Webdunia - Bharat's app for daily news and videos

Install App

'ಐರಾವತ'ದ ಸಾಹಸ ದೃಶ್ಯಗಳ ಚಿತ್ರೀಕರಣ ತಿರುಪತಿ ರಸ್ತೆಯಲ್ಲಿ

Webdunia
ಶನಿವಾರ, 23 ಮೇ 2015 (10:20 IST)
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯದ ಬಹು ನಿರೀಕ್ಷಿತ ಚಿತ್ರ ಐರಾವತ. ಆ ಚಿತ್ರವನ್ನು ಎ ಪಿ ಅರ್ಜುನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅರ್ಜುನ್ ಈಗಾಗಲೇ ಅಂಬಾರಿ, ಅದ್ಧೂರಿ ಯಶಸ್ವಿ ಚಿತ್ರದ ಜೊತೆಗೆ ರಾಟೆ ಚಿತ್ರವನ್ನು ನಿರ್ದೇಶಿಸಿ ಗೆದ್ದಿರುವ ನಿರ್ದೇಶಕ. ಅವರು ಈಗ ಐರಾವತವನ್ನು ಸಹಿತ ಕಳೆದ ಕೆಲವು ತಿಂಗಳುಗಳಿಂದ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಸಾಹಸ ದೃಶ್ಯಗಳು ಹಳೆಯ ತಿರುಪತಿ ರಸ್ತೆಯಲ್ಲಿ ಕಳೆದ ಆರು ದಿನಗಳಿಂದ ನಿರಂತರವಾಗಿ ನಡೆಯಿತು. ಭಾರಿ ಮೊತ್ತದಲ್ಲಿ ಶೂಟ್ ಮಾಡಿದ ಸಾಹಸ ದೃಶ್ಯಗಳಲ್ಲಿ  ರಾಮ್ ಲಕ್ಷ್ಮಣ್ ಅವರು ಭಾಗವಹಿಸಿದ್ದರು. 
ದರ್ಶನ್, ಊರ್ವಶಿ ರುಟೆಲಾ, ಪ್ರಕಾಶ್ ರೈ , ಅಶೋಕ್, ಜಿಕೆ ಗೋವಿಂದ ರಾವ್ ಮತ್ತು ಸ್ಟಂಟ್ ಮ್ಯಾನ್  ಅಭಿನಯಿಸಿದ ಈ ದೃಶ್ಯಗಳ ಎಲ್ಲರ ಗಮನ ಸೆಳೆಯುವಂತೆ ಚಿತ್ರೀಕರಣವಾಯ್ತು. ಎರಡು ಯಶಸ್ವಿ ಚಿತ್ರಗಳನ್ನು ನೀಡಿದರೂ ಅರ್ಜುನ್ ನಿರ್ದೇಶನದ ಮೂರನೆಯ ಚಿತ್ರ ರಾಟೆ ಹೇಳಿಕೊಳ್ಳುವಂತಹ  ಗೆಲುವು ನೀಡಲಿಲ್ಲ. ಆದ ಕಾರಣ ದರ್ಶನ್ ಚಿತ್ರದ ಯಶಸ್ಸಿಗಾಗಿ ಅವರು ಬಹಳಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ಈಗ ಎಂಎಲ್ಎ ಆಗಿರುವ ನಿರ್ಮಾಪಕ ಸಂದೇಶ್ ನಾಗರಾಜ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ವಿ ಹರಿಕೃಷ್ಣ ಸಂಗೀತ, ಶೇಖರ್ ಚಂದ್ರ ಕ್ಯಾಮರ, ದೀಪು ಎಸ್ ಕುಮಾರ್  ಎಡಿಟಿಂಗ್, ಕಲೈ ಗಣೇಶ್ ಡ್ಯಾನ್ಸ್, ರವಿ ವರ್ಮ ಸಾಹಸ , ಈಶ್ವರ್  ಕುಮಾರ್  ಕಲೆ ಈ ಚಿತ್ರಕ್ಕಿದೆ.  

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments