Webdunia - Bharat's app for daily news and videos

Install App

ನಾನು ಬಂದ ಮೇಲೆ ನಂದೇ ಹವಾ....?!

Webdunia
ಬುಧವಾರ, 24 ಡಿಸೆಂಬರ್ 2014 (10:00 IST)
ಸಾಮಾನ್ಯವಾಗಿ ಟಾಲಿವುಡ್ ನಲ್ಲಿ ಆಗಿರಲಿ ಕಾಲಿವುಡ್ ನಲ್ಲಿಯೇ ಆಗಿರಲಿ ಹೀರೋಗಳ ನಡುವೆ ಅಥವಾ ರಾಜಕೀಯ ಪ್ರತಿನಿಧಿಗಳನ್ನೂ ಕುರಿತು ಡೈಲಾಗ್ ಮೂಲಕ ತಮ್ಮ ಅಭಿಪ್ರಾಯ ಹೇಳುವ ಹೀರೋಗಳ ಸಿನಿಮಾ ಬೇಕಾದಷ್ಟಿದೆ. ಆದರೆ ಕನ್ನಡ ಚಿತ್ರರಂಗದಲ್ಲಿ ಆ ಪರಂಪರೆಗೆ ಅಷ್ಟೊಂದು ಪ್ರಾಮುಖ್ಯತೆ ನೀಡಿಲ್ಲ. ಕೆಲವು ವರ್ಷಗಳ ಹಿಂದೆ ದರ್ಶನ್ ತಮ್ಮ ಚಿತ್ರದಲ್ಲಿ ಸುದೀಪ್ ಕಡೆಗೆ ಮಾತಿನ ಬಾಣ ಎಸೆದಿದ್ದರು. 
ಆ ಬಳಿಕ ಅದಕ್ಕೆ ಹೆಚ್ಚಿನ ಮಹತ್ವ ಸಿಕ್ಕಿರಲಿಲ್ಲ. ಆದರೆ ಈಗ ಹೆಚ್ಚು ಅವಕಾಶಗಳು ಮತ್ತು ಗೆಲುವನ್ನು ಪಡೆಯುತ್ತಿರುವ ನಟ ಯಶ್ ತನ್ನ ಸಿನಿಮಾದಲ್ಲಿ ಹೇಳಿರುವ ಡೈಲಾಗ್ ಎಲ್ಲರ ಬಾಯಿಗೆ ಮಾತಿನ ಆಹಾರವಾಗಿದೆ. ಅವರ ಹೊಚ್ಚಹೊಸ ಚಿತ್ರ ಮಿಸ್ಟರ್ ಅಂಡ್ ಮಿಸೆಸ್  ರಾಮಾಚಾರಿ ಯಲ್ಲಿ ಅಂತಹ ಒಂದು ಡೈಲಾಗ್ ಇದೆ. ಆ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆ ಆಯ್ತು. ಅದರಲ್ಲಿ ಈ ಸಂಗತಿ ಎದ್ದು ಕಾಣುತ್ತಿದ್ದು, ಚಂದನವನದ ನಿವಾಸಿಗಳಿಗೆ ಮಾತಿಗೆ ಗ್ರಾಸವಾಗಿದೆ. 
 
ನಾನು ಬರೋತನಕ ಬೇರೆಯವರ ಹವಾ  ನಾನು ಬಂದ ಮೇಲೆ ನಂದೇ ಹವಾ .  ಈ ಅಂಶ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಆದರೆ  ಯಶ್   ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಓರ್ವ ಆದರೆ ಹಿರಿಯ ಕಲಾವಿದರು ತುಂಬಾ ಬೇಗ ಏರಿದವರು ಅಷ್ಟೇ ಶೀಘ್ರವಾಗಿ ಕೆಳಗಿಳಿಯುತ್ತಾರೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದನ್ನು ಕಾಲವೇ ತಿಳಿಸುತ್ತದೆ. 
 
ಈ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮಾತ್ರ  ಇದು ಯಶ್ ಮತ್ತು ಖಳನಾಯಕನ ನಡುವೆ ನಡೆಯುವ ಸಂಭಾಷಣೆ ಎಂದು ಹೇಳಿ ಸಮಸ್ಯೆ ಹರಡದಂತೆ ಮಾಡಿದ್ದಾರೆ. ಆದರೂ ಸಹಿತ ಇದು ಒಂದು ಬಗೆ ಸ್ಟಾರ್ ವಾರ್  ಅಂತ ಗಾಂಧಿನಗರಿಗರ ಊಹೆ. 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments