ಪರ್ವತವಾಣಿ ಅವರ ಹಗ್ಗದ ಕೊನೆ ನಾಟಕ ಈಗ ಚಿತ್ರರೂಪದಲ್ಲಿ ಬಂದಿದೆ. ಆ ಚಿತ್ರದ ಚಿತ್ರಕಥೆ, ಸಂಭಾಷಣೆ ಹೊಣೆ ಹೊತ್ತಿರುವ ನವೀನ್ ಕೃಷ್ಣ ಮುಖ್ಯ ಪಾತ್ರಧಾರಿಯಾಗಿ ಅಭಿನಯಿಸಿದ್ದಾರೆ. ಇದನ್ನು ಹಿರಿಯ ನಿರ್ದೇಶಕ ದಯಾಳ್ ಪದ್ಮನಾಭನ್ ನಿರ್ದೇಶಿಸಿದ್ದಾರೆ.
ಉಮೇಶ್ ಬಣಕಾರ್ ಮತ್ತು ದಯಾಳ್ ಪದ್ಮನಾಭನ್ ನಿರ್ಮಾಪಕರಾಗಿದ್ದಾರೆ. ಸುಚೀಂದ್ರ ಪ್ರಸಾದ್ ಸಹ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಪ್ರಸ್ತುತ ಸಮಾಜದ ಒಳಕೋನಗಳನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ. ವಿಮರ್ಶಕರ ಮೆಚ್ಚುಗೆ ಪಡೆದಿರುವ ಹಗ್ಗದ ಕೊನೆ ಗಲ್ಲು ಶಿಕ್ಷೆ ಪಡೆದ ಖೈದಿಯ ಕಥೆಯನ್ನು ಆಧರಿಸಿದೆ.
@ಇಂದು ಕೋಲಾಹಲ ಎನ್ನುವ ಚಿತ್ರವೂ ತೆರೆ ಕಾಣುತ್ತಿದೆ. ಹೈದರಾ ಬಾದ್ ಮೂಲದ ಭಾಸ್ಕರ್ ಚಿತ್ರ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಪೂರ್ಣಿಮಾ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ರಮಣ ರಾಥೋಡ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಮೂರು ಜನ ನಾಯಕರು ಮೂರು ಜನ ನಾಯಕಿಯರು ಈ ಚಿತ್ರದಲ್ಲಿದ್ದಾರೆ. ಮಹಿ ಸರಳ ಛಾಯಾಗ್ರಹಣ ಚಿತ್ರಕ್ಕಿದೆ.