Webdunia - Bharat's app for daily news and videos

Install App

ಹೋಳಿ ಹಬ್ಬ ರಜಿನಿಕಾಂತ್ ಜೀವನಕ್ಕೆ ಹೊಸ ಟ್ವಿಸ್ಟ್ ಕೊಟ್ಟ ದಿನ..

Webdunia
ಮಂಗಳವಾರ, 14 ಮಾರ್ಚ್ 2017 (12:21 IST)
ರಜಿನಿಕಾಂತ್.. ತಮಿಳು ಚಿತ್ರರಂಗದ ಸೂಪರ್ ಸ್ಟಾರ್.. ರಜಿನಿ ಖಡಕ್ ಡೈಲಾಗ್, ವಾಕಿಂಗ್ ಸ್ಟೈಲ್`ಗೆ ಹುಚ್ಚೆದ್ದು ಕುಣಿಯುವ ಲಕ್ಷ ಲಕ್ಷ ಅಭಿಮಾನಿಗಳಿದ್ದಾರೆ. ಹೋಳಿ ಹಬ್ಬದಂದು ಇಡೀ ದೇಶಕ್ಕೆ ದೇಶವೇ ಬಣ್ಣ ಹಚ್ಚಿ ಸಂಭ್ರಮಿಸಿದರೆ  ಸೂಪರ್ ಸ್ಟಾರ್ ರಜಿನಿ ಮಾತ್ರ ಬಣ್ನದ ತಂಟೆಗೆ ಹೋಗಲ್ಲ. ಆದರೆ, ಪ್ರತೀ ಹೋಳಿಹಬ್ಬದಂದು ರಜಿನಿ ಒಬ್ಬ ವಿಶಿಷ್ಟ ವ್ಯಕ್ತಿಯ ಭೇಟಿಗೆ ತೆರಳುತ್ತಾರೆ.

ರಜಿನಿ ಬಣ್ಣದ ಬದುಕು ಆರಂಭವಾಗಿದ್ದೇ ಹೋಳಿಯಂದು: ಸೂಪರ್ ಸ್ಟಾರ್ ರಜಿನಿಕಾಂತ್ ಬೆಂಗಳೂರಿನ ಬಿಎಂಟಿಸಿ ಬಸ್`ನಲ್ಲಿ ಕಂಡಕ್ಟರ್ ಆಗಿದ್ದವರು. ಇದೇ ಸಂದರ್ಭದಲ್ಲಿ ತಮಿಳು ನಿರ್ದೇಶಕ ಕೆ. ಬಾಲಚಂದರ್ ಅಪೂರ್ವ ರಾಗಂಗಲ್ ಚಿತ್ರಕ್ಕೆ ನಟನ ಹುಡುಕಾಟದಲ್ಲಿದ್ದರು. ಈ ಸಂದರ್ಭ ಬಾಲಚಂದರ್ ಕಣ್ಣಿಗೆ ಬಿದ್ದವರೇ ಶಿವಾಜಿರಾವ್ ಅಲಿಯಾಸ್ ರಜಿನಿಕಾಂತ್ ಅವರನ್ನ ಚಿತ್ರದಲ್ಲಿ ನಟಿಸುವಂತೆ ಕರೆದೊಯ್ದ ಬಾಲಚಂದರ್ ಅವರು ಸಿನಿಮಾ ಸ್ಸ್ಟೈಲ್`ಗೆ ಒಪ್ಪುವ ಹೆಸರಿಡಲು ನಿರ್ಧರಿಸಿದ್ದರು. ಶಿವಾಜಿರಾವ್ ಬದಲಿಗೆ ಅಂದಿನ ಕಾಲದಲ್ಲಿ ಟ್ರೆಂಡ್ ಆಗಿದ್ದ ಕಾಂತ್ ಪದವನ್ನೊಳಗೊಂಡ ಚಂದ್ರಕಾಂತ್, ಶ್ರೀಕಾಂತ್ ಮತ್ತು ರಜಿನಿಕಾಂತ್ ಎಂಬ ಮೂರು ಹೆಸರು ಸೂಚಿಸಿದ್ದರು. ಗುರುದೇವೋಭವ ಎಂಬಂತೆ ಹೆಸರು ಆಯ್ಕೆ ಮಾಡಲು ಬಾಲಚಂದರ್ ಅವರನ್ನೇ ಕೇಳಿಕೊಂಡರು ಶಿವಾಜಿರಾವ್, ಆಗ ಬಾಲಚಂದರ್ ರಜಿನಿಕಾಂತ್ ಹೆಸರನ್ನ ಫೈನಲ್ ಮಾಡಿದರು. ಈ ಎಲ್ಲ ಘಟನೆ ನಡೆದಿದ್ದು ಹೋಳಿಹಬ್ಬದಂದು ಅಂದು ಬಣ್ನದಲೋಕಕ್ಕೆ ಎಂಟ್ರಿಕೊಟ್ಟ ರಜಿನಿ ಹೊಸ ಹೆಸರನ್ನೂ ಪಡೆದರು.

ಪ್ರತೀ ಹೋಳಿಹುಣ್ಣಿಮೆಗೆ ಗುರುಗಳ ಭೇಟಿ; ರಜಿನಿಕಾಂತ್ ಏನನ್ನಾದರೂ ಮರೆಯಬಹುದು ಆದರೆ ತಮಗೆ ದಾರಿ ತೋರಿದ ಗುರು ಬಾಲಚಂದರ್ ಭೇಟಿಯನ್ನು ಮಾತ್ರ ಮರೆತಿರಲಿಲ್ಲ.  ಪ್ರತೀ ಹೋಳಿಹಬ್ಬದಂದು ಅವರ ಮನೆಗೆ ತೆರಳಿ ಆಶೀರ್ವಾದ ಪಡೆಯುತ್ತಿದ್ದರು. ಒಮ್ಮೆ ಸ್ವಲ್ಪ ವಿಳಂಬವಾದುದರಿಂದ ಸೂಪರ್ ಸ್ಟಾರ್ ರಜಿನಿಕಾಂತ್, ಬಾಲಚಂದರ್ ಅವರ ಬಳಿ ಕ್ಷಮೆ ಕೇಳಿದ್ದೂ ಇದೆ. ಆದರೆ, 2014ರಲ್ಲಿ ಬಾಲಚಂದರ್ ನಿಧನರಾಗಿದ್ದು, ರಜಿನಿಕಾಂತ್`ಗೆ ಗುರುಗಳ ಭೇಟಿ ಅವಕಾಶ ತಪ್ಪಿದೆ. ಹೀಗಾಗಿ, ಪ್ರತೀ ಹುಟ್ಟುಹಬ್ಬದಂದು ಗುರುಗಳನ್ನ ನೆನಪಿಸಿಕೊಂಡು ಬರ್ತ್ ಡೇ ಆಚರಿಸಿಕೊಳ್ಳುತ್ತಾರೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Sonu Nigam: ಗಾಯಕ ಸೋನು ನಿಗಮ್‌ಗೆ ಬಿಗ್‌ ರಿಲೀಫ್‌, ಹೈಕೋರ್ಟ್‌ ಹೇಳಿದ್ದೇನು ನೋಡಿ

Jr NTR: ಎನ್‌ಟಿಆರ್‌ಗೆ ಅರಸಿ ಬಂದ ಬಿಗ್ ಬಾಲಿವುಡ್ ಆಫರ್‌, ಇಲ್ಲಿದೆ ಅಪ್ಡೇಟ್ಸ್‌

Chaitra Kundapur: ಎರಡು ಕ್ವಾರ್ಟರ್ ಕೊಟ್ರೆ ದೇವರು ಅನ್ನುವವರು ನನ್ನ ತಂದೆ: ಚೈತ್ರಾ ಕುಂದಾಪುರ

Chaitra Kundapura: ಚೈತ್ರಾ ಕುಂದಾಪುರ ಓರ್ವ ಕಳ್ಳಿ, ಅವಳ ಗಂಡನೂ ಅಷ್ಟೇ: ತಂದೆಯಿಂದ ಗಂಭೀರ ಆರೋಪ

ರಾಷ್ಟ್ರ ವಿರೋದಿ ಹೇಳಿಕೆ, ಮಲಯಾಳಂ ನಟ ಅಖಿಲ್ ಮಾರಾರ್‌ ವಿರುದ್ಧ ಜಾಮೀನು ರಹಿತ ದೂರು ದಾಖಲು

ಮುಂದಿನ ಸುದ್ದಿ
Show comments