ಡಾ. ರಾಜ್ ಕಪ್ ಕ್ರಿಕೆಟ್ ಮ್ಯಾಚ್ ತನ್ನ ನಾಲ್ಕನೇ ಹಂತದ ಆಟವನ್ನು ಆರಂಭ ಮಾಡಿದೆ. ಶನಿವಾರ ಈ ಪಂದ್ಯಾವಳಿ ಆರಂಭವಾಯಿತು. ಹಾಸನ ಜಿಲ್ಲೆಯಲ್ಲಿ ಈ ಸ್ಪರ್ಧೆಗಳು ಆರಂಭವಾಯ್ತು.
ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ, ಪ್ರಸಿದ್ಧ ನಿರ್ದೇಶಕ ಎಸ್ವಿ ರಾಜೇಂದ್ರಸಿಂಗ್ ಬಾಬು ಮುಂತಾದವರು ಕಾರ್ಯಕ್ರಮದ ಭಾಗವಾಗಿದ್ದರು.
ಸಾಕಷ್ಟು ನಿರೀಕ್ಷೆಗಳನ್ನು ಹೊತ್ತು, ತಮ್ಮ ಪ್ರೀತಿಯ ನಾಯಕ ನಟರನ್ನು ಕಾಣುವ ಆಸೆಯಿಂದ ಬಂದ ಅಭಿಮಾನಿಗಳಿಗೆ ಸಾಕಷ್ಟು ನಿರಾಸೆ ಉಂಟಾಯಿತು. ಅದಕ್ಕೆ ಕಾರಣ ಅಂದು ಶ್ರೀನಗರ ಕಿಟ್ಟಿ ಹೊರತು ಪಡಿಸಿದರೆ ಮತ್ಯಾಮ ಟೀಮ್ ಲೀಡರ್ ಸಹ ಕಾಣಲಿಲ್ಲ.
ಆರಂಭಿಕ ಹಂತಹ ಕ್ರಿಕೆಟ್ ಮ್ಯಾಚ್ ಶ್ರೀನಗರ ಕಿಟ್ಟಿ ಮತ್ತು ಉಪೇಂದ್ರ ಟೀಮ್ ಆಡಿತಾದರೂ ಗೆದ್ದಿದ್ದು ಶ್ರೀನಗರ ಕಿಟ್ಟಿ ತಂಡ.
ಕಾರ್ಯಕ್ರಮದಲ್ಲಿ ನಟರಾದ ರವಿ ಚೇತನ್, ಲೋಕಿ, ಥ್ರಿಲ್ಲರ್ ಮಂಜು, ದೀಪಕ್, ಪೆಟ್ರೋಲ್ ಪ್ರಸನ್ನ, ಮೇಘನ ಗೊಯಂಕರ್, ಪಟ್ರೆ ಅಜಿತ್ ಮುಂತಾದವರು ಹಾಜರಿದ್ದರು.
ಈ ಸ್ಪರ್ಧೆಯ ರೂವಾರಿ ಸ್ಯಾಂಡಲ್ ವುಡ್ ಡ್ಯಾನ್ಸ್ ಡೈರೆಕ್ಟರ್ ರಾಜೇಶ್ ಬ್ರಹ್ಮಾವರ್ .