Select Your Language

Notifications

webdunia
webdunia
webdunia
webdunia

’ಹೊಯ್ಸಳ’ ಟೈಟಲ್ ನಿಖಿಲ್ ಗಿಲ್ಲ; ಶಿವರಾಜ್ ಕುಮಾರ್ ಗೆ ಮೀಸಲು: ನಿರ್ಮಾಪಕ ರಾಮು

’ಹೊಯ್ಸಳ’ ಟೈಟಲ್ ನಿಖಿಲ್ ಗಿಲ್ಲ; ಶಿವರಾಜ್ ಕುಮಾರ್ ಗೆ ಮೀಸಲು: ನಿರ್ಮಾಪಕ ರಾಮು
ಬೆಂಗಳೂರು , ಬುಧವಾರ, 31 ಮೇ 2017 (15:12 IST)
ಬೆಂಗಳೂರು:ಹೆಚ್ ಡಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರ್ ಅವರ ಎರಡನೇ ಚಿತ್ರದ ಶೀರ್ಷಿಕೆ ’ಹೊಯಸಳ’ ಎಂದಿಡಲು ತೀರ್ಮಾನಿಸಲಾಗಿತ್ತು. ಆದರೆ  ನಿರ್ಮಾಪಕ ರಾಮು ಅವರು  ಈ ಶೀರ್ಷಿಕೆಯನ್ನು ತಮ್ಮ ಬ್ಯಾನರ್ ನಡಿ ನೋಂದಾಯಿಸಿಕೊಂಡಿದ್ದು, ಅದನ್ನು ಶಿವರಾಜ್ ಕುಮಾರ್ ಅವರಿಗಾಗಿಯೇ ಮೀಸಲಾಗಿದೆ ಎಂದು ಹೇಳಿದ್ದಾರೆ.
 
ನಿಖಿಲ್ ಸಿನೆಮಾ ನಿರ್ಮಿಸುತ್ತಿರುವ ಚನ್ನಾಂಬಿಕ ಫಿಲ್ಮ್ಸ್ ಸಂಸ್ಥೆಗೆ ಈ ಬಗ್ಗೆ ಸ್ಪಷ್ಟಪಡಿಸಿರುವುದಾಗಿ ರಾಮು ತಿಳಿಸಿದ್ದಾರೆ. ’ಹೊಯ್ಸಳ' ಶೀರ್ಷಿಕೆ ಶಿವರಾಜ್ ಕುಮಾರ್ ಅವರಿಗೆ ಮೀಸಲಾಗಿದ್ದು, ಬಹಳ ಸಮಯದಿಂದ ಕಾಯ್ದಿರಿಸಿಕೊಂಡಿದ್ದೇನೆ. ಈಗ ಕಥೆ ಸಿದ್ಧವಾಗುತ್ತಿದ್ದು, ಅದು ಶೀರ್ಷಿಕೆಗೆ ಒಪ್ಪುತ್ತದೆ" ಹಾಗಾಗಿ ಚನ್ನಾಂಬಿಕ ಫಿಲ್ಮ್ಸ್ ಸಂಸ್ಥೆಗೆಮತ್ತೊಂದು ಶೀರ್ಷಿಕೆ ಹುಡುಕಿಕೊಳ್ಳುವಂತೆ ರಾಮು ತಿಳಿಸಿದ್ದಾರೆ. 
 
ಚೇತನ್ ಕುಮಾರ್ ನಿರ್ದೇಶನದಲ್ಲಿ ಜೂನ್ 5ರಿಂದ ನಿಖಿಲ್ ಎರಡನೇ ಸಿನಿಮಾಗೆ ಚಾಲನೆ ದೊರೆಯುತ್ತಿದ್ದು, ಬೇರೆ ಶೀರ್ಷಿಕೆಗಾಗಿ ಹುಡುಕಾಟ ಆರಂಭವಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಅಮ್ಮ ಅಪ್ಪಾಜಿ ಬಳಿಗೆ ಹೋಗಿದ್ದಾರೆ: ರಾಘಣ್ಣ ಕಂಬನಿ