ಚಿತ್ರರಂಗದಲ್ಲಿ ನೆಲೆ ಕಾಣಲು ಸಾಕಷ್ಟು ಕಷ್ಟಪಡ ಬೇಕು ಕಲಾವಿದರು ಆದರೆ ಅದೃಷ್ಟ ಹೇಗೆ ಹಾಗು ಯಾವ ಸಮಯದಲ್ಲಿ ಕೈ ಹಿಡಿಯುತ್ತದೆಯೋ ಗೊತ್ತಿಲ್ಲ. ಸಿಂಧು ಲೋಕನಾಥ್ ಸಹ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡು ಒಂದಷ್ಟು ಮಟ್ಟಿಗೆ ಗೆಲುವನ್ನು ಕಂಡಿದ್ದಾರೆ.
ಜೈ ಬಜರಂಗ ಬಲಿ ಚಿತ್ರದಲ್ಲಿ ಕೃಷ್ಣ ಅಜಯ್ ರಾವ್ ಜೊತೆ ನಟಿಸಿರುವ ಸಿಂಧು ಇದರಲ್ಲಿ ಮೈ ಚಳಿ ಬಿಟ್ಟು ನಟಿಸಿದ್ದಾಳೆ. ಈ ಚಿತ್ರದಲ್ಲಿ ಈಕೆ ವಿದೇಶದಿಂದ ಬಂದ ಬೆಡಗಿ ಆಗಿದ್ದಾಳೆ. ಭಾರತಕ್ಕೆ ಬರುವ ಈಕೆಗೆ ಇಲ್ಲಿ ಅನೇಕ ಕಷ್ಟಗಳು ಎದುರಾಗುತ್ತದೆ. ಹೀರೋಯಿನ್ ಕಷ್ಟ ಪಡುತ್ತಿದ್ದರೆ ಹೀರೋ ಸುಮ್ಮನೆ ಕೂರಲು ಸಾಧ್ಯವೇ ? ಹಾಗೆ ಆಗುತ್ತದೆ. ಆಕೆಯನ್ನು ಕಷ್ಟದಿಂದ ಪಾರು ಮಾಡಿ ಮದುವೆ ಆಗುತ್ತಾನೆ ಪ್ರೀತಿಸಿ.
ಮೊಟ್ಟ ಮೊದಲ ಬಾರಿಗೆ ಸಿಂಧು ಅತ್ಯಂತ ಮಾದಕವಾಗಿ ಈ ಚಿತ್ರದಲ್ಲಿ ಕಂಡು ಬರುತ್ತಿರುವುದು ಆಕೆಯು ಚಿತ್ರರಂಗದಲ್ಲಿ ನೆಲೆ ಕಾಣಲು ಮಾಡುತ್ತಿರುವ ಸ್ಟ್ರಗಲ್ ಎತ್ತಿ ತೋರುತ್ತಿದೆ. ಅತ್ಯಂತ ಗ್ಲಾಮಿಯಾಗಿ ನಟಿಸಿರುವ ಕಾರಣದಿಂದ ಈಗ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ವಿದೇಶಿ ಹುಡುಗಿಯಾದ್ದರಿಂದ ಕೇವಲ ಪ್ರೀತಿ ಮಾಡುವ ಗ್ಲಾಮರ್ ಹುಡುಗಿ ಆಗಿಲ್ಲ, ಜೊತೆಗೆ ಬುಲೆಟ್ ಓಡಿಸುವ ಧೈರ್ಯಸ್ಥೆ ಸಹಿತ ಆಗಿದ್ದಾಳೆ. ರವಿ ವರ್ಮ ಗುಬ್ಬಿ ಈ ಚಿತ್ರದ ನಿರ್ದೇಶಕರು. ವಿ. ಹರಿ ಕೃಷ್ಣ ಸಂಗೀತ ಚಿತ್ರಕ್ಕಿದೆ. ಸಿನಿಮಾ ಬಿಡುಗಡೆಯ ಕಾಲ ಇನ್ನೇನು ಹತ್ತಿರದಲ್ಲೆ ಇದೆ ಎಂದು ಚಿತ್ರ ತಂಡ ತಿಳಿಸಿದೆ.