Webdunia - Bharat's app for daily news and videos

Install App

ತಮಿಳು ತಂಬಿಗಳ ಮನ ಸೆಳೆದ ಶರತ್ ಲೋಹಿತಾಶ್ವ

Webdunia
ಮಂಗಳವಾರ, 22 ಏಪ್ರಿಲ್ 2014 (09:43 IST)
'ಎತಿರ್‌ ನೀಚಲ್‌' ಚಿತ್ರದಲ್ಲಿ ಖಳನಟನಾಗಿ ಕಾಣಿಸಿ ಎಲ್ಲರ ಮನ ಗೆದ್ದಿದ್ದ ಶರತ್  ಲೋಹಿತಾಶ್ವ ಅವರಿಗೆ ತಮಿಳಿನಲ್ಲಿ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಧನುಷ್‌ ನಿರ್ಮಾಣದ 'ಎತಿರ್‌ ನೀಚಲ್‌' ಚಿತ್ರದಲ್ಲಿ ಶಿವಕಾರ್ತಿಕೇಯನ್‌ ಹೀರೋ ಆಗಿದ್ದಾರೆ. ಅದರಲ್ಲಿ ಕನ್ನಡ ಶರತ್ ಲೋಹಿತಾಶ್ವ ವಿಲನ್. ಧನುಷ್‌ ಆ ಚಿತ್ರದ ಹಾಡೊಂದರಲ್ಲಿ ಮಾತ್ರ ಬಂದುಹೋಗುತ್ತಾರೆ. ಆದರೆ, ಶರತ್‌ ಲೋಹಿತಾಶ್ವ ಆ ಚಿತ್ರದ ಹೈಲೈಟ್‌
 
'ಎತಿರ್‌ ನೀಚಲ್‌' ಚಿತ್ರದ ನಟನೆ ನೋಡಿದ ಅಲ್ಲಿನ ಒಂದಷ್ಟು ತಮಿಳು ನಿರ್ದೇಶಕರು ಶರತ್‌ ರನ್ನು ಸಂಪರ್ಕಿಸಿದ್ದಾರೆ. . ಆ ಚಿತ್ರ ಬಿಡುಗಡೆಯಾಗಿ ಶತದಿನೋತ್ಸವ ಆಚರಿಸಿದೆ. ಅದಾದ ಬಳಿಕ ವಿಶಾಲ್‌ ನಿರ್ಮಾಣದ 'ಪಾಂಡಿಯ ನಾಡು' ಚಿತ್ರದಲ್ಲಿ ಶರತ್‌ ಪ್ರಧಾನ ಖಳ ನಟರಾಗಿದ್ದಾರೆ.  'ಆ ದಿನಗಳು' ಚಿತ್ರ ನೋಡಿದ ಆ ಚಿತ್ರದ ನಿರ್ದೇಶಕರು ಒಳ್ಳೆಯ ಪಾತ್ರ ಕೊಟ್ಟಿದ್ದಾರಂತೆ.  ತಮಿಳು ಚಿತ್ರಗಳು ಹುಡುಕಿ ಬರುತ್ತಿವೆಯಂತೆ. ಸದ್ಯಕ್ಕೆ 'ಒಗ್ಗರಣೆ' ಚಿತ್ರದ ನಾಯಕಿ ಸ್ನೇಹ ತಮಿಳಿನಲ್ಲೊಂದು ಚಿತ್ರ ನಿರ್ಮಿಸುತ್ತಿದ್ದು, ಆ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಅದರೊಂದಿಗೆ ಮತ್ತೊಂದು ಹೊಸ ಚಿತ್ರವೂ ಇದೆ. 
 
ಈ ನಡುವೆ ಕೆ.ಎಸ್‌.ರವಿಕುಮಾರ್‌ ರಜನಿಕಾಂತ್‌ ಸಿನಿಮಾವೊಂದನ್ನು ನಿರ್ದೇಶಿಸುತ್ತಿದ್ದು, ಆ ಚಿತ್ರದಲ್ಲೂ ಒಂದು ಪಾತ್ರ ಇದೆ ಎಂಬುದಾಗಿ ನಿರ್ದೇಶಕರು ಹೇಳಿದ್ದಾರೆ. ತಮಿಳು ಚಿತ್ರದಲ್ಲಿ ಇವರ ಕಂಠ ಬಳಕೆ ಆಗಿಲ್ಲವಂತೆ. ಕದಿರ್ ಎನ್ನುವ ಕಂಠ ದಾನ ಕಲಾವಿದ ಇವರ ಪಾತ್ರಕ್ಕೆ ಕಂಠದ ಮೂಲಕ ಜೀವ ತುಂಬಿದ್ದಾರೆ. ಒಟ್ಟಿನಲ್ಲಿ ನಮ್ಮ ಮನೆಯ ಅಂಗಳದ ಈ ಪ್ರತಿಭೆ ಪಕ್ಕದ ಮನೆಯಲ್ಲೂ ತನ್ನ ಪಾಂಡಿತ್ಯ ಪ್ರದರ್ಶಿಸಲು ಹೊರಟಿದೆ.. ಅವರ ಸಿನಿ ಪಯಣ ಯಶಸ್ವಿ ಆಗಲಿ 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments