Webdunia - Bharat's app for daily news and videos

Install App

ಪ್ರಶಸ್ತಿಗಳನ್ನು ಪಡೆಯೋಕೆ ಡಿಂಪಲ್ ದೀಪಿಕಾ ಪಡುಕೋಣೆಗೆ ಇಷ್ಟವಂತೆ

Webdunia
ಗುರುವಾರ, 30 ಅಕ್ಟೋಬರ್ 2014 (13:18 IST)
ಕಷ್ಟಪಟ್ಟು ಅಭಿನಯಿಸಿರುತ್ತೇವೆ ಆದ್ದರಿಂದ ನಾವು ಪ್ರಶಸ್ತಿಗಳನ್ನು ಬಯಸುತ್ತೇವೆ ಎಂದು ಅನೇಕ ಕಲಾವಿದರು ಹೇಳುತ್ತಿರುತ್ತಾರೆ. ಆ ಸಾಲಿಗೆ ಗುಳಿಗಲ್ಲದ ಚೆಲುವೆ ದೀಪಿಕ ಪಡುಕೋಣೆ ಸಹ ಸೇರ್ಪಡೆ ಆಗಿದ್ದಾಳೆ. 
 
ಆಕೆಗೆ ಚಿತ್ರದ ಯಶಸ್ಸಷ್ಟೇ ಮುಖ್ಯ ಪ್ರಶಸ್ತಿಗಳನ್ನು ಪಡೆಯುವುದು ಸಹ ಆಗಿದೆ. ಕಲಾವಿದರಿಗೆ ಪ್ರಶಸ್ತಿ ಅಗತ್ಯ ಇದ್ದೆ ಇದೆ ಎನ್ನುವ   ಮಾತನ್ನು ಆಕೆ ಸದಾ ಹೇಳುತ್ತಿರುತ್ತಾಳೆ. ಅದಕ್ಕೆ ಕಾರಣ ಅದು ಅವರ ಬದುಕಲ್ಲಿ ಉತ್ಸಾಹ ನೀಡುತ್ತದೆ ಎನ್ನುವ ವಾದ ಆಕೆಯದ್ದಾಗಿದೆ. 
 
ಆ ಪ್ರಶಸ್ತಿ ಕೇವಲ ಉತ್ಸಾಹ ಮಾತ್ರವಲ್ಲ ಮತ್ತಷ್ಟು ಹೊಸತನ ನೀಡುವ ಟಾನಿಕ್ ನಂತೆ ಕಾರ್ಯ ನಿರ್ವಹಿಸುತ್ತದೆ. ಆ ರೀತಿ ಪ್ರಶಸ್ತಿ ನೀಡುವುದು ಕಲಾವಿದರಿಗೆ ಕೊಡಮಾಡುವ ಮೆಚ್ಚುಗೆ ಎನ್ನುವ ಮಾತನ್ನು ಹೇಳಿದ್ದಾಳೆ ಈ ಭಾಮೆ. 
 
ಕಳೆದ ವರ್ಷ ಈಕೆಯ ನಟನೆಯ ಚೆನ್ನೈ ಎಕ್ಸ್ ಪ್ರೆಸ್ ಮತ್ತು ಗಲಿಯೊಂಕಿ ರಾಸಲೀಲ ರಾಮ್ ಲೀಲಾ ಚಿತ್ರಗಳು ಅಪಾರವಾದ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಅಕಸ್ಮಾತ್ ಕಳೆದ ವರ್ಷ ತನಗೆ ಪ್ರಶಸ್ತಿಗಳು ಸಿಗದೇ ಹೋಗಿದ್ದಿದ್ದಿದ್ದರೆ  ಖಂಡಿತ ಬೇಸರ ಆಗುತ್ತಿತ್ತು ಎನ್ನುವ ಮಾತನ್ನು ಈ ಸಮಯದಲ್ಲಿ ಹೇಳಿದ್ದಾಳೆ 
 
ಈ ಚೆಲುವೆ. ಅಭಿನಯಿಸಿದಾಗ ಸಿಗುವ ಮೆಚ್ಚುಗೆ , ಬಳಿಕ ಪ್ರಶಸ್ತಿ ದೊರೆತಾಗ ಆಗುವ ಆನಂದ ಎಲ್ಲವೂ ಭಿನ್ನ ಎನ್ನುವ ಮಾತನ್ನು ಈ ಸಮಯದಲ್ಲಿ ಹೇಳಿದ್ದಾಳೆ. ಆಕೆಯ ನಟನೆಯ ಹ್ಯಾಪಿ ನ್ಯೂ ಇಯರ್ ಚಿತ್ರ ಇತ್ತೀಚಿಗೆ ಬಿಡುಗಡೆ ಆಗಿದ್ದು, ಬಾಕ್ಸಾಫೀಸನ್ನು ಅಲುಗಾಡಿಸಿದೆ ತನ್ನ ಗಳಿಕೆಯಿಂದ! 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments