ಸಮಸ್ಯೆಗಳನ್ನು ಎದುರಿಸಲು ಅಣ್ಣಾವ್ರು ಹೇಳಿದ ಈ ಮಾತು ನಮಗೆಲ್ಲಾ ಪಾಠವಾಗಬೇಕು

Krishnaveni K
ಶನಿವಾರ, 14 ಮಾರ್ಚ್ 2026 (10:33 IST)
ಅಭಿಮಾನಿಗಳಿಂದ ಅಣ್ಣಾವ್ರು ಎಂದು ಕರೆಯಿಸಿಕೊಳ್ಳುವ ಡಾ ರಾಜ್ ಕುಮಾರ್ ಕೇವಲ ನಟನಾಗಿ ಮಾತ್ರವಲ್ಲ, ನಿಜ ಜೀವನದಲ್ಲೂ ತಮ್ಮ ಆದರ್ಶಗಳಿಂದ ಜನರಿಗೆ ಅನುಕರಣೀಯರಾಗಿದ್ದರು. ಸಮಸ್ಯೆಗಳನ್ನು ಎದುರಿಸುವಾಗ ಅಣ್ಣಾವ್ರ ಈ ಮಾತು ನಮಗೆ ಪಾಠವಾಗಬೇಕು.

ಅಣ್ಣಾವ್ರು ತೆರೆ ಮೇಲೆ ಮೆರೆದು ಸಾಕಷ್ಟು ಜನರ ಪ್ರೀತಿ ಸಂಪಾದಿಸಿರಬಹುದು. ಹಾಗಂತ ಅವರಿಗೆ ಕಷ್ಟಗಳೇ ಇರಲಿಲ್ಲ ಎಂದಲ್ಲ. ಜೀವನದಲ್ಲಿ ಅವರೂ ಸಾಮಾನ್ಯರಂತೇ ಹಲವು ಏಳು-ಬೀಳುಗಳನ್ನು ಎದುರಿಸಿದ್ದಾರೆ. ಆದರೆ ಅದನ್ನೆಲ್ಲವನ್ನೂ ಅವರು ಎದುರಿಸಿ ಯಶಸ್ವೀ ಜೀವನ ನಡೆಸಿದವರು.

ಅಣ್ಣಾವ್ರಿಗೆ ಕೊನೆ ಕೊನೆಯಲ್ಲಿ ಮೊಣಕಾಲಿನ ಸಮಸ್ಯೆಯಾಗಿತ್ತು. ಎಷ್ಟೆಂದರೆ ಅವರಿಗೆ ತಮ್ಮ ಮೆಚ್ಚಿನ ಪಾತ್ರ ಮಾಡಲೂ ಕಷ್ಟವಾಗಿತ್ತು. ಇದು ಅವರಿಗೆ ತೀರಾ ಬಾಧೆ ನೀಡುತ್ತಿತ್ತು. ವೀರಪ್ಪನ್ ಅಪಹರಿಸಿ ಕಾಡಿಗೆ ಕರೆದುಕೊಂಡು ಹೋಗಿದ್ದಾಗಲೂ ಅವರಿಗೆ ಈ ಸಮಸ್ಯೆಯಿತ್ತು.

ಮೊಣಕಾಲಿನ ಸಮಸ್ಯೆಗೆ ಅವರು ಸಾಕಷ್ಟು ಚಿಕಿತ್ಸೆ ಪಡೆಯಲು ನೋಡಿದರಂತೆ. ಆದರೆ ಏನೇ ಮಾಡಿದರೂ ಅದು ಹೋಗುತ್ತಿರಲಿಲ್ಲ. ಕೊನೆಗೆ ಅಣ್ಣಾವ್ರು, ಇರಲಿ ನಾನೂ ನೋಡೇ ಬಿಡ್ತೀನಿ. ಇದನ್ನು ನನ್ನ ಫ್ರೆಂಡ್ ಮಾಡಿಕೊಳ್ಳುತ್ತೇನೆ. ನಾನು ಇರುವವರೆಗೆ ನನ್ನ ಜೊತೆಗೇ ಇರಲಿ. ಎಷ್ಟು ದಿನ ನನ್ನ ಜೊತೆಗಿರುತ್ತದೆ? ನಾನು ಇರುವವರೆಗೆ ಮಾತ್ರ ತಾನೇ ಎನ್ನುತ್ತಿದ್ದರಂತೆ. ಅದೇ ರೀತಿ ನಮಗೆ ಬರುವ ಸಮಸ್ಯೆಗಳನ್ನು ನಾವು ಸ್ನೇಹಿತನಂತೆ ಮಾಡಿಕೊಂಡು ಬಿಟ್ಟರೆ ಆ ಸಮಸ್ಯೆ ನಮಗೆ ಕಷ್ಟ ಎನಿಸಲ್ಲ ಎಂಬುದು ಅಣ್ಣಾವ್ರಿಂದ ನಾವು ಕಲಿಯಬೇಕಾದ ಪಾಠವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟಿ ತ್ವಿಶಾ ಸಾವು ಪ್ರಕರಣದ ತನಿಖೆ: ಮಹತ್ವದ ಬೆಳವಣಿಗೆ

ಸುದೀಪ್ ಸೋದರಳಿಯನ ಮ್ಯಾಂಗೋ ಪಚ್ಚ ಸಿನಿಮಾ ಟ್ರೇಲರ್‌ಗೆ ರಿಷಬ್ ಶೆಟ್ಟಿ ಮೆಚ್ಚುಗೆ

ಹೊಸ ತಮಿಳು ಸಿನಿಮಾಗೆ ದಿನದಲ್ಲಿ ಐದು ಶೋ ಪ್ರದರ್ಶಿಸಲು ಸಿಎಂ ವಿಜಯ್ ಅನುಮತಿ

ಸಲ್ಮಾನ್ ಖಾನ್ ತೀರಾ ಖಾಸಗಿ ಕ್ಷಣ ಸೋಷಿಯಲ್ ಮೀಡಿಯಾದಲ್ಲಿ ಲೀಕ್: ತೀರಾ ಅತಿಯಾಯ್ತು ಎಂದ ಪಬ್ಲಿಕ್ Video

Video ಕಾಂತಾರ ವಿವಾದ: ಚಾಮುಂಡಿ ತಾಯಿ ಸನ್ನಿಧಿಗೆ ಬಂದು ತಲೆಬಾಗಿ ಕ್ಷಮೆ ಕೇಳಿದ ರಣವೀರ್ ಸಿಂಗ್

ಮುಂದಿನ ಸುದ್ದಿ
Show comments