Webdunia - Bharat's app for daily news and videos

Install App

ನಯನತಾರಾ-ವಿಘ್ನಾಶ್ ಶಿವನ್ ಪ್ರೀತಿಗೆ ಸೇತುವೆಯಾಗಿದ್ದ ನಟ ಧನುಷ್

Krishnaveni K
ಶನಿವಾರ, 6 ಏಪ್ರಿಲ್ 2024 (14:07 IST)
ಚೆನ್ನೈ: ಬಹುಭಾಷಾ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿಗೆ ಆರಂಭದ ದಿನದಲ್ಲಿ ಪ್ರೀತಿ ಮೂಡಲು ಕಾರಣ ತಮಿಳು ನಟ ಧನುಷ್. ಇದನ್ನು ಸಂದರ್ಶನವೊಂದರಲ್ಲಿ ನಯನ್ ದಂಪತಿ ರಿವೀಲ್ ಮಾಡಿದ್ದಾರೆ.

ವಿಘ್ನೇಶ್ ಶಿವನ್ ಮತ್ತು ನಯನ್ ದಂಪತಿ ಹಲವು ಸಮಯದವರೆಗೆ ಡೇಟಿಂಗ್ ಮಾಡಿ ಬಳಿಕ ಕೆಲವು ಸಮಯ ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದರು. ಇದಾದ ಬಳಿಕ ಇಬ್ಬರೂ ಮನೆಯವರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಮದುವೆ ಬಳಿಕ ಬಾಡಿಗೆ ತಾಯ್ತನದ ಮೂಲಕ ಇಬ್ಬರು ಅವಳಿ ಮಕ್ಕಳನ್ನೂ ಪಡೆದಿದ್ದಾರೆ.

ಇದೀಗ ಸಂದರ್ಶನವೊಂದರಲ್ಲಿ ತಮ್ಮಿಬ್ಬರ ಪ್ರೇಮ ಶುರುವಾಗಿದ್ದು ಹೇಗೆ ಎಂದು ನಯನ್ ಮತ್ತು ವಿಘ್ನೇಶ್ ರಿವೀಲ್ ಮಾಡಿದ್ದಾರೆ. ನಮ್ಮಿಬ್ಬರ ನಡುವಿನ ಪ್ರೀತಿಗೆ ಪ್ರಮುಖ ಸೇತುವೆಯಾಗಿದ್ದು ನಟ ಧನುಷ್ ಎಂದು ವಿಘ್ನೇಶ್ ಹೇಳಿದ್ದಾರೆ. ನಾನುಮ್ ರೌಡಿ ದಾನ್ ಸಿನಿಮಾ ವೇಳೆ ಧನುಷ್ ರಿಂದಾಗಿ ನಾವು ಹತ್ತಿರವಾದೆವು ಎಂದಿದ್ದಾರೆ.

ನಯನತಾರಾಗೆ ಸ್ಕ್ರಿಪ್ಟ್ ವಿವರಿಸಲು ಧನುಷ್ ನಾನೇ ಹೋಗಬೇಕೆಂದು ಹೇಳಿದರು. ಅದರಂತೆ ನಯನ್ ಗೆ ಸ್ಕ್ರಿಪ್ಟ್ ಹೇಳಿದಾಗ ಆಕೆಗೆ ಇಷ್ಟವಾಗಿ ಒಪ್ಪಿಕೊಂಡಳು. ನಯನ್ ಒಪ್ಪಿಕೊಂಡ ಬಳಿಕ ವಿಜಯ್ ಸೇತುಪತಿ ಕೂಡಾ ಸಿನಿಮಾ ಮಾಡಲು ಒಪ್ಪಿಕೊಂಡರು. ಸ್ಕ್ರಿಪ್ಟ್ ಬಗ್ಗೆ ವಿವರಿಸಲು ನಾನು ನಯನ್ ಜೊತೆ ತುಂಬಾ ಸಮಯ ಕಳೆದಿದ್ದೆ. ಆಗಲೇ ನಮ್ಮ ನಡುವೆ ಆತ್ಮೀಯತೆ ಹೆಚ್ಚಾಯಿತು. ಒಂದು ವರ್ಷ ಪರಿಚಿತರಾಗಿಯೇ ಇದ್ದೆವು’ ಎಂದು ವಿಘ್ನೇಶ್ ಹೇಳಿದ್ದಾರೆ.

‘ವೆಳ್ಳಯಿಲ್ಲ ಪಟ್ಟಾತಿರಿ ಸಿನಿಮಾದಲ್ಲಿ ವಿಘ್ನೇಶ್ ಅತಿಥಿ ಪಾತ್ರವೊಂದನ್ನು ಮಾಡಿದ್ದರು. ಈ ವೇಳೆ ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿ ಮಾಡೋಣ ಎನಿಸಿತು. ಮೂರು ತಿಂಗಳ ಬಳಿಕ ನಾವಿಬ್ಬರೂ ಜೊತೆಗಿರಲು ತೀರ್ಮಾನಿಸಿದೆವು’ ಎಂದು ನಯನ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಗಣೇಶ ಹಬ್ಬಕ್ಕೆ ಈ ಬಾರಿಯೂ ಜೈಲಿನಲ್ಲೇ ದಾಸ : ಪತ್ನಿ ವಿಜಯಲಕ್ಷ್ಮಿ ಏನ್ ಮಾಡಿದ್ರೂ ಗೊತ್ತಾ

ಬರ್ತ್ ಡೇಗೆ ಮನೆ ಬಳಿ ಬರಬೇಡಿ ಎಂದಿಲ್ಲ ಕಿಚ್ಚ ಸುದೀಪ್: ಫ್ಯಾನ್ಸ್ ಗೆ ದೊಡ್ಡ ಸರ್ಪ್ರೈಸ್

ಮಡೆನೂರು ಮನು ಕಾಲಿಗೆ ಬಿದ್ದು ಕ್ಷಮೆ ಕೇಳಿದ್ರೆ ಶಿವಣ್ಣ ಏನು ಮಾಡಿದ್ರು ವಿಡಿಯೋ ನೋಡಿ

ಕೆಜಿಎಫ್ ನಟ ದಿನೇಶ್ ಮಂಗಳೂರು ಇನ್ನಿಲ್ಲ

ದರ್ಶನ್‌ ಫ್ಯಾನ್ಸ್‌ಗಳಿಗೆ ಡಬಲ್‌ ಗುಡ್‌ನ್ಯೂಸ್‌: ಮಹತ್ವದ ಸಂದೇಶ ಹಂಚಿಕೊಂಡ ವಿಜಯಲಕ್ಷ್ಮಿ

ಮುಂದಿನ ಸುದ್ದಿ
Show comments