Webdunia - Bharat's app for daily news and videos

Install App

ಬಂಪರ್' ಸಿನಿಮಾದಲ್ಲಿ ಗರುಡಾ ರಾಮ್ ವಿಲನ್..!

Webdunia
ಬುಧವಾರ, 11 ಮಾರ್ಚ್ 2020 (12:52 IST)
ಗರುಡಾ ಎಂಬ ಹೆಸರು ಕೇಳಿದ್ರೆನೆ ಎಲ್ಲರ ಕಣ್ಣ ಮುಂದೆ ಕೆಜಿಎಫ್ ಸಿನಿಮಾದ ಆ ವಿಲನ್ ಬಂದು ನಿಲ್ಲುತ್ತಾನೆ. ಸಧ್ಯ ಕೆಜಿಎಫ್-2ನಲ್ಲೂ ಗರುಡಾ ತನ್ನ ಛಾಪು ಮೂಡಿಸಲು ಸಿದ್ಧವಾಗಿದ್ದಾರೆ. ಕೆಜಿಎಫ್-2ನಲ್ಲಿ ಗರುಡನ ಮುಂದಿನ ಭಾಗ ನೋಡಲು ಜನ ಕಾತುರದಿಂದ ಕಾಯುತ್ತಿದ್ದಾರೆ.

ಗರುಡಾ ಅಲಿಯಾಸ್ ರಾಮ್ ಅವರ ಪಾತ್ರ ಜನರ ಮನಸ್ಸಲ್ಲಿ ಹೇಗೆ ಅಚ್ಚಾಗಿದೆ ಅಂದ್ರೆ ಈಗಲೂ ಜನ ಕೆಜಿಎಫ್-1ರ ಕಡೆ ದೃಶ್ಯವನ್ನ ಯಾವತ್ತು ಮರೆಯಲು ಸಾಧ್ಯವಿಲ್ಲ, ಗರುಡಾ ಪಾತ್ರ ಜನರ ಮನಸ್ಸಲ್ಲಿ ಅಷ್ಟು ಪ್ರಭಾವ ಬೀರಿದೆ. ಇದೀಗ ಮತ್ತೊಂದು ಕನ್ನಡ ಸಿನಿಮಾದಲ್ಲಿ ವಿಲನ್ ಆಗಿ ಬರಲು ರಾಮ್ ರೆಡಿಯಾಗಿದ್ದಾರೆ.
 
 
ಸಿಂಪಲ್ ಸುನಿ‌ ನಿರ್ದೇಶನದ ಬಜಾರ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಧನ್ವೀರ್ ಮೊದಲ ಸಿನಿಮಾದ ಮೂಲಕವೇ ಭರವಸೆಯ ನಟನಾಗಿ ಹೊರಹೊಮ್ಮಿದ್ದರು. 'ಬಜಾರ್' ನಂತರ ಸಾಕಷ್ಟು ಆಫರ್ ಗಳು ಬಂದರೂ ಕೂಡ ಒಳ್ಳೆ ಕಥೆಗಾಗಿ ಕಾಯುತ್ತಿದ್ದ ನಟ, ಇದೀಗ 'ಬಂಪರ್' ಎಂಬ ಎರಡನೇ ಸಿನಿಮಾಗೆ ರೆಡಿಯಾಗಿದ್ದಾರೆ. ಈಗಾಗಲೇ 'ಬಂಪರ್' ಸಿನಿಮಾದ ಮುಹೂರ್ತವನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ನೆರವೇರಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ಹೊಸ ಹುಡುಗ ಧನ್ವೀರ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲು ರಾಮ್ ಓಕೆ ಎಂದಿದ್ದಾರೆ.
 
 
ಕೆಜಿಎಫ್ ನಲ್ಲಿ ಗರುಡನಾ ಆ ಖಡಕ್ ಎಂಟ್ರಿ, ತುಂಬಾ ಒರಟುತನ, ಮೈ ಜುಮ್ ಎನಿಸುವಂತ ಕ್ರೌರ್ಯ ಎಲ್ಲವೂ ಜನರ ಮನಸ್ಸಿನೊಳಗೆ ಹಾಗೇ ಕುಳಿತು ಬಿಟ್ಟಿವೆ. 'ಬಂಪರ್' ನಲ್ಲಿ ಧನ್ವೀರ್ ಹಾಗೂ ರಾಮ್ ಮುಖಾಮುಖಿಯಾಗಲಿದ್ದು, ಅವರಿಬ್ಬರ ಫೈಟ್ ಕುತೂಹಲ ಮೂಡಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

ಮುಂದಿನ ಸುದ್ದಿ
Show comments