ನಿರ್ದೇಶಕ ಪ್ರೇಮ್ ಒಂದಲ್ಲ ಒಂದು ವಿವಾದದ ಮೂಲಕ ಸುದ್ದಿಯಾಗಿದ್ದಾರೆ. ಪ್ರೇಮ್ ಅವರ ಡಿಕೆ ಚಿತ್ರದಲ್ಲಿ ಶೋಭರಾಜ್ ಮಾಂತ್ರಿಕನ ಗೆಟ್ಅಪ್ನಲ್ಲಿ ಬೆತ್ತಲಾಗಿ ಕಾಣಿಸಿಕೊಳ್ಳುವ ಮೂಲಕ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ. ಡಿಕೆ ಚಿತ್ರದಲ್ಲಿ ಕಾಳಿಸ್ವಾಮಿಯನ್ನು ಸ್ತ್ರೀವೇಷದಲ್ಲಿ ಅಭಿನಯಿಸುವಂತೆ ಮಾಡಿ ಪ್ರೇಮ್ ಸುದ್ದಿಮಾಡಿದ್ದರು.ಬಾಲಿವುಡ್ ನಟ ಅಮೀರ್ ಖಾನ್ ಪಿಕೆ ಚಿತ್ರಕ್ಕೆ ಬೆತ್ತಲಾಗಿ ಸುದ್ದಿಮಾಡಿದ್ದರೆ, ಡಿಕೆ ಚಿತ್ರದಲ್ಲಿ ಶೋಭರಾಜ್ ಬೆತ್ತಲಾಗಿ ಸುದ್ದಿಮಾಡಿದ್ದಾರೆ.
ಶೋಭರಾಜ್ ಪಾತ್ರ ವಿವಾದವನ್ನು ಹುಟ್ಟುಹಾಕುವ ಉದ್ದೇಶದಿಂದ ಮಾಡಿಲ್ಲ. ಅದೊಂದು ಮಾಂತ್ರಿಕನ ಪಾತ್ರದ ಸನ್ನಿವೇಶದಲ್ಲಿ ಅಭಿನಯಿಸಬೇಕಿತ್ತು ಎಂದು ಪ್ರೇಮ್ ಹೇಳಿದ್ದಾರೆ.
ಈ ಕುರಿತು ಶೋಭರಾಜ್ ಅವರನ್ನು ಪ್ರಶ್ನಿಸಿದಾಗ ಮಾಂತ್ರಿಕನ ಪಾತ್ರದ ಸನ್ನಿವೇಶಕ್ಕೆ ತಕ್ಕಂತೆ ತಾವು ಅಭಿನಯಿಸಿದ್ದು, ತಾವೇನೂ ಪೂರ್ಣವಾಗಿ ಬೆತ್ತಲಾಗಿಲ್ಲ. ಯಾವುದನ್ನು ತೋರಿಸಬಾರದೋ ಅದನ್ನು ತೋರಿಸಿಲ್ಲ ಎಂದು ಹೇಳಿದ್ದಾರೆ.