Select Your Language

Notifications

webdunia
webdunia
webdunia
webdunia

ಚಿತ್ರೀಕರಣ ವೇಳೆ ಜಯರಾಂ ಕಾರ್ತಿಕ್‌ಗೆ ಗಾಯ, ಆಸ್ಪತ್ರೆಗೆ ದಾಖಲು

ಚಿತ್ರೀಕರಣ ವೇಳೆ ಜಯರಾಂ ಕಾರ್ತಿಕ್‌ಗೆ ಗಾಯ, ಆಸ್ಪತ್ರೆಗೆ ದಾಖಲು
, ಶುಕ್ರವಾರ, 27 ಫೆಬ್ರವರಿ 2015 (09:40 IST)
ಅಶ್ವಿನಿ ನಕ್ಷತ್ರದ ಜೆಕೆ ಕನ್ನಡ ಚಿತ್ರರಂಗದ ನಟ ಜೆಕೆ ಅಲಿಯಾಸ್ ಜಯರಾಂ ಕಾರ್ತಿಕ್ ಅವರು ಅಪಘಾತಕ್ಕೆ ತುತ್ತಾಗಿದ್ದಾರೆ. ಮತ್ತೊಮ್ಮೆ ಶ್  ಎನ್ನುವ ಚಿತ್ರದಲ್ಲಿ ನಟಿಸುತ್ತಿರುವ ಈ ನಾಯಕ ನಟ ಚಿತ್ರೀಕರಣದ ಸ್ಥಳದಲ್ಲಿ ಅಪಘಾತಕ್ಕೆ ಈಡಾಗಿದ್ದಾರೆ. ದೃಶ್ಯ ಒಂದರಲ್ಲಿ ಕುದುರೆ ಸವಾರಿ ಮಾಡುವಾಗ ಕುದುರೆ ಇವರ ಕಾಲು ಒದ್ದ ಕಾರಣ ಗಾಯವಾಗಿ ಅತಿಯಾದ ನೋವು ಉಂಟಾಯಿತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಕಾಲು ಊದಿದೆ  ಎನ್ನುವ ಸುದ್ದಿ ಇದೆ. 
ಈಟೀವಿ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಅಶ್ವಿನಿ ನಕ್ಷತ್ರ ಧಾರಾವಾಹಿಯ ಮೂಲಕ ಕನ್ನಡಿಗರಿಗೆ ಹೆಚ್ಚು ಗೊತ್ತಾದ ಈ ನಟ ಈಗ ಜಸ್ಟ್ ಲವ್ ಎನ್ನುವ ಚಿತ್ರದ ಜೊತೆಗೆ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಕರ್ನಾಟಕ ಬುಲ್ಡೋಜರ್ ಟೀಮ್‌ನಲ್ಲಿ ಪ್ರಮುಖ ಆಟಗಾರ ಸಹಿತ ಆಗಿರುವ ಜೆಕೆ ಕನ್ನಡ ಚಿತ್ರರಂಗದ ಭರವಸೆಯ ನಟರಾಗಿದ್ದಾರೆ. ಈಗ ಆದ ಗಾಯದಿಂದ ಬೇಗ ಗುಣಮುಖರಾಗಿ ಮತ್ತೆ ತಮ್ಮ ಕೆಲಸಗಳಲ್ಲಿ ತೊಡಗಿಸಿ ಕೊಳ್ಳಲಿ ಎನ್ನುವ ಹಾರೈಕೆ ನಮ್ಮದಾಗಿದೆ.

Share this Story:

Follow Webdunia kannada