Webdunia - Bharat's app for daily news and videos

Install App

ಒಂದೇ ಊರಿನಲ್ಲಿ ಚಿತ್ರೀಕರಣವಾಗಿರುವ ಚಿತ್ರ ’ಈ ಕಲರವ’

Webdunia
ಮಂಗಳವಾರ, 7 ಫೆಬ್ರವರಿ 2017 (11:51 IST)
ಈ ಹಿಂದೆ ಬಿಕೊ ಎಂಬ ಚಿತ್ರವನ್ನು  ನಿರ್ದೇಶಿಸಿದ್ದ ಸಂದೀಪ್ ದಕ್ಷ್ ನಿರ್ದೇಶನದಲ್ಲಿ ಮೂಡಿಬಂದಿರುವ 2ನೇ ಚಿತ್ರ ’ಈ ಕಲರವ’. ಚಿತ್ರದ  ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ.  ಸಂಪೂರ್ಣ ಗ್ರಾಮೀಣ ಸೊಗಡಿನ ಕಥೆ, ಇದು. ಈಗ ಈ ಚಿತ್ರದ ಧ್ವನಿಸುರುಳಿ ಹೊರಬಂದಿದೆ. 
 
ಗ್ರಾಮದಲ್ಲಿ ನಡೆಯುವ ರಾಜಕೀಯ, ಅದರ ಮಧ್ಯೆ ಒಂದು ಪ್ರೀತಿ, ಆ ಪ್ರೀತಿಯನ್ನು ಉಳಿಸಿಕೊಳ್ಳಲು ನಾಯಕನ ಹೋರಾಟ, ಕೊನೆಗೆ ನಾಯಕನಿಗೆ ಆ ಪ್ರೀತಿ ದಕ್ಕಿಯೋ ಇಲ್ವೋ ಎನ್ನುವುದೇ ಈ ಚಿತ್ರದ ಕಥಹಂದರ. ಜೊತೆಗೆ ನವಿರಾದ  ಹಾಸ್ಯವನ್ನು ಹೊಂದಿದ ಈ ಚಿತ್ರದಲ್ಲಿ ಪ್ರೀತಿ ಹಾಗೂ ಒಂದು ಸಾಮಾಜಿಕ ಸಂದೇಶವನ್ನು ನಿರೂಪಿಸಲಾಗಿದೆ.  
 
ಕೆ.ಆರ್.ನಗರದ ತಿಪ್ಪೂರು ಎಂಬ ಪುಟ್ಟ ಗ್ರಾಮದಲ್ಲಿ ಈ ಚಿತ್ರದ ಬಹುತೇಕ  ಚಿತ್ರಣವನ್ನು ಮಾಡಲಾಗಿದೆ. ಇಡೀ ಚಿತ್ರ ಇದೊಂದೇ ಊರಿನಲ್ಲಿ ಚಿತ್ರಿತವಾಗಿರುವುದು ಚಿತ್ರದ ವಿಶೇಷ. ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ಸಂದೀಪ್ ದಕ್ಷ ನನ್ನ ಮೊದಲ ಚಿತ್ರ ಕಾರಣಾಂತರಗಳಿಂದ ಇನ್ನೂ ರಿಲೀಸ್ ಆಗಿಲ್ಲ, ಈ ಚಿತ್ರದ ಕ್ಲೈಮ್ಯಾಕ್ಸ್ ತುಂಬಾ ಅದ್ಭುತವಾಗಿದೆ. 
 
ಚಿತ್ರದ ಪ್ರತಿ ಸನ್ನಿವೇಶಗಳೂ ಹೊಸತನದಿಂದ ಕೂಡಿವೆ ಎಂದು ಹೇಳಿದರು. ನಿರ್ಮಾಪಕ ಮಹದೇವಗೌಡ ಮಾತನಾಡಿ ನಾನು ಮೂಲತಃ ಗಾರೆ ಕೆಲಸಗಾರ, ಸಂದೀಪ್ ಅವರ ಚಿತ್ರೀಕರಣಕ್ಕೆಂದು ಬಂದಾಗ ನನಗೆ ಪರಿಚಯವಾದರು, ಹಾಗೆ ಬೆಳೆದ ಗೆಳೆತನ ಚಿತ್ರ ನಿರ್ಮಾಣದವರೆಗೂ ಬಂದಿತು ಎಂದು ಹೇಳಿದರು.
 
ಈ ಚಿತ್ರದ 4 ಹಾಡುಗಳಿಗೆ ಪೀಟರ್ ಎಂ.ಜೋಸೆಫ್ ಹಾಗೂ ಪ್ರಕಾಶ್ ಬಾಬು ಸಂಗೀತ ಮಾಡಿದ್ದಾರೆ.  ಕುಮಾರ್ ಜಿ ಅವರ  ಛಾಯಾಗ್ರಹಣವಿದೆ. ರವಿಚಂದ್ರನ್-ಸಂಕಲನ, ಸುಬ್ಬು, ಅಶೋಕ್-ಸಾಹಸ, ಧನುಕುಮಾರ್ - ನೃತ್ಯ ನಿರ್ದೇಶನ, ಸಂದೀಪ್‍ದಕ್ಷ್ - ಸಾಹಿತ್ಯ, ನಿಖಿಲ್ ನಾಚಪ್ಪ ಸಹನಿರ್ದೇಶನವಿದೆ. ನವೀನ್ ಕೃಷ್ಣ, ರೋಹಿಣಿ ಭಾರಧ್ವಾಜ್, ರಶ್ಮಿ, ಮೈಸೂರು ಶೋಭಾ, ನಿಹಾರಿಕಾ, ಮಹಾದೇವೇಗೌಡ, ಪದ್ದುಶೇಖರ್, ಸಂತೋಷ್, ಪ್ರಿಯ ಇನ್ನು ಮುಂತಾದವರ ತಾರಾಬಳಗವಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿವೋರ್ಸ್ ಬೆನ್ನಲ್ಲೇ ಗೆಳತಿ ಹಾಡಿನ ಆಲ್ಬಂನಲ್ಲಿ ಕಾಣಿಸಿಕೊಂಡ ಜಯಂ ರವಿ, ಟ್ರೋಲ್‌ಗೊಳಗಾದ ಕೆನೀಶಾ ಧ್ವನಿ

ಆಕೆಯಿಂದ ತುಂಬಾ ನಷ್ಟ ಅನುಭವಿಸಿದೆವು: ಡಿಂಪಲ್‌ ಕ್ವೀನ್ ರಚಿತಾ ರಾಮ್ ವಿರುದ್ಧ ಇಂದೆಂಥಾ ದೂರು

Viral video: ನಟಿ ಸಮಂತಾಗೆ ರಸ್ತೆ ಮಧ್ಯೆಯೇ ಕಿರುಕುಳ

ಥಗ್ ಲೈಫ್ ಇಷ್ಟವಿಲ್ಲದಿದ್ರೆ ನೋಡ್ಬೇಡಿ, ಕರ್ನಾಟಕದಲ್ಲಿ ರಿಲೀಸ್ ಮಾಡಿ ಎಂದ ಸುಪ್ರೀಂಕೋರ್ಟ್

ಅಣ್ಣಾವ್ರ ಜೊತೆ ವಿಷ್ಣುವರ್ಧನ್ ಎಲ್ಲರೂ ಅಂದುಕೊಂಡಿದ್ದೇ ಬೇರೆ ಇದ್ದಿದ್ದೇ ಬೇರೆ

ಮುಂದಿನ ಸುದ್ದಿ
Show comments