ಅಲಿಯ ಭಟ್ ಸಾಮಾನ್ಯ ಸದಾ ಗಾಸಿಪ್ ನ ಮೂಲಕ ಗಮನ ಸೆಳೆಯುವ ನಟಿ. ಆಕೆಯ ಬಗ್ಗೆ ಹೇಳುವುದಾದರೆ ಸದಾ ತನ್ನ ಸಹನಟರ ಜೊತೆಯಲ್ಲಿ ಹೆಸರು ಜೋಡಿಸಿ ಮಾಧ್ಯಮಗಳು ಆಕೆಯ ಸುತ್ತ ಸುತ್ತುವಂತೆ ಮಾಡುವ ನಟಿ. ಆಕೆ ಇವೆಲ್ಲ ಪ್ರಚಾರಕ್ಕಾಗಿ ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆ ಉದ್ಭವ ಆಗೋದು ಸಹಜ. ಅದಕ್ಕೆ ಆಕೆ ಕಡೆಯಿಂದ ಬರುವ ಉತ್ತರ ಹೌದು.
ಸಾಮಾನ್ಯವಾಗಿ ಆಕೆ ಜೊತೆ ನಟಿಸಿದ ವರುಣ್ ಧವನ್, ಸಿದ್ಧಾರ್ಥ್ ಮಲ್ಹೋತ್ರ ಅಥವಾ ಅರ್ಜುನ್ ಕಪೂರ್ ಅವರ ಒಡನಾಟವು ಸದಾ ಸುದ್ದಿಯಲ್ಲಿದ್ದರೂ ಸಹಿತ ಆಕೆ ಆ ಸಂಗತಿಯ ಬಗ್ಗೆ ಯಾವುದೇ ರೀತಿಯ ಸ್ಪಷ್ಟನೆ ನೀಡುವುದಿಲ್ಲ. ಅದೂ ಸಹ ಪಬ್ಲಿಸಿಟಿಯ ಗಿಮಿಕ್ .ಇದು ತನ್ನ ವೈಯಕ್ತಿಕ ಬದುಕನ್ನು ಸುರಕ್ಷಿತವಾಗಿಟ್ಟುಕೊಳ್ಳುವ ವಿಧಾನ ಎನ್ನುವ ಮಾತನ್ನು ಹೇಳಿದ್ದಾರೆ ಅಲಿಯ. ಅಲ್ಲದೆ ಈಗ ವಾತಾವರಣ ಹೇಗಿದೆ ಎಂದರೆ ಮಾಧ್ಯಮಗಳ ಜೊತೆ ಆಟ ಆಡಿದಾಗಲಷ್ಟೇ ಬೆಲೆ. ಆಗ ಜನರು ಹೆಚ್ಚು ನಮ್ಮ ಬಗ್ಗೆ ಮಾತನಾಡುತ್ತಾರೆ. ನಮ್ಮ ಬಗ್ಗೆ ಕುತೂಹಲ ಹೊಂದುತ್ತಾರೆ. ನಾನು ಅವರ ಕಲ್ಪನೆಗಳಿಗೆ ಯಾವುದೇ ಉತ್ತರ ಹೇಳುವುದಿಲ್ಲ, ಅವರು ತಾವು ಬಯಸಿದಂತೆ ಆಲೋಚಿಸಲಿ ಎಂದು ಮೌನವಾಗಿ ಬಿಡ್ತೀನಿ ಎನ್ನುವ ಮಾತನ್ನು ಹೇಳಿದ್ದಾರೆ.
ನಾನು ಜನರ ಪ್ರಶ್ನೆಗೆ ಹೌದು ಅಥವಾ ಇಲ್ಲ ಎನ್ನುವ ಉತ್ತರ ನೀಡುವುದಿಲ್ಲ ಎಂದು ಈ ಸಮಯದಲ್ಲಿ ಹೇಳಿದ್ದಾರೆ. ನನಗೆ ದೊರೆಯುವ ಪ್ರತಿಯೊಂದು ಅವಕಾಶದ ಸಮಯದಲ್ಲೂ ನಮ್ಮ ಅಪ್ಪ ಕೆಲವೊಂದು ಬುದ್ಧಿ ಮಾತು ಹೇಳುತ್ತಾರೆ. ನಾನು ನಮ್ಮ ಅಪ್ಪನಂತೆ ಅಲ್ಲ. ಅವರಂತೆ ಬದುಕಲ್ಲಿ ಅತ್ಯುತ್ತಮ ಅಂಶಗಳಿಗೆ ಆದ್ಯತೆ ನೀಡಲ್ಲ ಹಾಗೂ ನಮ್ಮ ಅಪ್ಪನಂತೆ ಉತ್ತಮ ವೈಯಕ್ತಿಕ ಬದುಕನ್ನು ಜನರು ನಿರೀಕ್ಷಿಸುವುದು ಸರಿಯಲ್ಲ ಎಂದಿದ್ದಾರೆ ಮಹೇಶ್ ಭಟ್ ಪುತ್ರಿ.