Webdunia - Bharat's app for daily news and videos

Install App

ಇನ್ನೊಬ್ಬ ನಟನ ಸಾವಿಗೂ ದಿಲೀಪ್ ಕಾರಣವೆಂದು ಆರೋಪ?!

Webdunia
ಶುಕ್ರವಾರ, 14 ಜುಲೈ 2017 (10:33 IST)
ಕೊಚ್ಚಿ: ಬಿದ್ದವರ ಮೇಲೆ ಕಲ್ಲು ಎಸೆಯುವುದು ಸಹಜ. ಮಲಯಾಳಂ ನಟ ದಿಲೀಪ್ ಪ್ರಕರಣದಲ್ಲೂ ಅದೇ ಆಗುತ್ತಿದೆ. ಮಲಯಾಳಂ ಸಿನಿಮಾ ರಂಗದಲ್ಲಿ ನಡೆದ ಎರಡು ಅಸಹಜ ಸಾವುಗಳಿಗೆ ದಿಲೀಪ್ ಕಾರಣ ಎಂಬ ಆರೋಪಗಳನ್ನು ಅವರ ಕುಟುಂಬದವರು ಮಾಡುತ್ತಿದ್ದಾರೆ.


ಪೋಷಕ ನಟ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದ ಕಲಾಭವನ್ ಮಣಿ ಅಸಹಜ ಸಾವಿಗೆ ಹಾಗೂ ಇನ್ನೊಬ್ಬ ಮಲಯಾಳಿ ನಟ ಶ್ರೀನಾಥ್ ಅಸಹಜ ಸಾವಿಗೂ ದಿಲೀಪ್ ಪರೋಕ್ಷವಾಗಿ ಕಾರಣರಾಗಿದ್ದರು ಎಂದು ಅವರ ಕುಟುಂಬ ಮಲಯಾಳಂ ಮಾಧ್ಯಮಗಳ ಮೂಲಕ ಆರೋಪಿಸಿವೆ.

ಕಲಾಭವನ್ ಮಣಿ ಮತ್ತು ದಿಲೀಪ್ ನಡುವೆ ಯಾವುದೋ ವಿಚಾರಕ್ಕೆ ಮನಸ್ತಾಪವಿತ್ತು. ಅದರ ಹಿನ್ನಲೆಯಲ್ಲೇ ಮಣಿ ಸಾವನ್ನಪ್ಪಿದ್ದರು ಎಂದು ಮಣಿ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ, ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಮಣಿ ಕುಟುಂಬಸ್ಥರ ಆರೋಪದ ಬೆನ್ನಲ್ಲೇ ಇನ್ನೊಬ್ಬ ನಟ ಶ್ರೀನಾಥ್ ಸಾವಿಗೂ ದಿಲೀಪ್ ನಡತೆಯೇ ಕಾರಣ ಎಂದು ಆ ನಟನ ಕುಟುಂಬದವರೂ ಆರೋಪಿಸಿದ್ದಾರೆ. ಸಿನಿಮಾವೊಂದರ ಪಾತ್ರಕ್ಕೆ ಆಯ್ಕೆಯಾದ ಮೇಲೆ ನಟ ದಿಲೀಪ್ ರಿಂದಾಗಿ ಶ್ರೀನಾಥ್ ಗೆ ಅವಕಾಶ ಕೈ ತಪ್ಪಿ ಹೋಯಿತು. ಹೀಗಾಗಿ ಮನನೊಂದು ಶ್ರೀನಾಥ್ ಸಾವನ್ನಪ್ಪಿದ್ದರು ಎಂದು ಅವರ ಕುಟುಂಬಸ್ಥರು ಮಾಧ್ಯಮವೊಂದರಲ್ಲಿ ಹೇಳಿದ್ದಾರೆ. ಹೀಗಾಗಿ ಇದೀಗ ದಿಲೀಪ್ ನಟಿಯ ಮೇಲಿನ ಹಲ್ಲೆ ಪ್ರಕರಣದ ಜತೆಗೆ ಇಂತಹ ಆರೋಪಗಳಿಗೂ ವೃಥಾ ಗುರಿಯಾಗುತ್ತಿದ್ದಾರೆ.

ಇದನ್ನೂ ಓದಿ.. ಕನ್ನಡ ಸಿನಿಮಾದಲ್ಲೂ ನಟಿಸಿದ್ದ ದಿಲೀಪ್.. ನೆನಪಿದೆಯೇ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments