Select Your Language

Notifications

webdunia
webdunia
webdunia
webdunia

ಶಂಕರ್ ಸಿನಿಮಾದಲ್ಲಿ ನಟಿಸಲು ಒಲ್ಲೆ ಎಂದ ಐಶ್ವರ್ಯ ರೈ

ಶಂಕರ್ ಸಿನಿಮಾದಲ್ಲಿ ನಟಿಸಲು ಒಲ್ಲೆ ಎಂದ ಐಶ್ವರ್ಯ ರೈ
, ಮಂಗಳವಾರ, 27 ಜನವರಿ 2015 (10:53 IST)
ಐ ಸಿನಿಮಾವನ್ನು ನಿರ್ದೇಶಕ ಶಂಕರ್ ಅವರು ಹಾಲಿವುಡ್ ರೀತಿಯಲ್ಲಿ ನಿರ್ಮಿಸಿದ್ದರು. ಆದರೆ ಅದು ವಿಮರ್ಶಕರಿಗೆ ಅಷ್ಟೇನೂ ಮೆಚ್ಚುಗೆ ಆಗಲಿಲ್ಲ. ಈಗ ಶಂಕರ್ ಅವರು ತಮ್ಮ ಮುಂದಿನ ಚಿತ್ರದ ಸಿದ್ಧತೆಯತ್ತ ಗಮನ ನೀಡಿದ್ದಾರೆ. ಅದರ ಅನ್ವಯ ಪೂರಕ ಕೆಲಸಗಳನ್ನು ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ಸಂಬಂಧಪಟ್ಟಂತೆ ಈಗ ಶರವೇಗದಲ್ಲಿ ಕೆಲಸವನ್ನು ಮಾಡಲು ಆರಂಭಿಸಿದ್ದಾರೆ. ಶಂಕರ್ ಅವರ ಮುಂದಿನ ಚಿತ್ರದ ಜನರು ಮಾತುಕತೆ ಆರಂಭ ಮಾಡುತ್ತಾ ಹೇಗಿರಬಹುದು ಎಂದು ಕಲ್ಪಿಸಿ ಕೊಳ್ಳುತ್ತಿದ್ದಾರೆ. 
ತಮ್ಮ ಮುಂದಿನ ಚಿತ್ರದಲ್ಲಿ ಅಜಿತ್ ಅವರು ಮುಖ್ಯ ಪಾತ್ರಧಾರಿ ಆಗಿದ್ದಾರೆ. ಹಾಗಂತ ಕಾಲಿವುಡ್ ನಲ್ಲಿ ಗಟ್ಟಿಯಾದ  ನ್ಯೂಸ್  ಹರಡಿದೆ. ಅಜಿತ್ ಸಹಿತ ಶಂಕರ್ ಅವರ ಚಿತ್ರದಲ್ಲಿ ನಟಿಸಲು ದಿನಾಂಕ ನೀಡಿದ್ದಾರಂತೆ. ಈಗ ಈ ಪ್ರಾಜಕ್ಟ್ಗೆ ಸಂಬಂಧ ಪಟ್ಟ  ಆರಂಭಿಕ ಹಂತದ ಕೆಲಸಗಳು  ಭರದಿಂದ ಸಾಗಿದೆ. ಅದಾದ ನಂತರ  ಇದರಲ್ಲಿ ನಟಿಸುವ ಉಳಿದ ಕಲಾವಿದರ ಬಗ್ಗೆ ಆಯ್ಕೆ ಕಾರ್ಯಕ್ರಮದತ್ತ ಆದ್ಯತೆ ನೀಡಲಾಗುತ್ತದೆ ಎಂದಿದೆ ಆ ಚಿತ್ರತಂಡ. 
 
ಕಾಲಿವುಡ್ ನಲ್ಲಿ ಶಂಕರ್ ಮತ್ತು ಅಜಿತ್  ಜೋಡಿಯ ಈ ಚಿತ್ರದಲ್ಲಿ ಐಶ್ವರ್ಯ ರೈ ಸಹಿತ ನಟಿಸುತ್ತಿದ್ದಾರೆ ಎನ್ನುವ ಸುದ್ದಿಗೂ ಸಹಿತ ಹೆಚ್ಚಿನ ಮಹತ್ವ ದೊರಕಿದೆ. ಈ ವಿವರದ ಬಗ್ಗೆ ಹೇಳುವುದಾದರೆ ಕಳೆದವಾರ ಐಶ್ ಜೊತೆ ಈ ಬಗ್ಗೆ ಶಂಕರ್ ಅವರು ಮಾತುಕತೆ ನಡೆಸಿದ್ದಾರಂತೆ. 
ಆದರೆ ಆ ಬಗ್ಗೆ ಐಶ್ವರ್ಯ ಇನ್ನು ಸರಿಯಾದ ಉತ್ತರ ನೀಡಿಲ್ಲ, ಬದಲಿಗೆ ನೋಡುವ ಸ್ವಲ್ಪ ದಿನ ಕಾಯ್ರಿ ಎಂದು ಹೇಳಿದ್ದಾಳಂತೆ. ಆದರೆ ಶಂಕರ್ ತಂಡ ಈ ಬಗ್ಗೆ ಸ್ಪಷ್ಟ ಉತ್ತರ ನೀಡ ಬೇಕು ಎಂದು ಕೇಳಿದಾಗ ಆಕೆ ಸದ್ಯಕ್ಕೆ ತನಗೆ ಸಿನಿಮಾದಲ್ಲಿ ನಟಿಸುವ ಆಸಕ್ತಿ ಇಲ್ಲ ಎಂದು ಹೇಳಿದ್ದಾಳೆ. ಇದರಿಂದ ಆಕೆ ಶಂಕರ್ ಹಾಗು ಅಜಿತ್ ಅವರ ಕಾಂಬಿನೇಶನ್ ನಲ್ಲಿ ನಟಿಸುವ ಸಾದ್ಯತೆ ಇಲ್ಲ ಎನ್ನುವುದೇ ಪ್ರಸ್ತುತ ಕಾಲಿವುಡ್ ನಲ್ಲಿ ಕೇಳಿ ಬರುತ್ತಿರುವ ಸಂಗತಿಯಾಗಿದೆ. ಆದರೆ ಈ ಸುದ್ದಿ ಇನ್ನು ಶಂಕರ್ ಟೀಮ್ ನಿಂದ ಅಧಿಕೃತವಾಗಿ ಹೊರ ಬಂದಿಲ್ಲ. ಆದ್ದರಿಂದ ಏನಾಗಿದೆ ಎನ್ನುವುದು ಯಾರಿಗೂ ಸ್ಪಷ್ಟತೆಯಿಲ್ಲ, ಬಂದ ವಾರ್ತೆಗಳ ಬಗ್ಗೆ ಕೇಳುತ್ತ ಓದುತ್ತ.. ತಮ್ಮ ಕೈಲಾದಷ್ಟು  ಹರಡುತ್ತಾ ಇದ್ದಾರೆ ಮಂದಿ !  
 

Share this Story:

Follow Webdunia kannada