Webdunia - Bharat's app for daily news and videos

Install App

ಸೆಕೆಂಡ್ ಇನ್ನಿಂಗ್ಸ್‌ಗೆ ರೆಡಿಯಾದ ಎಚ್ಡಿಕೆ ಪುತ್ರ ನಿಖಿಲ್ ಕುಮಾರ್

Webdunia
ಬುಧವಾರ, 30 ನವೆಂಬರ್ 2016 (12:43 IST)
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಮುಂದೆ ಸಿನಿಮಾ ಮಾಡ್ತಾರೋ ಇಲ್ವೋ ಎಂಬ ಅನುಮಾನ ಸ್ಯಾಂಡಲ್‍ವುಡ್‌ನಲ್ಲಿ ಕಾಡ್ತಾ ಇತ್ತು. ಈಗ ಆ ಎಲ್ಲಾ ಅನುಮಾನಗಳಿಗೆ ಫುಲ್ ಸ್ಟಾಪ್ ಇಡೋ ಸಮಯ ಬಂದಿದೆ. ಎರಡನೇ ಸಿನಿಮಾಗೆ ನಿಖಿಲ್ ಭರ್ಜರಿ ತಯಾರಿ ನಡೆಸಿದ್ದಾರೆ.
 
ಮೊದಲ ಚಿತ್ರದಲ್ಲೇ ಫೈಟು, ಸ್ಟಂಟು, ಡ್ಯಾನ್ಸ್ ಕಲಿತು ಭರ್ಜರಿ ತಯಾರಿ ನಡೆಸಿದ್ದ ನಿಖಿಲ್ ಕುಮಾರ್ ಇದೀಗ ಎರಡನೇ ಸಿನಿಮಾಗೆ ಅದೇ ರೀತಿ ಸಿದ್ಧವಾಗುತ್ತಿದ್ದಾರೆ.  ತಮ್ಮ ಎರಡನೇ ಸಿನಿಮಾವನ್ನ ಡಿಸೆಂಬರ್ 16 ಕ್ಕೆ ಅಂದ್ರೆ ಕುಮಾರ ಸ್ವಾಮಿ ಹುಟ್ಟುಹಬ್ಬದಂದು ಅನೌನ್ಸ್ ಮಾಡ್ತಾರಂತೆ. ಇನ್ನು ನಿಖಿಲ್ ಎರಡನೇ ಚಿತ್ರವನ್ನ ಕನ್ನಡದ ನಿರ್ದೇಶಕರೊಬ್ರು ನಿರ್ದೇಶನ ಮಾಡ್ಲಿದ್ದಾರೆ ಅನ್ನೋ ಸುದ್ದಿಯೂ ಇದೆ. 
 
ನಿಖಿಲ್ ಎರಡನೇ ಸಿನಿಮ ನಿರ್ದೇಶನಕ್ಕೆ ಸ್ಯಾಂಡಲ್ವುಡ್ನ ಮೂರು ನಿರ್ದೇಶಕರು ಕ್ಯೂನಲ್ಲಿ ನಿಂತಿದ್ದಾರೆ. ಭಜರಂಗಿ ಖ್ಯಾತಿಯ ಎ.ಹರ್ಷ, ಗಜಕೇಸರಿ ಕೃಷ್ಣ, ಹಾಗು ಭರ್ಜರಿ ಸಿನಿಮಾ ಮಾಡ್ತಿರೋ ಚೇತನ್ ಆ್ಯಕ್ಷನ್ ಕಟ್ ಹೇಳೋಕೆ ಕಾಯ್ತಿದ್ದಾರೆ. ಇವ್ರಲ್ಲಿ ಯಾರಿಗೆ ಚಾನ್ಸ್ ಸಿಗುತ್ತೆ ಅನ್ನೋದೆ ಸದ್ಯದ ಕುತೂಹಲ. 
 
ಇನ್ನೊಂದು ವಿಶೇಷ ಅಂದ್ರೆ ಈ ಎರಡನೇ ಚಿತ್ರವನ್ನ ಸ್ವತಹ ಕುಮಾರ್ ಸ್ವಾಮಿಯವ್ರೇ ನಿರ್ಮಾಣ ಮಾಡಲಿದ್ದು, ಬಿಗ್ ಬಜೆಟ್ ಸಿನಿಮಾ ಇದಾಗಲಿದ್ಯಂತೆ. ಇನ್ನು ಚಿತ್ರಕ್ಕೆ ಟೈಟಲ್ ಆಗ್ಲಿ ಕಥೆಯಾಗ್ಲಿ ಸಿದ್ದವಾಗಿಲ್ಲ. ಹೀಗಾಗಿ ನಿಖಿಲ್ ಎರಡನೇ ಚಿತ್ರ ಹೇಗಿರುತ್ತೆ ಅನ್ನೋ ಕುತೂಹಲ ಎಲ್ಲರಲ್ಲೂ ಮೂಡಿದೆ. ಅಂದಹಾಗೆ ಅವರ ಜಾಗ್ವಾರ್ ಸಿನಿಮಾ ಅರ್ಧ ಸೆಂಚುರಿ ಪೂರೈಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವೃಕ್ಷಮಾತೆ ಸಿನಿಮಾ ತಂಡದ ವಿರುದ್ಧ ದೂರು ಕೊಟ್ಟ ಸಾಲು ಮರದ ತಿಮ್ಮಕ್ಕ ದೂರು

ವಿಜಯ್ ದೇವರಕೊಂಡ ಅದೆಲ್ಲವೂ ನನಗಿಷ್ಟ ಎಂದು ನಾಚಿಕೊಂಡ ರಶ್ಮಿಕಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮುಂದಿನ ಸುದ್ದಿ
Show comments