Select Your Language

Notifications

webdunia
webdunia
webdunia
webdunia

ಜೈ ಭಜರಂಗಬಲಿ ಇಂದು ರಾಜ್ಯಾದ್ಯಂತ ತೆರೆಗೆ

ಜೈ ಭಜರಂಗಬಲಿ ಇಂದು ರಾಜ್ಯಾದ್ಯಂತ ತೆರೆಗೆ
, ಶುಕ್ರವಾರ, 12 ಡಿಸೆಂಬರ್ 2014 (10:20 IST)
ಕನ್ನಡದ ಚಾಕೋಲೆಟ್ ಹೀರೋ ಅಜಯ್  ಕೃಷ್ಣ ರಾವ್ ಮತ್ತು ಮುದ್ದು ಹುಡುಗಿ ಸಿಂಧು ಲೋಕ ನಾಥ್ ಅವರ ಅಭಿನಯದ ಜೈ ಭಜರಂಗ ಬಳಿ ಇಂದು ಬಿಡುಗಡೆ ಆಗುತ್ತಿದೆ.  ಹರಿಮೋನಿಯಂ ರೀಟ್ಸ್ ಲಾಂಛನದಲ್ಲಿ ಎಸ್.ಟಿ.ಪಾಲ್ರಾಜ್ ಅವರು ನಿರ್ಮಿಸಿರುವ ಹಾಗೂ ರವಿವರ್ಮ ನಿರ್ದೇಶನದ ಜೈ ಭಜರಂಗ ಬಲಿ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಸಂಗಮ ಚಿತ್ರದ ನಂತರ ರವಿವರ್ಮ ಅವರು ನಿರ್ದೇಶಿಸಿರುವ ಎರಡನೇ  ಚಿತ್ರವಾಗಿದೆ. ಇದಕ್ಕೆ   ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ.  ಎ.ವೆಂಕಟೇಶ್ ಅವರ ಛಾಯಾಗ್ರಹಣ, ಗಣೇಶ್ ಸಂಕಲನ, ಇಮ್ರಾನ್, ಕಲೈ ನೃತ್ಯ ನಿರ್ದೇಶನ ರವಿವರ್ಮವಿದೆ. ಯೋಗರಾಜ್ ಭಟ್ ಸಾಹಿತ್ಯ, ವಿನಾಯಕರಾಮ ಕಲಗಾರು ಸಂಭಾಷಣೆ ಚಿತ್ರಕ್ಕಿದೆ. ರಾಮಯ್ಯ ಗುಬ್ಬಿ ಈ ಚಿತ್ರದ ಸಹ ನಿರ್ಮಾಪಕರು. 
 
ಅಜಯ್ ರಾವ್, ಸಿಂಧೂಲೋಕನಾಥ್, ಅನಂತನಾಗ್, ರವಿಶಂಕರ್, ಶೋಭರಾಜ್, ಆದಿಲೋಕೇಶ್, ಬುಲೆಟ್  ಪ್ರಕಾಶ್ , ಮಿತ್ರ, ಅರುಣ್ ಸಾಗರ್, ಶ್ರುತಿನಾಯ್ಡು ಮುಂತಾದವರು ನಟಿಸಿದ್ದಾರೆ. 

Share this Story:

Follow Webdunia kannada