Select Your Language

Notifications

webdunia
webdunia
webdunia
webdunia

ಎಸ್ .ಎಲ್. ಭೈರಪ್ಪನವರ ಪರ್ವ ಕಾದಂಬರಿ ಸಿನಿಮ ಮಾಡ್ತಾರಂತೆ ರಾಜಮೌಳಿ ?

ಎಸ್ .ಎಲ್. ಭೈರಪ್ಪನವರ ಪರ್ವ ಕಾದಂಬರಿ ಸಿನಿಮ ಮಾಡ್ತಾರಂತೆ ರಾಜಮೌಳಿ ?
, ಶನಿವಾರ, 18 ಅಕ್ಟೋಬರ್ 2014 (14:08 IST)
ದಕ್ಷಿಣ ಭಾರತ ಸ್ಟಾರ್ ನಿರ್ದೇಶಕ ಮತ್ತು ತೆಲುಗು ಭಾಷೆಯ ಪ್ರತಿಭಾವಂತ ನಿರ್ದೇಶಕ ಆಗಿರುವ ರಾಜಮೌಳಿ ಹೊಸತನಗಳ ಬಗ್ಗೆ ಸದಾ ಚಿಂತಿಸುವ ನಿರ್ದೇಶಕ. ತಮ್ಮ ಚಿತ್ರಕ್ಕಾಗಿ ಯಾವುದೇ ರೀತಿಯ ಕಾಂಪ್ರೋಮೈಸ್ ಮಾಡಿಕೊಳ್ಳು ಇಷ್ಟ ಪಡುವುದಿಲ್ಲ. ಅವರ ಬಹು ನಿರೀಕ್ಷಿತ ಚಿತ್ರ ಬಾಹುಬಲಿ ಅದಕ್ಕೆ ಪ್ರಸ್ತುತ  ಸಾಕ್ಷಿ ಆಗಿದೆ.
 
ಅವರು ಮಾಡುವ ಪ್ರಾಮಾಣಿಕ ಪ್ರಯತ್ನ ಈ ಯಶಸ್ಸಿಗೆ ಕಾರಣ ಎಂದು ಹೇಳ ಬಹುದಾಗಿದೆ. ರಾಜ ಮೌಳಿ ಅವರು ಈಗ ಕನ್ನಡ ಕಾದಂಬರಿಯನ್ನು ಆಧರಿಸಿ ಚಿತ್ರ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಡಿದೆ. ಆದರೆ ಈ ಬಗ್ಗೆ ಮಾತನಾಡಿದ ನಿರ್ದೇಶಕ ರಾಜಮೌಳಿ ತನಗೆ ಸಧ್ಯಕ್ಕೆ ಅಂತಹ ಯಾವ ಪ್ಲಾನ್ ಇಲ್ಲ ಎಂದು ಹೇಳಿದ್ದಾರೆ. 
 
ತಾನು ಮುಂದಿನ ಯೋಜನೆ ಕೈಗೊಳ್ಳುವುದು ತನ್ನ ಬಹು ನಿರೀಕ್ಷಿತ ಚಿತ್ರ ಬಾಬುಬಲಿ ಬಿಡುಗಡೆ ಬಳಿಕ ಎಂದು ಹೇಳಿದ್ದಾರೆ. ಅದರ ಬಗ್ಗೆ ತನ್ನ ಗಮನ ಕೇಂದ್ರೀಕೃತವಾಗಿದೆ ಎಂದು ಹೇಳಿದ್ದಾರೆ. ರಾಜಮೌಳಿ ಅವರು ಕನ್ನಡ ಪ್ರಸಿದ್ಧ ಕಾದಂಬರಿಕಾರ ಎಸ್. ಎಲ್. ಭೈರಪ್ಪನವರ ಪರ್ವ ಕಾದಂಬರಿಯನ್ನು ಸಿನಿಮಾ  ಮಾಡುತ್ತಾರೆ ಎನ್ನುವ ಸುದ್ದಿ ಹರಡಿತ್ತು. ಆದರೆ ಈ ಸುದ್ದಿಯನ್ನು ರಾಜಮೌಳಿ ಸಮ್ಮತಿಸಿಲ್ಲ. 
 

Share this Story:

Follow Webdunia kannada