ಮಾನವೀಯ ಮೌಲ್ಯಗಳಿಗಾಗಿ ಹೆಸರು ಮಾಡಿದ ಬಂಗಾರದ ಮನುಷ್ಯ ಡಾ.ರಾಜ್

Webdunia
ಮಂಗಳವಾರ, 25 ಫೆಬ್ರವರಿ 2020 (20:11 IST)
ಕನ್ನಡ ಚಿತ್ರರಂಗದಲ್ಲಿ ಡಾ.ರಾಜಕುಮಾರ್ ಒಬ್ಬ ಮೇರು ನಟನಾಗಿ ತಮ್ಮ ನಟನೆಯ ಜೊತೆ ತಮ್ಮ ಸಹ ನಟ-ನಟಿರೊಂದಿಗೆ ಹಾಗೂ ತಂತ್ರಜ್ಞರೊಂದಿಗೆ ತುಂಬಾ ಪ್ರೀತಿಯಿಂದ ಬೆರೆಯುತ್ತ ಮಾನವೀಯ ಮೌಲ್ಯಗಳಿಗಾಗಿ ಹೆಸರು ಮಾಡಿದ ಬಂಗಾರದ ಮನುಷ್ಯ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹೆಚ್.ಎಂ.ಮಹೇಶ್ವರಯ್ಯ ಬಣ್ಣಿಸಿದರು.

ಕಲಬುರಗಿಯ ಕೇಂದ್ರಿಯ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗ ಹಾಗೂ ಕಲಬುರಗಿಯ ರಂಗಾಯಣದ ಸಂಯುಕ್ತಾಶ್ರಯದಲ್ಲಿ ನಡೆಯುವ 30 ದಿನಗಳ ಸಿನಿಮೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ರಾಜಕುಮಾರ ಅವರ ಸಿನಿಮಾ ನೋಡುತ್ತಾ ಬೆಳೆದ ಅನುಭವವನ್ನು ಹಂಚಿಕೊಂಡ ಕುಲಪತಿಗಳು, ಸಿನೆಮಾಗಳು ಕನ್ನಡ, ಸಂಸ್ಕೃತಿಯನ್ನು ಬಿಂಬಿಸುತ್ತವೆ ಎಂದರು.

ಸಿನಿಮೋತ್ಸವದಿಂದ ವಿದ್ಯಾರ್ಥಿಗಳಲ್ಲಿನ ಶೈಕ್ಷಣಿಕ ಒತ್ತಡವನ್ನು ನಿವಾರಿಸಲು ಹಾಗೂ ಕನ್ನಡ ಸಿನಿಮಾಗಳನ್ನು ವೀಕ್ಷಿಸುವದರಿಂದ ಭಾಷೆ, ಸಂಸ್ಕೃತಿಯನ್ನು ಗೌರವಿಸುವ ಮನೋಭಾವ ಹೊಂದಲು ಅನುಕೂಲವಾತ್ತದೆ ಎಂದರು. ಇದೇ ಸಂದರ್ಭದಲ್ಲಿ ಅವರು ಮುಂದಿನ ಶೈಕ್ಷಣಿಕ ವರ್ಷದಿಂದ ಸಂಗೀತ, ಜರ್ಮನ್, ಜಪಾನೀಸ್, ಅರೇಬಿಕ್ ಹಾಗೂ ಸ್ಪ್ಯಾನಿಶ್ ಭಾಷೆಗಳ ಸರ್ಟಿಫಿಕೇಟ್ ಕೋರ್ಸ್ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಫೆಬ್ರವರಿ 24 ರಿಂದ ಮಾರ್ಚ 23 ರ ವರೆಗೆ ನಡೆಯುವ 30 ದಿನಗಳ ಸಿನಿಮೋತ್ಸವದಲ್ಲಿ ಡಾ.ರಾಜಕುಮಾರವರ 22 ಸಿನಿಮಾಗಳನ್ನು ಪ್ರದರ್ಶಿಸಲಿದ್ದು, ಮಾರ್ಚ 24ರಂದು ಮುಕ್ತಾಯಗೊಳ್ಳಲಿದೆ.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಾಬಿ ಜತೆಗಿನ ಪ್ರೀತಿ ಜೀವನದ ಅದ್ಭುತ ಘಳಿಗೆ: ಹಳೆ ಪ್ರೇಮಿ ಬಗ್ಗೆ ಪೂಜಾ ಭಟ್

ಸನಾತನ ಧರ್ಮವೇ ಜೀವನ ವಿಧಾನ: ಉದಯನಿಧಿ ಸ್ಟಾಲಿನ್ ವಿರುದ್ಧ ಸಿಡಿದೆದ್ದ ನಟ ಅರ್ಜುನ್ ಸರ್ಜಾ

ಬಾಲಿವುಡ್ ನಟ ನಟಿಯರ ಜತೆ ಉತ್ತಮ ಒಡನಾಟ ಹೊಂದಿದ್ದ ಕರಣ್ ಜೋಹರ್‌ ಹೀಗ್ಯಾಕೆ ನಡ್ಕೊಂಡ್ರು

ನಟಿ ತ್ವಿಶಾ ಸಾವು ಪ್ರಕರಣದ ತನಿಖೆ: ಮಹತ್ವದ ಬೆಳವಣಿಗೆ

ಸುದೀಪ್ ಸೋದರಳಿಯನ ಮ್ಯಾಂಗೋ ಪಚ್ಚ ಸಿನಿಮಾ ಟ್ರೇಲರ್‌ಗೆ ರಿಷಬ್ ಶೆಟ್ಟಿ ಮೆಚ್ಚುಗೆ

ಮುಂದಿನ ಸುದ್ದಿ
Show comments