Select Your Language

Notifications

webdunia
webdunia
webdunia
webdunia

ಮುಂಬೈನಿಂದ ದೆಹಲಿಗೆ ರಣಬೀರ್ ದೀಪಿಕಾ ರೈಲು ಪ್ರಯಾಣ

ಮುಂಬೈನಿಂದ ದೆಹಲಿಗೆ ರಣಬೀರ್ ದೀಪಿಕಾ ರೈಲು ಪ್ರಯಾಣ
, ಸೋಮವಾರ, 23 ನವೆಂಬರ್ 2015 (10:42 IST)
ರಣ್ ಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ತಮಾಷಾ ಸಿನಿಮಾ ಮುಂದಿನ ತಿಂಗಳು ರಿಲೀಸ್ ಆಗುತ್ತಿದೆ. ಹಾಗಾಗಿ ಸಿನಿಮಾ ತಂಡ ಚಿತ್ರದ ಪ್ರಮೋಷನಲ್ ಕೆಲಸದಲ್ಲಿ ತೊಡಗಿದೆ. ಕಳೆದ ಕೆಲ ದಿನಗಳಿಂದ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿರುವ ರಣ್ ಬೀರ್ ಹಾಗೂ ದೀಪಿಕಾ ಪಡುಕೋಣೆ ಸಿನಿಮಾಗಾಗಿ ರೈಲು ಪ್ರಯಾಣ ಕೈಗೊಂಡಿದ್ದಾರೆ.

ನಿರ್ದೇಶಕ ಇಮ್ತಿಯಾಜ್ ಅಲಿ ಜೊತೆ ದಿಪ್ಪಿ ಹಾಗೂ ರಣ್ ಬೀರ್ ಮುಂಬೈ ನಿಂದ ದೆಹಲಿಯವರೆಗೆ ರೈಲಿನಲ್ಲಿ ಪ್ರಯಾಣಿಸಿ ಸಿನಿಮಾದ ಪ್ರಮೋಷನ್ ಮಾಡಿದ್ದಾರೆ. ಸುವೀಧಾ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದ ತಂಡ ವಡೋದರಾ,ಕೋಟಾದ ಮೂಲಕ ದೆಹಲಿಗೆ ಪ್ರಯಾಣಿಸಿದ್ದಾರೆ. ಇನ್ನು ರಣ್ ಬೀರ್ ಹಾಗೂ ದೀಪಿಕಾ ರೈಲು ಮೂಲಕ ಪ್ರಯಾಣಿಸಿ ಪ್ರಮೋಷನ್ ನಡೆಸುತ್ತಿರೋದು ಇದೇ ಮೊದಲಲ್ಲ. ಈ ಹಿಂದೆ 2013ರಲ್ಲಿ ತಮ್ಮ ಯೇ ಜವಾನಿ ಹೇ ದಿವಾನಿ ಸಿನಿಮಾದ ಪ್ರಮೋಷನ್ ಗಾಗಿ ಇದೇ ರೀತಿ ಮಾಡಿದ್ದರು. ಸಿನಿಮಾ ಹಿಟ್ ಆಗಿತ್ತು.
 
ಇನ್ನು ಈ ಜರ್ನಿಯ ಬಗ್ಗೆ ಪ್ರತಿಕ್ರಿಯಿಸಿರುವ ದೀಪಿಕಾ  ನಾನು ತುಂಬಾ ಎಕ್ಸೈಟ್ ಆಗಿದ್ದೆ. ನಾನು ರೈಲಿನಲ್ಲಿ ಪ್ರಯಾಣಿಸಿದ್ದಕ್ಕೆ ಕಾರಣ ರಣ್ ಬೀರ್ ನನಗೆ ರೈಲಿನಲ್ಲಿ ಪ್ರಯಾಣಿಸಬೇಕೆಂದಿತ್ತು. ರಣ್ ಬೀರ್ ಗೆ ಹೇಳಿದಾಗ ಒಪ್ಪಿಕೊಂಡ್ರು. ಅಲ್ದೇ ರಣ್ ಬೀರ್ ಕೂಡ ನಾವು ದೀಪಿಕಾ ಹೇಳಿದಾಗ ಅವಳಿಗೋಸ್ಕರ ಫ್ಲೈಟ್ ಟಿಕೆಟ್ ಕ್ಯಾನ್ಸಲ್ ಮಾಡಿ ರೈಲಿನಲ್ಲಿ ಪ್ರಯಾಣಿಸಿದೆವು ಅಂದಿದ್ದಾರೆ.

Share this Story:

Follow Webdunia kannada