Select Your Language

Notifications

webdunia
webdunia
webdunia
webdunia

8ನೇ ತರಗತಿಯಲ್ಲೇ ಸಿನಿಮಾದಲ್ಲಿ ಅಭಿನಯಿಸೋದಕ್ಕಾಗಿ ಮನೆ ಬಿಟ್ಟು ಬಂದಿದ್ರಂತೆ ರಾಜು..

8ನೇ ತರಗತಿಯಲ್ಲೇ ಸಿನಿಮಾದಲ್ಲಿ ಅಭಿನಯಿಸೋದಕ್ಕಾಗಿ ಮನೆ ಬಿಟ್ಟು ಬಂದಿದ್ರಂತೆ ರಾಜು..
, ಗುರುವಾರ, 26 ನವೆಂಬರ್ 2015 (10:15 IST)
ಗುರುನಂದನ್ ಬಣ್ಣದ ಬದುಕಿನ ಹಿಂದೆ ಒಂದು ಕಥೆಯಿದೆ. ಬಾಲ್ಯದಿಂದಲೇ ತಾನು ನಟನಾಗಬೇಕು ಅಂದುಕೊಂಡಿದ್ದ ಗುರುನಂದನ್ ಅದಕ್ಕಾಗಿ ನಾನಾ ಕಸರತ್ತುಗಳನ್ನು ಮಾಡಿಕೊಂಡೇ ಬಂದಿದ್ದರು. ಇನ್ನು ಎಂಟನೇ ತರಗತಿಯಲ್ಲಿ ಓದುತ್ತಿದ್ದಾಗ ಗುರುನಂದನ್ ಸಿನಿಮಾದಲ್ಲಿ ಅಭಿನಯಿಸುವುದಕ್ಕಾಗಿ ಮನೆ ಬಿಟ್ಟು ಬಂದಿದ್ರಂತೆ.

ಹೌದು...ಚಿಕ್ಕಮಗಳೂರಿನವರಾದ ಗುರುನಂದನ್ 8ನೇ ತರಗತಿಯಲ್ಲಿರುವಾಗ ಹೇಗಾದ್ರೂ ಮಾಡಿ ತಾನು ಸಿನಿಮಾದಲ್ಲಿ ಅಭಿನಯಿಸಬೇಕು ಎಂದು ನಿರ್ಧರಿಸಿದ್ರಂತೆ. ಅದಕ್ಕಾಗಿ 7000 ರೂಪಾಯಿಯನ್ನು ಸಂಗ್ರಹಿಸಿ ಮನೆಯವರಿಗ್ಯಾರಿಗೂ ಹೇಳದೇ ನೇರವಾಗಿ ಬೆಂಗಳೂರಿಗೆ ಬಂದು ಅವರ ಸಂಬಂಧಿಯ ಮನೆಯಲ್ಲಿ ಉಳಿದುಕೊಂಡಿದ್ರಂತೆ. ಇದೇ ವೇಳೆ ಅನೇಕ ನಿರ್ಮಾಪಕರನ್ನು ಭೇಟಿಯಾಗಿ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಕೇಳುತ್ತಿದ್ದರಂತೆ. ಆದ್ರೆ ಅವಕಾಶ ಸಿಕ್ಕಿರಲಿಲ್ಲವಂತೆ.ಅಷ್ಟರಲ್ಲಿ ಅವರ ಪೋಷಕರು ಬಂದು ಅವರನ್ನು ವಾಪಸ್ ಊರಿಗೆ ಕರೆದುಕೊಂಡು ಹೋದ್ರಂತೆ.
 
ಅಭಿನಯಿಸೋದಕ್ಕಾಗಿ ಇಷ್ಟೆಲ್ಲಾ ಪರದಾಡಿದ್ದ ಗುರುನಂದನ್ ಇದೀಗ ಫಸ್ಟ್ ರ್ಯಾಂಕ್ ರಾಜು ಸಿನಿಮಾದ ಮೂಲಕ ಹೀರೋ ಆಗಿದ್ದಾರೆ.ಈ ಹಿಂದೆ ಸೈಬರ್ ಯುಗದೊಳೆ ಪ್ರೇಮಕಾವ್ಯ ಸಿನಿಮಾದಲ್ಲೂ ಇವರು ಅಭಿನಯಿಸಿದ್ದರು. ಇದೇ ವಾರ ಫಸ್ಟ್ ರ್ಯಾಂಕ್ ರಾಜು ಸಿನಿಮಾ ಪ್ರೇಕ್ಷಕರೆದುರಿಗೆ ಬರುತ್ತಿದ್ದು,ಈಗಾಗಲೇ ಸಿನಿಮಾ ನೋಡೋದಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Share this Story:

Follow Webdunia kannada