ಸ್ಯಾಂಡಲ್ ವುಡ್ನ ಸಂಪ್ರದಾಯದಂತೆ ನಟಿ ರಾಗಿಣಿ ದ್ವಿವೇದಿ ಸಹಿತ ತಮ್ಮ ಮುಂದಿನ ಚಿತ್ರದ ಬಗ್ಗೆ ಹೇಳಿದ್ದಾರೆ. ಆ ಚಿತ್ರದ ಹೆಸರು ನಾನೇ ಅದರ ಟ್ಯಾಗ್ಲೈನ್ ನೆಕ್ಸ್ಟ್ ಸಿಎಮ್. ಈ ಚಿತ್ರವನ್ನು ಮುಸ್ಸಂಜೆ ಮಾತು ಖ್ಯಾತಿಯ ಮಹೇಶ್ ಅವರು ನಿರ್ದೇಶನ ಮಾಡಲಿದ್ದಾರೆ.
ನಿನ್ನೆ ರಾಗಿಣಿಯ ಜನ್ಮದಿನ. ಆ ಸಮಯದಲ್ಲಿ ಆಕೆ ತನ್ನ ಹೊಸ ಚಿತ್ರದ ಬಗ್ಗೆ ಹೇಳಿದ್ದಾರೆ. ಈ ಚಿತ್ರದ ಶೀರ್ಷಿಕೆ ಸಾಮಾನ್ಯ ಮನುಷ್ಯನ ಭಾವನೆಗಳನ್ನು ಒಳಗೊಂಡಿದೆ. ಪ್ರತಿಯೊಬ್ಬರಿಗೂ ನಾನೇ ಎನ್ನುವ ಆತ್ಮಶಕ್ತಿ ಇರುತ್ತದೆ. ಯಾವರೀತಿ ಓರ್ವ ಸಾಮಾನ್ಯ ಅಧಿಕಾರವನ್ನು ಬಳಕೆ ಮಾಡಿಕೊಳ್ಳುತ್ತಾನೆ ಎನ್ನುವ ಕಥೆಯನ್ನು ಇದು ಹೊಂದಿದೆ ಎನ್ನುವ ಮಾತನ್ನು ಅವರು ತಿಳಿಸಿದ್ದಾರೆ.
ಈ ಚಿತ್ರ ನಾಯಕ್ ಮತ್ತು ಮುಧುವಲನ್ ಚಿತ್ರಗಳ ಹೋಲಿಕೆಯಾಗುತ್ತದೆ ಎಂದು ನಂಬಲಾಗಿದೆ.ಈ ಬಗ್ಗೆ ಮಾತನಾಡುತ್ತಾ ನಾಯಕ್ ನನ್ನ ಅತಿ ಪ್ರೀತಿಯ ಚಿತ್ರ.ನನಗೂ ನಿವಾಗಿ ಒಂದು ದಿನ ಮುಖ್ಯಮಂತ್ರಿ ಆಗಲು ಆಸೆ ಇದೆ.
'ನಾನೇ' ಚಿತ್ರ ಪಿ ಎಸ್ ಪ್ರೊಡಕ್ಷನ್ಸ್ ಅಡಿಯಲ್ಲಿ ಸಿದ್ಧವಾಗುತ್ತಿದೆ ಎನ್ನುವುದನ್ನು ಸಹಿತ ರಾಗಿಣಿ ತಿಳಿಸಿದ್ದಾರೆ. ಇದರ ಬಗ್ಗೆ ಮಹೇಶ್ ಮಾತನಾಡುತ್ತಾ ಕಮರ್ಷಿಯಲ್ ಹೀರೋಯಿನ್ ಆಗಿ ರಾಗಿಣಿ ಜನರ ಮುಂದೆ ಬಂದು ಗೆದ್ದಿದ್ದಾರೆ. ಈಗ ಭಿನ್ನರೀತಿಯಲ್ಲಿ ರಾಗಿಣಿ ಜನರ ಮುಂದೆ ಬರಲಿದ್ದಾರೆ. ಇಲ್ಲಿ ಓರ್ವ ಹೆಣ್ಣುಮಗಳು ರಾಜ್ಯದ ಮುಖ್ಯಮಂತ್ರಿ. ಇದರಲ್ಲಿ ಯಾವರೀತಿ ವ್ಯವಸ್ಥೆಯನ್ನು ಬದಲಾಯಿಸಲು ಪ್ರಯತ್ನಿಸುತ್ತಾಳೆ ಎನ್ನುವ ಸಂಗತಿಯನ್ನು ಒಳಗೊಂಡಿರುತ್ತದೆ.ಇದನು ವೀಕ್ಷಿಸಿದ ಪ್ರತಿಯೊಬ್ಬರೂ ಈ ಬಗ್ಗೆ ರಿಯಲೈಜ್ ಆಗುವುದಕ್ಕೆ ಆಶಿಸುತ್ತಾರೆ ಎಂದಿದ್ದಾರೆ. ಕೊನೆಮಾತು ಹೇಳೋದೇನೆಂದರೆ ಈ ಚಿತ್ರದಲ್ಲಿ ಸಾಹಸ, ಪ್ರಣಯ ಎಲ್ಲವೂ ಇದೆಯಂತೆ.