Webdunia - Bharat's app for daily news and videos

Install App

ಗಡ್ಡಪ್ಪ ನ ಮತ್ತೊಂದು ಚಿತ್ರಕ್ಕೆ ಚಾಲನೆ

Webdunia
ಸೋಮವಾರ, 13 ಫೆಬ್ರವರಿ 2017 (13:18 IST)
ತಿಥಿ, ತರ್ಲೆ ವಿಲೇಜ್ ಖ್ಯಾತಿಯ ಗಡ್ಡಪ್ಪ ಈಗ ಬ್ಯುಸಿಯಾಗಿದ್ದಾರೆ, ಈ ಹಿಂದೆ, ಹರಿಶ್ಚಂದ್ರನ ಮಕ್ಕಳು ಎಂಬ ಚಿತ್ರವನ್ನು ನಿರ್ಮಿಸಿದ್ದ ಎಂ.ಸಿ.ಹೇಮಂತ್ ಗೌಡ ಅವರ ಸಂಸ್ಥೆಯಲ್ಲಿ ನಿರ್ಮಾಣವಾಗುತ್ತಿರುವ ಎರಡನೇ ಚಿತ್ರ ಪ್ರೊಡಕ್ಷನ್ ನಂಬರ್-2 ಚಿತ್ರದಲ್ಲಿ ಗಡ್ಡಪ್ಪ ಪ್ರಮುಖ ಪಾತ್ರದಲ್ಲಿ ನಿರ್ವಹಿಸುತ್ತಿದ್ದಾರೆ.  
 
ಕಳೆದ ಶುಕ್ರವಾರ ಚಿತ್ರಕ್ಕೆ ವಡ್ಡರಹಳ್ಳಿಯಲ್ಲಿ ಚಿತ್ರದ ಮುಹೂರ್ತ ನೆರವೇರಿತು.  ಹಳ್ಳಿಯ ಇಬ್ಬರು ಗೌಡರ ಗೆಳೆತನ ಒಬ್ಬ ಗೌಡನ ಮಗ, ಮತ್ತೊಬ್ಬ ಗೌಡನ ಮಗಳ ನಡುವಿನ ಗುಂಪುಗಾರಿಕೆ ಜಗಳ ಹೀಗೆ ಸಾಗುವ ಕಥೆಯನ್ನು ಪ್ರಧಾನವಾಗಿಟ್ಟುಕೊಂಡು, ಸಂಪೂರ್ಣ ಮನರಂಜನಾತ್ಮಕ ಚಿತ್ರವನ್ನು ರೂಪಿಸಲಾಗುತ್ತಿದೆ. 
 
ಈ ಚಿತ್ರ ಹಾಸ್ಯದ ಜೊತೆಜೊತೆಗೆ ಪ್ರೀತಿ ಪ್ರೇಮಗಳ ವಿಚಾರಗಳನ್ನೂ ಒಳಗೊಂಡಿದೆ. ಎಸ್.ರಾಜು ಚಟ್ಟನಹಳ್ಳಿ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಪಿ.ವಿ.ಆರ್.ಸ್ವಾಮಿ ಛಾಯಾಗ್ರಹಣ, ಕಾರ್ತಿಕ್ ಸಂಕಲನ, ಎಂ.ಸಿ.ರೇಣುಕ, ಕೆ.ಮೋಹನ್, ದರ್ಶನ್, ಸಹ ನಿರ್ಮಾಪಕರು.
   
ಗಡ್ಡಪ್ಪ ವಿಜಯ ಅರವಿಂದ್, ಅನಖಾ, ಜೋಕರ್  ಹನುಮಂತು, ವೆಂಕಟಾಚಲ, ಶಾಲಿನಿ ಸಂತೋಷ್, ಸುಮಂತ್ ಸೂರ್ಯ ದರ್ಶನ್, ವೇಣು, ಕೆ.ಆರ್.ಪೇಟೆ ತಮ್ಮಣ್ಣ, ಸಿದ್ದರಾಜು ಭೂಪಾಲ್, ಮಂಜುನಾಥ್ ಭದ್ರಾವತಿ, ಪಟೇಲ್ ರಂಗಪ್ಪ, ಹೇಮಂತ್‍ಗೌಡ, ಸಂಧ್ಯಾ ಮುಂತಾದವರ ತಾರಾಬಳಗವಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments