Webdunia - Bharat's app for daily news and videos

Install App

ಅನಗತ್ಯ ವಿವಾದಗಳ ಮೂಲಕ ಸಮಯ ವ್ಯರ್ಥ ಮಾಡದಿರಿ ಎಂದ ಸುದೀಪ್

Webdunia
ಮಂಗಳವಾರ, 21 ಏಪ್ರಿಲ್ 2015 (10:48 IST)
ಅನಗತ್ಯವಾದ ವಿಷಯಗಳನ್ನು ಚರ್ಚಿಸುತ್ತಾ  ದೊಡ್ಡ ವಿವಾದವನ್ನಾಗಿ ಮಾಡದಿರಿ ಎಂದು ನಟ ನಿರ್ದೇಶಕ ಸುದೀಪ್ ಮನವಿ ಮಾಡಿಕೊಂಡಿದ್ದಾರೆ. ಕಲಾವಿದರ ಬಾಂಧವ್ಯ ತುಂಬಾ ಚೆನ್ನಾಗಿದೆ, ಆದರೆ ಸುಖಾಸುಮ್ಮನೆ ಇಲ್ಲದ್ದು ಸಲ್ಲದ್ದು ಚರ್ಚಿಸಿ ವಾತಾವರಣ ಹಾಳು ಮಾಡದಿರಿ ಎಂದು ಕೇಳಿಕೊಂಡಿದ್ದಾರೆ ಕಿಚ್ಚ. 

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕಾನೇಕ ಕಾಮೆಂಟ್‌ಗಳು ಹರಡಿದ್ದು, ಕಲಾವಿದರು ಅವರ ಚರ್ಚೆಯ ವಿಷಯವಾಗಿದ್ದರು. ಅದರಲ್ಲಿ ಅನೇಕ ಮಂದಿ ಸ್ಟಾರ್ ಕಲಾವಿದ ಅಭಿಮಾನಿಗಳಿದ್ದರು. ಫ್ಯಾನ್ಸ್ ಇರುವ ಕಡೆ ಎಂತಹ ವಾತಾವರಣ ಇರುತ್ತದೆ ಎನ್ನುವುದನ್ನು ವಿವರಿಸಿ ಹೇಳಬೇಕಿಲ್ಲ. ಯಾರು ಮುಖ್ಯ ಯಾರು ಅಮುಖ್ಯ. ಯಾವ ನಟ ದೊಡ್ಡವ ಮತ್ಯಾರು ಅಲ್ಲ ಹೀಗೆ ಸಣ್ಣ ಪುಟ್ಟ ಸಂಗತಿಗಳು ಬಿರುಸಾಗಿ ಚರ್ಚೆಗೆ ಕಾರಣವಾಗುತ್ತಿದ್ದು ಅದರಿಂದ ಫ್ಯಾನ್‌ಗಳು ಮತ್ತಷ್ಟು ತಮ್ಮ ಪ್ರೀತಿಯ ಕಲಾವಿದರನ್ನು ಹಾಡಿ ಹೊಗಳಿ ಮತ್ತೊಬ್ಬರನ್ನು ಕೆಳಗಿಳಿಸುವತ್ತ ಆದ್ಯತೆ ನೀಡುತ್ತಿದ್ದಾರೆ. 
 
ಈ ಸಂಗತಿಯ ಬಗ್ಗೆ ಟ್ವೀಟ್ ಮಾಡಿದ ಸುದೀಪ್ ಅನಗತ್ಯ ಜಗಳಗಳ ಬಗ್ಗೆ ಟ್ವೀಟ್ ಮಾಡುತ್ತಾ ಕೂರದಿರಿ. ಇದಕ್ಕೊಂದು ಅಂತ್ಯ ಕೊಡಿ ಇದು ನನ್ನ ಬೇಡಿಕೆ ಎಂದು ಹೇಳಿದ್ದಾರೆ. ನಾವೆಲ್ಲಾ ಕಲಾವಿದರು ಒಬ್ಬರಿಗೊಬ್ಬರು ಉತ್ತಮ ಬಾಂಧವ್ಯ ಹೊಂದಿದ್ದೇವೆ ಎಂದು ಈ ಸಮಯದಲ್ಲಿ ತಿಳಿಸಿದ್ದಾರೆ.  

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments