Select Your Language

Notifications

webdunia
webdunia
webdunia
webdunia

ಶಿವರಾಜ್ ಕುಮಾರ್-ಪುನೀತ್ ಚಿತ್ರವನ್ನು ಜಯಣ್ಣ ನಿರ್ಮಾಣ

ಶಿವರಾಜ್ ಕುಮಾರ್-ಪುನೀತ್ ಚಿತ್ರವನ್ನು ಜಯಣ್ಣ ನಿರ್ಮಾಣ
, ಮಂಗಳವಾರ, 28 ಜುಲೈ 2015 (10:25 IST)
ನಿನ್ನೆ ನಾವು ಒಂದು ಸುದ್ದಿ ತಿಳಿಸಿದ್ದೆವು. ಅದರ ಪ್ರಕಾರ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಚಿತ್ರವನ್ನು ಕನಕಪುರ ಶ್ರೀನಿವಾಸ್ ಅವರು ನಿರ್ಮಾಣ ಮಾಡಲಿದ್ದಾರೆ. ಆದರೆ ಈಗ ಬಂದ ಸುದ್ದಿ ಎಂದರೆ ಆ ಚಿತ್ರವನ್ನು ಜಯಣ್ಣ ತಂಡವೇ ನಿರ್ಮಾಣ ಮಾಡಲಿದೆ. ವಿಷಯದ ಬಗ್ಗೆ ಮತ್ತೆ ದೃಷ್ಟಿ ಹಾಯಿಸಿದರೆ....
ಶಿವಣ್ಣ ಹಾಗೂ ಪುನೀತ್ ಅವರ ಅಭಿನಯದ ಚಿತ್ರಗಳು ಈಗ  ನಿರ್ಮಾಣದ ಹಂತದಲ್ಲಿದೆ. ಬಹಳ ದಿನಗಳ ಬಳಿಕ ಅಣ್ಣತಮ್ಮಂದಿರ ಚಿತ್ರ ತೆರೆ ಏರುವ ಸಾಧ್ಯತೆಗಳು ಕಂಡು ಬರುತ್ತಿವೆ. ಇತ್ತೀಚೆಗೆ ಆ ಚಿತ್ರಕ್ಕೆ ಸಂಬಂಧಪಟ್ಟಂತೆ ಜಯಣ್ಣ ಟೀಮ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿಲ್ಲ ಅದರ ಬದಲಿಗೆ ಕನಕಪುರ ಶ್ರೀನಿವಾಸ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ರವಿವರ್ಮ ಅವರ ಮೊಟ್ಟ ಮೊದಲ ನಿರ್ದೇಶನದ ಚಿತ್ರಕ್ಕೆ ಶ್ರೀನಿವಾಸ್ ಅವರು ಹಣ ಹೂಡುತ್ತಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಆದರೆ ಈ ಬಗ್ಗೆ ಜಯಣ್ಣ ಅಲ್ಲಗಳೆದಿದ್ದಾರೆ. ತಾವು ಈ ಪ್ರಾಜಕ್ಟ್ ಬಿಟ್ಟು ಹೊರ ಹೋಗಿಲ್ಲ. ಬದಲಿಗೆ ಆ ಚಿತ್ರದ ಹಕ್ಕು ತಮಗೆ ಕೊಡುವಂತೆ ಬಹಳಷ್ಟು ಜನರುಕೇಳಿದ್ದರು. ಆದರೆ  ತಾವು ಆ ರೀತಿ ಮಾಡಿಲ್ಲ, ಈಗ ಚಿತ್ರದ ಸ್ಕ್ರಿಪ್ಟ್ ಕೆಲಸ ಆರಂಭವಾಗಿದೆ. ಮುಂದಿನ ವರ್ಷ ಜನವರಿ ತಿಂಗಳಲ್ಲಿ ಶೂಟಿಂಗ್ ಕೆಲಸ ಆರಂಭ ಮಾಡಲಾಗುತ್ತದೆ ಎಂದಿದ್ದಾರೆ ಜಯಣ್ಣ ಹಾಗೂ ತಂಡದವರು. ಇಂತಹ ಸುದ್ದಿಗಳು ಹರಡುವುದು ಸಾಮಾನ್ಯ ಸಂಗತಿ. ಕನ್ನಡಿಗರ ಬಹುನಿರೀಕ್ಷಿತ ಚಿತ್ರವನ್ನು ನಿರ್ಮಾಣ ಮಾಡುವ ಕೆಲಸ ಕೈ ಬಿಡುವ ಹುಂಬತನ ಯಾವ ನಿರ್ಮಾಪಕ ಸಹ ಮಾಡುವುದಿಲ್ಲ. ಹಾಗಿದ್ದ ಮೇಲೆ ಯಶಸ್ವಿ ನಿರ್ಮಾಪಕ ಜಯಣ್ಣ ಆರೀತಿ ಮಾಡ್ತಾರ ?! 

Share this Story:

Follow Webdunia kannada