Webdunia - Bharat's app for daily news and videos

Install App

ಮಂಗಳೂರು ಹೈವೇ ಬಾರಲ್ಲಿ ’ನುಗ್ಗೆಕಾಯಿ’ ಡ್ಯಾನ್ಸ್

Webdunia
ಸೋಮವಾರ, 19 ಡಿಸೆಂಬರ್ 2016 (11:50 IST)
ಇತ್ತೀಚೆಗೆ ತಾನೆ ಮುಹೂರ್ತವನ್ನಾಚರಿಸಿಕೊಂಡಿದ್ದ ವಿಭಿನ್ನ ಶೀರ್ಷಿಕೆ ಚಿತ್ರ ‘ನುಗ್ಗೇಕಾಯಿ’ಗೆ ಮಂಗಳೂರು ಸುತ್ತಮುತ್ತ ಚಿತ್ರೀಕರಣ ಭರದಿಂದ ನಡೆಸಲಾಗುತ್ತಿದೆ.  ಒಂದು ವಿಭಿನ್ನ ಕಥಾಹಂದರ ಹೊಂದಿದ ಈ ಚಿತ್ರಕ್ಕೆ ಮಂಗಳೂರು, ಸೂರತ್ಕಲ್, ಉಲ್ಲಾಳ ಹಾಗೂ ಸೂರತ್‍ಕಲ್ ಬೀಚ್ ಸುತ್ತಮುತ್ತ ಸುಮಾರು 30ರಷ್ಟು ಭಾಗದ ಚಿತ್ರೀಕರಣವನ್ನು ನಡೆಸಲಾಗಿದೆ.  
 
ಮಂಗಳೂರು ಹೈವೇನಲ್ಲಿರುವ ಪಬ್‍ವೊಂದಲ್ಲಿ ಬಾಂಬೆ ಬೆಡಗಿ ನದಿಯಾಖಾನ್ ಅಭಿನಯದ ‘ಮನೇದೇವ್ರು ಹಣೆಮೇಲೆ ಬರ್‍ದೋನೆ ಸ್ಟಾರು, ಹುಡುಗರಿಗೆ ಕೈಕೊಟ್ರೆ ಸೇರ್ತಾರೆ ಬಾರು’ ಎಂಬ ಹಾಡನ್ನು ಚಿತ್ರೀಕರಿಸಿಕೊಳ್ಳಲಾಯಿತು. ನಟ ಸುಚೇಂದ್ರಪ್ರಸಾದ್, ಬೀರಾದಾರ್ ಕೂಡ ಈ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. 
 
ಚಿತ್ರಕ್ಕೆ ಎ.ವೇಣುಗೋಪಾಲ್ ಚಿತ್ರಕಥೆ, ನಿರ್ದೇಶನ, ಸುರೇಶ್ ಬಿ.ಎಸ್.ವಿ. ಸಾಹಿತ್ಯ ಮತ್ತು ಸಂಗೀತ, ಸೂರ್ಯಕಾಂತ್ ಹೊನ್ನಳ್ಳಿ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ಮಾದೇಶ್ ಮುತ್ತಪ್ಪ ಸಂಭಾಷಣೆ, ಸಹ ನಿರ್ದೇಶನ, ಹೈಟ್‍ಮಂಜು, ಕಂಬಿರಾಜು ನೃತ್ಯ ನಿರ್ದೇಶನ, ಬಾಬುಖಾನ್ ಕಲಾನಿರ್ದೇಶನವಿದೆ.  
 
ಮಧುಸೂದನ್, ವಿಸ್ತಾರ್‍ನರೋನ, ಸುಚೇಂದ್ರಪ್ರಸಾದ್, ಕ್ರಿಸ್ಟಿನಾಜಾಯ್, ದತ್ತಣ್ಣ, ಬ್ಯಾಂಕ್ ಜನಾರ್ಧನ್, ಬಿರಾದಾರ, ಪೂಜಾಶೆಟ್ಟಿ, ಜನಿಫರ್ ಆಂಟನಿ, ರಂಜಿತ್, ಉದಿತ್ ಪ್ರಸಾದ್ ಮುಂತಾದವರ ತಾರಾಬಳಗವಿದೆ. ಆ್ಯಡ್ಸ್ ಕ್ರಿಯೇಷನ್ಸ್ ಲಾಂಛನದಲ್ಲಿ ಪ್ರೀತ್ ಎಸ್ ಹೆಗ್ಡೆ (ಅನ್ನು) ಕಥೆ ಬರೆದು ನಿರ್ಮಿಸುತ್ತಿರುವ ಚಿತ್ರವಿದು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Operation Sindoor ಬಗ್ಗೆ ಮೌನ ಕದನ ವಿರಾಮಕ್ಕೆ ಖುಷಿ: ಸಲ್ಮಾನ್ ಖಾನ್ ವರಸೆಗೆ ಆಕ್ರೋಶ

Vasuki Vaibhav: ತಾಯಂದಿರ ದಿನವೇ ಗುಡ್ ನ್ಯೂಸ್ ಹಂಚಿಕೊಂಡ ವಾಸುಕಿ ವೈಭವ್

Ravi Mohan:ಸುದೀರ್ಘ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಗಾಯಕಿ ಜತೆ ಪೋಸ್ ಕೊಟ್ಟ ರವಿ ಮೋಹನ್‌

Operation Sindoor:ಶೀರ್ಷಿಕೆಗಾಗಿ ಬಾಲಿವುಡ್‌ ನಿರ್ಮಾಪಕರ ಮಧ್ಯೆ ಭಾರೀ ಪೈಪೋಟಿ

Operation Sindoor: ಶಾಂತವಾಗಿರಿ, ಜಾಗರೂಕರಾಗಿರಿ, ಗೆಲುವು ನಮ್ಮದೇ: ರಾಜಮೌಳಿ ಪೋಸ್ಟ್‌

ಮುಂದಿನ ಸುದ್ದಿ
Show comments