Webdunia - Bharat's app for daily news and videos

Install App

ಜೂನಿಯರ್ ಐರಾವತ ಎಂಟ್ರಿ

Webdunia
ಶುಕ್ರವಾರ, 2 ಅಕ್ಟೋಬರ್ 2015 (17:47 IST)
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ  Mr.ಐರಾವತ ನಿನ್ನೆ ಬಿಡುಗಡೆ ಆಗಿದೆ. ಚಿತ್ರಕ್ಕೆ ಭರ್ಜರಿ ಓಪನ್ನಿಂಗ್ ಕೂಡಾ ಸಿಕ್ಕಿದೆ. ಗಾಂಧಿನಗರದ ಮುಖ್ಯ ಚಿತ್ರಮಂದಿರ ಬೆಂಗಳೂರಿನ ಸಂತೋಷ್ ನಲ್ಲಿ ಅಭಿಮಾನಿಗಳು ಅದ್ದೂರಿಯಾಗಿ ಐರಾವತನನ್ನ ಬರಮಾಡಿಕೊಂಡಿದ್ದಾರೆ. ಸಂತೋಷ್ ಚಿತ್ರಮಂದಿರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೃಹತ್ ಕಟೌಟ್ ಹಾಕಿರೋದು ನೀವೆಲ್ಲಾ ನೋಡಿದ್ದೀರಿ. 
ಈ ಕಟೌಟ್ ಜೊತೆಗೆ ಇನ್ನೊಬ್ಬ ಜೂನಿಯರ್ ಐರಾವತನ ಕಟೌಟ್ ಕೂಡಾ ನಿಮ್ಮಗೆ ಕಣ್ಣಿಗೆ ಬಿದ್ದಿರುತ್ತೆ ಅಲ್ವಾ. ಹೌದು ಆ ಕಟೌಟ್ ನಲ್ಲಿರೋದು ಬೇರ್ಯಾರು ಅಲ್ಲ. ದರ್ಶನ್ ಪುತ್ರ ವಿನೀಶ್. ಮೇನ್ ಥಿಯೇಟರ್ ನಲ್ಲಿ ವಿನೀಶ್  ಕಟೌಟ್ ಅನ್ನ ಹಾಕಿರೋದು ವಿಶೇಷ.  ಮೊದಲ ಬಾರಿಗೆ ವಿನೀಶ್  Mr.ಐರಾವತ' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. 
 
ಇನ್ನೊಂದು ವಿಶೇಷ ಅಂದ್ರೆ ತಮ್ಮ ಪಾತ್ರಕ್ಕೆ ವಿನೀಶ್  ತಾವೇ ಡಬ್ ಕೂಡ ಮಾಡಿದ್ದಾರೆ. ವಿನೀಶ್ ಚಿತ್ರದಲ್ಲಿ ಎಂಟ್ರಿ ಕೊಡುವುದು ಕ್ಲೈಮ್ಯಾಕ್ಸ್ ಸೀನ್ ನಲ್ಲಿ. ತಾನು ಕೂಡಾ ಅಪ್ಪನಂತೆ ದಕ್ಷ ಐ.ಪಿ.ಎಸ್ ಅಧಿಕಾರಿ ಆಗ್ಬೇಕು ಅಂತ ವಿನೀಶ್ ಮುದ್ದು ಮುದ್ದಾಗಿ  ಡೈಲಾಗ್ ಹೊಡೆದಿದ್ದಾರೆ. ಈ ಡೈಲಾಗ್ ಬರ್ತಿದ್ದ ಹಾಗೆ  ಪ್ರೇಕ್ಷಕರ ಚಪ್ಪಾಳೆ ಶಿಳ್ಳೆಗೆ ಲೆಕ್ಕವೇ ಇಲ್ಲ. ಅಲ್ಲಿಗೆ ತೂಗುದೀಪ ಶ್ರೀನಿವಾಸ್ ರ ಮತ್ತೊಂದು ಕುಡಿ ಚಿತ್ರರಂಗವನ್ನ ಪ್ರವೇಶಿಸಿದೆ ಅನ್ನೋದು ಸುಳ್ಳಲ್ಲ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments