ಕಿಚ್ಚ ಸುದೀಪ್ ಈಗ ಬಿಗ್ ಬಾಸ್ ಬ್ಯುಸಿ ಶೆಡ್ಯೂಲ್ ಮುಗಿಸಿ ಸಂಪೂರ್ಣವಾಗಿ ತಮ್ಮನ್ನು ಸಿನಿಮಾದಲ್ಲಿ ತೊಡಗಿಸಿ ಕೊಂಡಿದ್ದಾರೆ. ಅವರ ಬಹು ನಿರೀಕ್ಷಿತ ಚಿತ್ರ ತೆಲುಗು ಅತ್ತಾರಿಂಟಿಕಿ ದಾರೇದಿಯ ರೀಮೇಕ್ ಚಿತ್ರ ರನ್ನ ತನ್ನ ಶೂಟಿಂಗ್ ಕೆಲಸ ಆರಂಭ ಮಾಡಿದೆ.
ಈ ಚಿತ್ರದ ಟೈಟಲ್ ಬಗ್ಗೆ ಸಾಕಷ್ಟು ಗೊಂದಲ ಇದ್ದು ಅಂತಿಮವಾಗಿ ರನ್ನಗೆ ಅವಕಾಶ ದೊರೆತ ಬಗ್ಗೆ ನಾವು ತಿಳಿಸಿದ್ದೇವೆ. ಈ ಚಿತ್ರದಲ್ಲಿ ಪ್ರಕಾಶ್ ರಾಜ್ ಸಹ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಜೋರಾಗಿ ಹರಡಿತ್ತು, ಇದಕ್ಕೆ ಸಂಬಂಧಪಟ್ಟಂತೆ ಕಿಚ್ಚ ಸುದೀಪ್ ನಾವು ಇನ್ನು ಒಟ್ಟಿಗೆ ಶೂಟಿಂಗ್ ನಲ್ಲಿ ಭಾಗವಹಿಸಿಲ್ಲ,
ನಾನು ಪ್ರಕಾಶ್ ಅವರ ಜೊತೆ ನಟಿಸಲು ಕಾತುರದಿಂದ ಕಾಯುತ್ತಿದ್ದೇನೆ..ಎಂದು ಪ್ರಕಾಶ್ ರಾಜ್ ರಾನಡ ಭಾಗವಾಗಿದ್ದಾರೆ ಎನ್ನುವ ಸಂಗತಿಯನ್ನು ಕನ್ಫರ್ಮ್ ಮಾಡಿದ್ದಾರೆ.
ಈ ಚಿತ್ರದಲ್ಲಿ ಮಧು, ಹರಿಪ್ರಿಯ, ರಚಿತರಾಂ ಮುಂತಾದವರು ಅಭಿನಯಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ಹೈದರಾ ಬಾದ್ ನಲ್ಲಿ ಚಿತ್ರದ ಶೂಟಿಂಗ್ ಆಗಿದ್ದು, ಈಗ ತಂದ ಬೆಂಗಳೂರಿಗೆ ಮರಳಿದೆ.