Webdunia - Bharat's app for daily news and videos

Install App

ಅನಾರೋಗ್ಯ ಪೀಡಿತ ಕಿಲ್ಲರ್ ವೆಂಕಟೇಶ್ ಮೇಲೆ ಜಗ್ಗೇಶ್ ಗೆ ಯಾಕಿಷ್ಟು ಪ್ರೀತಿ ಗೊತ್ತಾ?

Webdunia
ಗುರುವಾರ, 20 ಫೆಬ್ರವರಿ 2020 (10:40 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಪೋಷಕ ನಟ ಕಿಲ್ಲರ್ ವೆಂಕಟೇಶ್ ಇಂದು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಇವರ ಚಿಕಿತ್ಸೆಗೆ ಹಣವಿಲ್ಲದೇ ಈಗ ಚಿತ್ರರಂಗದ, ಅಭಿಮಾನಿಗಳ ನೆರವು ಪಡೆಯಲು ಸ್ವತಃ ಜಗ್ಗೇಶ್ ತಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದಾರೆ. ಅಷ್ಟಕ್ಕೂ ತನಗೆ ಕಿಲ್ಲರ್ ವೆಂಕಟೇಶ್ ಮೇಲೆ ಯಾಕೆ ಇಷ್ಟೊಂದು ಪ್ರೀತಿ ಎನ್ನುವುದನ್ನು ಸ್ವತಃ ಜಗ್ಗೇಶ್ ಹೇಳಿಕೊಂಡಿದ್ದಾರೆ.

ರಣಧೀರ ಸಿನಿಮಾ ಮಾಡಲು ಹೊರಟಾಗ ರವಿಚಂದ್ರನ್ ನನ್ನ ಕರೆದು ನಾನು ರಣಧೀರ ಸಿನಿಮಾ ಮಾಡುತ್ತಿದ್ದೇನೆ, ನೀನೂ ನಟಿಸು, ಜತೆಗೆ ಇಬ್ಬರು ಹುಡುಗರಿದ್ದರೆ ಕರೆದುಕೊಂಡು ಬಾ ಎಂದಿದ್ದರು. ಆಗ ನಾನು ಕಿಲ್ಲರ್ ವೆಂಕಟೇಶ್ ನ್ನು ಪರಿಚಯಿಸಿದೆ. ನನಗೆ ಯಾಕೆ ಅವನ ಮೇಲೆ ಅಷ್ಟೊಂದು ಪ್ರೀತಿ ಎಂದರೆ 1984 ರಲ್ಲಿ ನನ್ನ ಮದುವೆಗೆ ಇದೇ ಕಿಲ್ಲರ್ ವೆಂಕಟೇಶ ನನಗೆ 700 ರೂ. ನೀಡಿದ್ದ. ಆ ಪ್ರೀತಿಯ ಋಣದಿಂದಾಗಿ ನನ್ನ ಬಹುತೇಕ ಸಿನಿಮಾದಲ್ಲಿ ಅವನಿಗೆ ಅವಕಾಶ ಕೊಡುತ್ತಿದ್ದೆ. ಪಾಪ ಇಂದು ಅವನ ಸ್ಥಿತಿ ನೋಡಿ ಭಾವುಕನಾದೆ. ಕೈಲಾದ ಸಹಾಯ ಮಾಡಿದೆ. ಮುಂದಿನದ್ದು ರಾಯರು ನೋಡಿಕೊಳ್ಳುತ್ತಾರೆ ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಿತ್ಯಾ ಪಾತ್ರ ನೋಡಿ ಕೆಟ್ಟ ಕಾಮೆಂಟ್ ಗೆ ಬೇಸರಗೊಂಡ ನಮ್ರತಾ ಗೌಡ ಹೇಳಿದ್ದೇನು

777 ಚಾರ್ಲಿ ಸಿನಿಮಾಕ್ಕೆ ನಾಲ್ಕು ರಾಜ್ಯ ಚಲನಚಿತ್ರ ಪ್ರಶಸ್ತಿ: ಪ್ರಶಸ್ತಿ ಗೆದ್ದ ರಕ್ಷಿತ್‌ ಶೆಟ್ಟಿ ಮೊದಲ ಪ್ರತಿಕ್ರಿಯೆ

ಹೊಂಬಾಳೆ ಫಿಲಂಸ್ ಮನವಿಗೂ ಬೆಲೆಯಿಲ್ಲ, ಕಾಂತಾರ ಕ್ಲೈಮ್ಯಾಕ್ಸ್ ದೃಶ್ಯಗಳೇ ಲೀಕ್

ಜೈಲಿನಲ್ಲಿ ದರ್ಶನ್ ಸ್ಥಿತಿಕಂಡು ಪತ್ನಿ ವಿಜಯಲಕ್ಷ್ಮಿಕಣ್ಣೀರು ಹಾಕಿದ್ದು ಯಾಕೆ ಗೊತ್ತಾ

ಪ್ರತಿಯೊಬ್ಬ ಫಿಲ್ಮ್ ಮೇಕರ್ಸ್‌ ನಾಚಿಕೆಪಡಬೇಕು: ಕಾಂತಾರ ನೋಡಿ ರಾಮ್‌ ಗೋಪಾಲ್ ವರ್ಮಾ ಹೀಗಂದಿದ್ಯಾಕೆ

ಮುಂದಿನ ಸುದ್ದಿ
Show comments