಯದ ಕಾರಣದಿಂದ ಚೆನ್ನೈ ನಲ್ಲಿರುವ ಕಾವೇರಿ ಆಸ್ಪತ್ರೆಗೆ ದಾಖಲಾದ ಬಾಲಚಂದರ್ ಇಲ್ಲಿ ನಿರ್ದೇಶನ ಕೆಲಸ ಮುಗಿಸಿ ಹೊರಟು ಹೋಗಿದ್ದಾರೆ ಜಗತ್ ನಿಯಾಮಕನ ನಿರ್ದೇಶನದಂತೆ! 
ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಸೇರಿದಂತೆ ಅನೇಕ ಭಾಷೆಗಳಲ್ಲಿ ಸಿನಿಮಾ ನಿರ್ದೇಶನ ಮಾಡಿದ್ದ ಬಾಲಚಂದರ್ ಅವರಿಗೆ 2010  ರಲ್ಲಿ ಕೇಂದ್ರ ದಾದ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ  ಗೌರವಿಸಿತ್ತು. 
 
ಅವರ ಶಿಷ್ಯ ಕನ್ನಡದ ಸ್ಟಾರ್ ನಟ ರಮೇಶ್ ಅವರ ನಿರ್ದೇಶನದ ಉತ್ತಮ ವಿಲನ್ ಚಿತ್ರದಲ್ಲಿ  ನಟಿಸಿದ್ದೇ ಅವರ ಕೊನೆಯ ಚಿತ್ರವಾಗಿದೆ. ಇದರಲ್ಲಿ ಅವರ ಮತ್ತೊಬ್ಬ ಶಿಷ್ಯ ಉಳಗನಾಯಗನ್ ಡಾ. ಕಮಲ್ ಹಾಸನ್ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ.  ತಪ್ಪಿದತಾಳ, ಬೆಂಕಿಯಲ್ಲಿ ಅರಳಿದ ಹೂ, ಎರಡು ರೇಖೆಗಳು, ಮುಗಿಲ ಮಲ್ಲಿಗೆ , ಸುಂದರಸ್ವಪ್ನಗಳು ಚಿತ್ರಗಳು ಅವರ ನಿರ್ದೇಶನದ ಅಪರೂಪದ ರತ್ನಗಳಾಗಿವೆ. ವೆಬ್ ದುನಿಯಾ ತಂಡ  ಅವರ ಆತ್ಮಕ್ಕೆ ಶಾಂತಿ ದೊರಕಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತದೆ.

Share this Story:

Follow Webdunia kannada