Select Your Language

Notifications

webdunia
webdunia
webdunia
webdunia

ಥಿಯೇಟರ್ ಅಂಗಳಕ್ಕೆ ಬರೋದಕ್ಕೆ ರೆಡಿಯಾಗಿದೆ ಜ್ವಲಂತಂ

ಥಿಯೇಟರ್ ಅಂಗಳಕ್ಕೆ ಬರೋದಕ್ಕೆ ರೆಡಿಯಾಗಿದೆ ಜ್ವಲಂತಂ
, ಶನಿವಾರ, 29 ಆಗಸ್ಟ್ 2015 (10:32 IST)
ಕನ್ನಡದಲ್ಲಿ ಈಗ ಹೊಸ ಪ್ರತಿಭೆಗಳ ಪ್ರವಾಹವೇ ಹರಿದು ಬರ್ತಿದೆ. ಇದೀಗ ಅಂತಹದ್ದೇ ಒಂದು ತಂಡ ಸಿನಿಮಾ ಮಾಡಿಕೊಂಡು ರಿಲೀಸ್ ಗಾಗಿ ಕಾಯ್ತಿದೆ. ಅದ್ರಲ್ಲೂ ಕ್ವಾಲಿಟಿ ಮಾಸ್ ಪ್ರಯೋಗಗಳು ಸ್ಯಾಂಡಲ್ ವುಡ್ ನಲ್ಲಿ ಜಾಸ್ತಿಯಾಗ್ತಿದೆ. ಇದೇ ರೀತಿ ಜ್ವಲಂತಂ ಅನ್ನೋ ಕನ್ನಡ ಮಾಸ್ ಸಿನಿಮಾ ರೆಡಿಯಾಗಿದೆ. ಈಗಾಗ್ಲೇ ಸಣ್ಣದೊಂದು ಟ್ರೈಲರ್ ಮತ್ತು ಮೇಕಿಂಗ್ ನಿಂದ ಸುದ್ದಿಯಾಗಿದ್ದ ಸಿನಿಮಾ ಈಗ ಹೊಸ ಟ್ರೈಲರ್ ರಿಲಿಸ್ ಮಾಡಿದೆ. 
   
ಬಿ.ಎಮ್ ಅಂಬರೀಶ್ ಅನ್ನೋ ನವ ಪ್ರತಿಭೆ ಜ್ವಲಂತಂ ಮೂವಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಹೊಸ ತಂಡ ಕಟ್ಟಿರೋ ಅಂಬರೀಶ್ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಸಮ್ ಥಿಂಗ್ ಸ್ಪೆಷಲ್ ಅನ್ನ ಕನ್ನಡಿಗರ ಮುಂದೆ ಇಡ್ತಿದ್ದಾರೆ. ಈಗಾಗ್ಲೇ ಸದ್ದಿಲ್ಲದೆ ಶೂಟಿಂಗ್ ಮುಗಿಸಿರೋ ಚಿತ್ರತಂಡ ಭರ್ಜರಿಯಾಗಿ ಎಂಟ್ರಿಕೊಡೋದಕ್ಕೆ ರೆಡಿಯಾಗಿದ್ದಾರೆ. ಇನ್ನು ಜ್ವಲಂತ್ ಅನ್ನೋ ಹೊಸ ಹುಡುಗನನ್ನ ಈ ಚಿತ್ರದ ಮೂಲಕ ಪರಿಚಯಿಸಲಾಗ್ತಿದೆ. ಇನ್ನು ಮುಖ್ಯಭೂಮಿಕೆಯಲ್ಲಿ ದೀಪ್ತಿ ಕಾಪ್ಸೆ, ದೀಪಾಗೌಡ ಕಾಣಿಸಿಕೊಳ್ತಿದ್ದಾರೆ.
 
 ಈ ಚಿತ್ರದ ಇನ್ನೊಂದು ಇಂಟರೆಸ್ಟಿಂಗ್ ವಿಷಯ ಅಂದ್ರೆ ಕೊಲೆವೆರಿಡಿಗೆ ಧ್ವನಿಯಾಗಿದ್ದ ಕಾಲಿವುಡ್ ನ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಸಾಂಗ್ ಹಾಡಿದ್ದಾರೆ. ವಿಕ್ರಮ್ ಅನ್ನೋ ಹೊಸ ಟ್ಯಾಲೆಂಟ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಜ್ವಲಂತಂ ರೈತರ ಸಮಸ್ಯೆ ಮತ್ತೆ ಪ್ರಸ್ತುತ ರಾಜಕೀಯವನ್ನ ವಿಮರ್ಶೆ ಮಾಡುವ ಕಮರ್ಷಿಯಲ್ ಕಥೆ. ಸಾಮಾಜಿಕ ಕಳಕಳಿಯೊಂದಿಗೆ ವಿಭಿನ್ನ ಕಥೆಯೊಂದನ್ನ ಅಂಬರೀಶ್ ಹೆಣೆದಿದ್ದಾರೆ.

Share this Story:

Follow Webdunia kannada