Webdunia - Bharat's app for daily news and videos

Install App

ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಹುಚ್ಚ ವೆಂಕಟ್

Webdunia
ಶುಕ್ರವಾರ, 13 ನವೆಂಬರ್ 2015 (10:31 IST)
ದಿನದಿಂದ ದಿನಕ್ಕೆ ಕನ್ನಡದ ಬಿಗ್ ಬಾಸ್ ಶೋ ಕುತೂಹಲ ಕೆರಳಿಸುತ್ತಿದೆ. ಜೊತೆಗೆ ಸ್ಪರ್ಧಿಗಳಿಗೆ ನೀಡುತ್ತಿರುವ ಟಾಸ್ಕ್‌ಗಳು ಕೂಡ ಕಠಿಣವಾಗುತ್ತಿದೆ. ಮೊನ್ನೆ ಸ್ಪರ್ಧಿಗಳಿಗಾಗಿ ಬಿಗ್ ಬಾಸ್ ಗುಲಾಮ ಹಾಗೂ ಜಮೀನ್ದಾರರು ಎಂಬ ಟಾಸ್ಕ್ ಅನ್ನು ನೀಡಿದ್ರು. ಮೊದಲ ದಿನ ಸುನಾಮಿ ಕಿಟ್ಟಿ, ಹುಚ್ಚ ವೆಂಕಟ್, ಪೂಜಾ ಗಾಂಧಿ, ನೇತ್ರಾ ಯಜಮಾನರಾಗಿ ಆಯ್ಕೆಯಾಗಿದ್ದರು. ಉಳಿದವರು  ಗುಲಾಮರಾಗಿ ಆಯ್ಕೆಯಾಗಿದ್ರು. ಮರುದಿನ ರೆಹಮಾನ್, ಚಂದನ್,ಶೃತಿ, ಭಾವನಾ ಯಜಮಾನರಾಗಿ ಆಯ್ಕೆಯಾಗಿದ್ದರು. ಉಳಿದವರು ಗುಲಾಮರಾಗಿದ್ದರು. ಆದ್ರೆ ಹುಚ್ಚ ವೆಂಕಟ್ ಅವರು ಮಾತ್ರ ಗುಲಾಮರಾಗಿರಲು ಒಪ್ಪದೇ ರಾದ್ಧಾಂತವೊಂದಕ್ಕೆ ಕಾರಣವಾದ್ರು.

 
ಉಳಿದ ಸ್ಪರ್ಧಿಗಳು ನನ್ನ ಮನ ನೋಯಿಸಿದ್ರೂ ಅನ್ನೋ ಕಾರಣಕ್ಕೆ ಅವರ ಏನೂ ತಿನ್ನದೇ ಕೆಲ ಹೊತ್ತು ಉಪವಾಸ ಮಾಡಿದ್ರು.ಶೃತಿ, ಚಂದನ್, ರೆಹಮಾನ್ ಜೊತೆ ಕ್ಯಾಪ್ಟನ್ ಆನಂದ್ ಅವರ ಮನವೊಲಿಸಲು ಯತ್ನಿಸಿದ್ರೂ ಯಾರ ಮಾತನ್ನು ವೆಂಕಟ್ ಕೇಳುವ ಸ್ಥಿತಿಯಲ್ಲಿರಲಿಲ್ಲ. ಬಳಿಕ ತಂದೆಯ ಚಪ್ಪಲಿ ವಿಷಯದಲ್ಲಿ ರೆಹಮಾನ್ ಹಾಗೂ ವೆಂಕಟ್ ನಡುವೆ ನಡೆದ ಮಾತುಕತೆ ಕೊನೆಗೆ ಅವರಿಬ್ಬರೂ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಯ್ತು. 
 
ಬಳಿಕ ಕನ್ಪೆಷನ್ ರೂಮ್‌ಗೆ ತೆರಳಿದ ವೆಂಕಟ್ ನಾನು ಯಾವುದೇ ಕಾರಣಕ್ಕೂ ಬೇರೆಯವರ ಚಪ್ಪಲಿ ತೊಳೆಯಲ್ಲ. ಒಂದು ವೇಳೆ ನಾನು ಅಂತಹ ಕೆಲಸ ಮಾಡಿದ್ರೆ ನನ್ನ ಅಭಿಮಾನಿಗಳು ನೊಂದುಕೊಳ್ಳುತ್ತಾರೆ. ನನ್ನ ಹೆತ್ತವರ ಚಪ್ಪಲಿ ಬಿಟ್ಟು ಬೇರ್ಯಾರ ಚಪ್ಪಲನ್ನು ಮುಟ್ಟಲ್ಲ ಅಂತಾ ಕಣ್ಣೀರಿಟ್ಟರು. ಅದಕ್ಕಾಗಿ ಕೊನೆಗೆ ಹುಚ್ಚ ವೆಂಕಟ್ ಅವರಿಗೆ ಅವರ ತಂದೆಯ ಚಪ್ಪಲಿಯನ್ನು ಹೊತ್ತು ಒಂದು ಗಂಟೆಗಳ ಕಾಲ ನಿಲ್ಲುವಂತೆ ಶಿಕ್ಷೆ ವಿಧಿಸಲಾಯ್ತು.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments